ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಶುರಾಮಾವತಾರದ ಕಥೆ 255 Kಳ್ಳುವ ದುಷ್ಟ ಸೇವಕನಿಗೆ ಅವನ ಕೊಬ್ಬಡಗುವಂತೆ ಶಿಕ್ಷೆ ಮಾಡಿ ವಿಧೇಯತೆಯಿ೦ದ ನಡೆದು ತನಗೂ ತನ್ನ ಸ್ವಾಮಿಗೂ ಮೇಲನ್ನುಂಟುಮಾಡಿಕೊಳ್ಳುವಂತೆ ಮಾಡಿಕೊಂಡು ತಿರಿಗಿ ತನ್ನಲ್ಲಿ ಸೇರಿಕೊಂಡರೆ ಪ್ರಭುತ್ವವು ಚೆನ್ನಾಗಿ ನಡೆದು ರಾಜಪ್ರಜಾಸು ಐಸಮ್ಮತಿ ಗಳುಂಟಾಗುವವು. ಹಾಗೆ ಮಾಡದೆ ಔದಾಸೀನ್ಯದಿಂದಿದ್ದರೆ ಆತನ ಪ್ರಭುತ್ವವೇ ಕ್ಷೀಣವಾಗಿ ಹೋಗುವುದು ಎಂದು ತನ್ನ ಮನಸ್ಸಿನಲ್ಲಿ ಆಲೋಚಿಸಿ ಆ ಸುದ ರ್ಶನವನ್ನು ಕುರಿತು-ಎಲೈ ಮಹಾಬಲಸಂಪನ್ನನಾದ ಚಕ್ರರಾಜನೇ ! ನಾನು ಸಮಸ್ತ ದೈತ್ಯರನ್ನೂ ಸಂಹರಿಸುವುದು ನಿನ್ನ ಶಕ್ತಿಯಿಂದಲೊ ? ಅಥವಾ ನನ್ನ ಶಕ್ತಿ ಯಿಂದಲೊ ಎಂದು ನನ್ನ ಮನಸ್ಸಿನಲ್ಲಿ ಒಂದು ವಿಧವಾದ ಸಂಶಯ ಉಂಟಾಗಿದೆ. ಅದು ಕಾರಣ ಈ ವಿಷಯವನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕೆಂದು ನನಗೆ ಸಂಪೂರ್ಣ ಕುತೂಹಲವುಂಟು. ಆದುದರಿಂದ ನೀನು ನಿನ್ನ ಸಾವಿರ ಅರಗಳನ್ನೂ ಸಾವಿರ ತೋಳು ಗಳನ್ನಾಗಿ ಮಾಡಿಕೊಂಡು ಹೇಹಯ ದೇಶದ ಅರಸಾದ ಕೃತವೀರ್ಯನ ಪಟ್ಟದರಸಿಯ ಗರ್ಭದಲ್ಲಿ ಜನಿಸಿ ಲೋಕದಲ್ಲಿ ಮಹಾ ಪರಾಕ್ರಮಶಾಲಿಯಾಗಿ ಚಕ್ರವರ್ತಿಯೆನ್ನಿಸಿ ಕೊಂಡು ಮಹೋನ್ನತನಾಗಿ ಕ್ಷತ್ರಿಯ ಸಾರ್ವಭೌಮನ ಸಿಕೊಂಡು ಸುಖದಿಂದಿರು. ಅನಂತರದಲ್ಲಿ ನಾನು ಎರಡು ತೋಳುಗಳಿಂದ ಒಬ್ಬ ಮುನಿಗೆ ಮಗನಾಗಿ ಹುಟ್ಟಿ ಯಾವುದೋ ಒಂದು ಕಾರಣದಿಂದ ನಿನ್ನೊಡನೆ ವಿರೋಧವನ್ನು ಬೆಳಿಸಿ ಯುದ್ಧಕ್ಕೆ ಬರುವೆನು. ಆ ಯುದ್ಧರಂಗದಲ್ಲಿ ಹೆಣಗುವ ನಮ್ಮಿಬ್ಬರಲ್ಲಿ ಯಾರಿಗೆ ಜಯವುಂಟಾಗು. ವುದೋ ಆತನೇ ಶಕ್ಕನೆಂದು ತಿಳಿಯಬರುವುದು. ಆಗ ನನ್ನ ಮನಸ್ಸಿನ ಸಂಶಯವು ನಿವಾರಣೆಯಾಗಿ ಸಮಾಧಾನವುಂಟಾಗುವುದೆಂದು ಹೇಳಿದನು. ಆ ಮಾತುಗಳನ್ನು ಕೇಳಿ ಚಕ್ರರಾಜನು ನನ್ನ ಯೋಚನೆಯಂತೆಯೇ ಈತನೂ ಹೇಳಿದನೆಂದು ಬಹಳವಾಗಿ ಸಂತೋಷಿಸಿ ಹೆಮ್ಮೆಯಿಂದ ಕೂಡಿ ವಿಷ್ಣು ವಿನೊಡನೆ ಹಾಗೆಯೇ ಆಗಲೆಂದು ಹೇಳಿ ವೈಕುಂಠದಿಂದ ಹೊರಟು ಮಾಹಿಷ್ಮತೀನಗರದ ಅರಸ ನಾದ ಕೃತವೀರ್ಯನ ಧರ್ಮಪತ್ನಿ ಯ ಗರ್ಭವನ್ನು ಪ್ರವೇಶಿಸಿ ತರುವಾಯ ಸಾವಿರ ತೋಳುಗಳುಳ್ಳ ಮಗನಾಗಿ ಹುಟ್ಟಿ ಕಾರ್ತವೀರ್ಯಾರ್ಜುನನೆಂಬ ಪ್ರಖ್ಯಾತಿಯನ್ನು ಹೊಂದಿ ಸಕಲ ವಿದ್ಯಾಬುದ್ದಿಗಳನ್ನೂ ಕಲಿತು ಪ್ರಾಯದವನಾಗಿ ತಂದೆಯ ಅಪ್ಪಣೆಯ ನ್ನು ತೆಗೆದು ಕೊಂಡು ಹೊರಟು ಸಕಲದಿದ್ದೇಶಗಳನ್ನೂ ಇಂದ್ರಾದಿ ದಿಕ್ಷಾಲಕರನ್ನೂ ಯುದ್ಧರಂಗದಲ್ಲಿ ಜಯಿಸಿ ಅವರೆಲ್ಲರಿಂದ ಕಪ್ಪಗಳನ್ನು ತೆಗೆದು ಕೊಂಡು ನಿರ್ವೈರಿ ಯಾಗಿ ತಿರಿಗಿ ತನ್ನ ಪಟ್ಟಣಕ್ಕೆ ಬಂದು ತಂದೆಗೆ ನಮಸ್ಕರಿಸಿ ತಾನು ಹೋದಂದಿನಿಂದ ನಡೆದ ಸಕಲ ವೃತ್ತಾಂತವನ್ನೂ ಆತನಿಗೆ ತಿಳಿಸಲು ಆತನು ಮಹಾಸಂತೋಷದಿಂದ ಕೂಡಿದವನಾಗಿ ಕಾರ್ತವೀರ್ಯಾರ್ಜುನನನ್ನು ತೆಗೆದು ಆಲಿಂಗಿಸಿಕೊಂಡು ಆನಂದ ಪಟ್ಟನು. ಅನಂತರದಲ್ಲಿ ಕೃತವೀರ್ಯನು ತನ್ನ ಮಗನಿಗೆ ಹೇಹಯರಾಜ್ಯಾಭಿಷೇಕ ವನ್ನು ಮಾಡಿ ತಾನು ತನ್ನ ಧರ್ಮಪತ್ನಿಯೊಡನೆ ಕೂಡಿ ಪುಣ್ಯಾರಣ್ಯವನ್ನು ಕುರಿತು ತಪಸ್ಸಿಗೆ ಹೊರಟುಹೋದನು. ಆ ಮೇಲೆ ಕಾರ್ತವೀರ್ಯಾರ್ಜುನನು ಕೃತಯುಗಕ್ಕೆ ಚಕ್ರವರ್ತಿಯೆನ್ನಿಸಿಕೊಂಡು ಜಗದೇಕವೀರನಾದ ರಾವಣಾಸುರನನ್ನು ಜಯಿಸಿ ಲೋಕೈ ಕವಿಖ್ಯಾತನಾಗಿದ್ದನು.