ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಶುರಾಮಾವತಾರದ ಕಥೆ 259 ಅಲ್ಲಿರುವ ಆನೆ ಒಂಟೆ ಕುದುರೆ ಎತ್ತು ದನ ಕರು ಮೊದಲಾದ ಸಮಸ್ತ ಪಶುಪ್ರಾಣಿಗಳಿ ಗೂ ವಿವಿಧ ಭೋಗ್ಯ ಪದಾರ್ಥಾಪೇಕ್ಷಿಗಳಾದ ರಾಜಸೇನಾಜನಗಳಿಗೂ ಅಗತ್ಯವಾದ ಪದಾರ್ಥಗಳನ್ನು ಯಥೇಚ್ಛವಾಗಿ ಒದಗಿಸಿಕೊಟ್ಟು ಅವರವರ ಇಷ್ಟ ದಂತೆ ಸೇವೆಮಾ ಡುವದಕ್ಕೆ ಅಸಂಖ್ಯಾತ ದಾಸ ದಾಸೀಜನರನ್ನೂ ಉಂಟುಮಾಡಿ ಕಾರ್ತವೀರ್ಯಾರ್ಜು ನನಿಗೂ ಆತನ ಸಂಗಡ ಬಂದಿದ್ದ ಸಾಮಂತರಾಜಮಂಡಲಿಗೂ ವಾಚಾತೀತವಾದ ರಾಜೋಪಚಾರಗಳಿಂದ ತೃಪ್ತಿ ಪಡಿಸಿ ಸರ್ವರೂ ಸಂತೋಷಪಟ್ಟುದನ್ನು ತಿಳಿದು ಅಲ್ಲಿಂದ ಮುನಿಯ ಬಳಿಗೆ ಬಂದು ತಾನು ನಡಿಸಿದ ವಿದ್ಯಮಾನವನ್ನೆಲ್ಲಾ ಯಥಾವತ್ತಾಗಿ ತಿಳಿಸಿ ಅವರ ಸನ್ನಿಧಿಯಲ್ಲಿ ಇರುತ್ತಿದ್ದಿತು. ತರುವಾಯ ಸರ್ವೋಪಚಾರಗಳಿಂದ ಸಂತೃಪ್ತನಾದ ಕಾರ್ತವೀರ್ಯಾರ್ಜುನನು ಸಂತೋಷದಿಂದ ಕುಳಿತುಕೊಂಡು ಅರಣ್ಯವಾಸಿಯಾದ ಒಬ್ಬ ಮುನಿಯು ನಮ್ಮ ಈ ಅಪಾರವಾದ ಸೇನೆಗೆಲ್ಲಾ ಸಂತೃಪ್ತಿಯುಂಟಾಗುವಂತೆ ವಿವಿಧವಾದ ರಾಜೋಪಚಾರ ಗಳನ್ನು ಮಾಡಿಸಿದನಲ್ಲಾ ! ಲೋಕದಲ್ಲಿ ಯಾವ ಸಾಮಾ ಜ್ಞಾಧಿಪತಿಯಾದರೂ ಮಾಡಿಸಬಲ್ಲ ನೇ ! ಎಂದಿಗೂ ಮಾಡಿಸಲಾರನು. ಇದೆಲ್ಲಾ ಆ ಧೇನುವಿನ ಸಾಮ ರ್ಥ್ಯವು. ನಾನು ಅದನ್ನು ತೆಗೆದು ಕೊಂಡು ಹೋದರೆ ನನ್ನ ಚಕ್ರವರ್ತಿತವು ಲೋಕ ದಲ್ಲಿ ಬಹಳ ಪ್ರಸಿದ್ಧವಾಗುವುದು ಎಂದೆಣಿಸಿ ಕೂಡಲೆ ಜಮದಗ್ನಿಯ ಬಳಿಗೆ ಬಂದು --ಎಲೆ ಮುನಿಯೇ! ಈಗ ನೀನು ಮಾಡಿಸಿದ ಸತ್ಕಾರದಿಂದ ನನ್ನ ಪರಿವಾರಗಳೊ ಡನೆ ನಾನೂ ಸಂತುಷನಾದೆನು, ಇಂಥ ರಾಜೋಪಚಾರವು ನನ್ನ ಅರಮನೆಯಲ್ಲೂ ದುರ್ಲಭವೆಂದು ಯೋಚಿಸುತ್ತೇನೆ. ಮತ್ತು ಆಶ್ಚರ್ಯಪಡುತ್ತೇನೆ. ಆದರೆ ಈ ಭಾಗ ದಲ್ಲಿ ನನ್ನ ದೊಂದು ಮಾತಿರುವುದು. ಅದೇನಂದರೆ, ನಿರಂತವಾಗಿ ನಿನ್ನ ಬಳಿಯಲ್ಲಿ ದ್ದು ಕೊಂಡು ನೀನು ಹೇಳಿದಂತೆ ಸಕಲಾಭೀಷ್ಟ ವಸ್ತುಗಳನ್ನೂ ಉಂಟುಮಾಡುತ್ತಿರುವ ಈ ಕಾಮಧೇನುವನ್ನು ನನಗೆ ಕೊಡಬೇಕು. ಇದಕ್ಕೆ ಬದಲಾಗಿ ನೀನು ಅಪೇಕ್ಷಿಸಿ ದಷ್ಟು ಧನಕನಕ ವಸ್ತ್ರಾಭರಣ ದೇಶಕೋಶಗಳನ್ನು ಕೊಡುವೆನು ಎನ್ನಲು ಆಗ ಜಮ ದಗ್ನಿ ಯು ಕಾರ್ತವೀರ್ಯಾರ್ಜುನನನ್ನು ಕುರಿತು ಇದನ್ನು ಯಾರಿಗಾದರೂ ಕೊಡುವುದಕ್ಕೆ ನಾನು ಬಾಧ್ಯನಲ್ಲ. ಇದು ಮಹಾತಪಸ್ವಿಗಳಾದ ಮುನಿಗಳು ಮಾಡ ತಕ್ಕ ಯಜ್ಞಯವಾದ ಕರ್ಮಗಳಿಗೆ ಅಗತ್ಯವಾದ ಹಾಲು ಮೊಸರು ಬೆಣ್ಣೆ ತುಪ್ಪ ಮೊದಲಾದ ವಸ್ತುಗಳನ್ನು ಒದಗಿಸಿಕೊಡುವುದಕ್ಕಾಗಿ ದೇವೇಂದ್ರನ ಅಪ್ಪಣೆಯಿಂದ ಈ ರೀತಿಯಾಗಿದ್ದು ಕೊಂಡು ಮುನಿಜನಗಳ ಸೇವೆಯನ್ನು ಮಾಡುತ್ತಿರುವುದು ಎನ್ನಲು ಕಾರ್ತವೀರ್ಯಾರ್ಜುನನು.ಆಗಲಿ, ಇದನ್ನು ಕೊಡುವುದಕ್ಕೆ ನಿನಗೆ ಸಾಮರ್ಥ್ಯವಿಲ್ಲದಿದ್ದರೆ ನಾನೇ ಹಿಡಿದುಕೊಂಡು ಹೋಗುವೆನು ಎಂದು ಹೇಳಿ ಬಲಾ ತ್ಯಾರದಿಂದ ಆ ಸುರಭಿಯನ್ನು ಹಿಡಿದು ಕೊಂಡು ತನ್ನ ಪಟ್ಟಣಕ್ಕೆ ತೆಗೆದುಕೊಂಡು ಹೋದನು. ಇತ್ತ ಯಜ್ಞಕರ್ಮ ಸಾಧನವಾದ ಸಮಿದ್ದರ್ಭಗಳನ್ನು ತೆಗೆದು ಕೊಂಡು ಬರು ವುದಕ್ಕೋಸ್ಕರ ಅರಣ್ಯಕ್ಕೆ ಹೋಗಿದ್ದ ಪರಶುರಾಮನು ಸಮಿದ್ದರ್ಭಗಳನ್ನೂ ಗೋಗ್ರಾ