ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

262 ಕಥಾಸಂಗ್ರಹ-೫ ನೆಯ ಭಾಗ ಘೋರ ಯುದ್ಧವನ್ನು ಮಾಡಿ ಕಡೆಗೆ ಮಹಾ ಶೂರನಾದ ಪರಶುರಾಮನ ಕೊಡಲಿ ಯಿಂದ ಕಡಿಯಲ್ಪಟ್ಟ ತೋಳು ತಲೆಗಳುಳ್ಳವನಾಗಿ ನೆಲದಲ್ಲಿ ಒರಗಿ ಪಾಣಗಳನ್ನು ಬಿಟ್ಟನು. ಅದನ್ನು ನೋಡಿ ಆ ನಗರದ ಜನರೆಲ್ಲರೂ ಭಯದಿಂದ ಗಾಬರಿಯಾಗಿ ದಿಕ್ಕುದಿಕ್ಕಿಗೆ ಓಡಿಹೋದರು. ತರುವಾಯ ಶೂರಕುಲತಿಲಕನಾದ ಪರಶುರಾಮನು ಕಾರ್ತವೀರ್ಯಾರ್ಜುನನ ಅರಮನೆಯನ್ನು ಹೊಕ್ಕು ಅಲ್ಲಿ ಕಟ್ಟಿ ರುವ ತನ್ನ ಹೋಮ ಧೇನುವನ್ನು ನೋಡಿ ಅದರ ಮೈಯನ್ನೆಲ್ಲಾ ತುರಿಸಿ ಗೊಂತಿನಿಂದ ಬಿಚ್ಚಿ ತನ್ನ ಆಶ್ರ ಮಕ್ಕೆ ಹೊರಟುಬಂದನು. ಆ ಧೇನವೂ ಅವನೊಡನೆಯೇ ಆಶ್ರಮಕ್ಕೆ ಬಂದಿತು. ಅದನ್ನು ನೋಡಿ ಜಮದಗ್ನಿ ಯು ಪರಮಸಂತೋಷಯುಕ್ತನಾಗಿ ತನ್ನ ಮಗನನ್ನೂ ಆ ಧೇನುವನ್ನೂ ಬೇರೆ ಬೇರೆಯಾಗಿ ಆಲಿಂಗಿಸಿಕೊಂಡು ಮುದ್ದಿಸಿ ನಲಿದಾಡಿದನು. ಅನಂತರದಲ್ಲಿ ಇತ್ಯ ಮಾಹಿಷ್ಮತೀ ಪಟ್ಟಣದಲ್ಲಿ ಕಾರ್ತವೀರ್ಯಾರ್ಜುನನ ಮಕ್ಕಳು ತಂದೆಯು ಸತ್ತು ಹೋದುದರಿಂದ ಬಹಳ ವ್ಯಸನಾಕಾಂತರಾಗಿ ಒಬ್ಬ ಬ್ರಹ್ಮಚಾರಿಯಾದ ಹುಡುಗನು ಬಂದು ದಿಗ್ವಿಜಯವನ್ನು ಮಾಡಿದ ಮಹಾಶೂರನೂ ಚಕ್ರವರ್ತಿಯೂ ಆದ ನಮ್ಮ ತಂದೆಯನ್ನು ಕೊಂದುಹಾಕಿದನಲ್ಲಾ ! ಅವನ ಪರಾಕ್ರ ಮವನ್ನು ಎಷ್ಟೆಂದು ಹೇಳೋಣ ! ಆದರೂ ಕ್ಷತ್ರಿಯರಾದ ನಾವು ವೈರನಿರ್ಯಾತ ನಾರ್ಥವಾಗಿ ಹೋಗಿ ಆತನ ತಂದೆಯನ್ನು ಕೊಂದುಹಾಕಿದ ಹೊರತು ನಮ್ಮ ದುಃಖವು ತೀರುವುದಿಲ್ಲ. ನಾವು ಈ ಕೆಲಸವನ್ನು ಮಾಡುವುದು ಆ ದುಷ್ಟನಾದ ಪರಶುರಾಮನು ಆಶ್ರಮದಲ್ಲಿರುವ ಕಾಲದಲ್ಲಿ ಎಂದಿಗೂ ಸಾಧ್ಯವಾಗುವುದಿಲ್ಲ. ಅವನು ಮಹಾದುಷ್ಕನು. ನಾವು ಈ ರೀತಿಯಾಗಿ ಮಾಡಿದ ಯೋಚನೆಯು ಸ್ವಲ್ಪಮ ಟ್ಟಿಗೆ ತಿಳಿದಾಗ್ಯೂ ಕೂಡಲೆ ಆ ಪರಶುರಾಮನು ಬಂದು ನಮ್ಮನ್ನು ಮೂಲೋತ್ಪಾ ಟನ ಮಾಡದೆ ಬಿಡುವುದಿಲ್ಲ. ನಾವು ರಹಸ್ಯದಿಂದ ಅವನ ತಂದೆಯನ್ನು ಕೊಂದುಹಾ ಕಿದ ಮೇಲೆ ಆ ಪರಶುರಾಮನು ಬಂದು ನಮ್ಮನ್ನು ಕೊಂದುಹಾಕಿದರೂ ಹಾಕಲಿ ಎಂದು ತಮ್ಮ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಕೂಡಲೆ ಜಮದಗ್ನಿಯ ಆಶ್ರಮಕ್ಕೆ ಬಂದು ಪರಶುರಾಮನು ಆಶ್ರಮವನ್ನು ಬಿಟ್ಟು ಹೊರಗೆ ಹೋಗುವ ವರೆಗೂ ಒಂದು ಸ್ಥಳದಲ್ಲಿ ರಹಸ್ಯವಾಗಿ ಅವಿತು ಕೊಂಡಿದ್ದು ಒಂದು ದಿವಸ ಅವನು ಗೋಗ್ರಾಸಾರ್ಥ ವಾಗಿ ಕಾಡಿಗೆ ಹೋದುದನ್ನು ತಿಳಿದು ಜಮದಗ್ನಿಯ ಪರ್ಣಶಾಲೆಯನ್ನು ಹೊಕ್ಕು ಕಣ್ಣುಗಳನ್ನು ಮುಚ್ಚಿ ಕೊಂಡು ಯೋಗಧ್ಯಾನಾಸಕ್ತನಾಗಿದ್ದ ಜಮದಗ್ನಿ ಯ ತಲೆ ಯನ್ನು ಕತ್ತಿಯಿಂದ ಕಡಿದು ಕೆಡಹಿ ಓಡಿಹೋದರು. ಆ ತರುವಾಯ ರಾಮನು ಎಂದಿನಂತೆ ಗೋಗ್ರಾಸವನ್ನು ತೆಗೆದುಕೊಂಡು ಆಶ್ರ ಮಕ್ಕೆ ಬಂದು ಮಹಾ ದುಃಖಸಾಗರದಲ್ಲಿ ಮುಳುಗಿ ಗಟ್ಟಿ ಯಾಗಿ ರೋದಿಸುತ್ತಿರುವ ತಾಯಿ ಮೊದಲಾದುವರನ್ನು ಕಂಡು ಭಯಾಶ ರ್ಯಗ್ರಸ್ಥನಾಗಿ ಕಡೆಗೆ ದುರಾ ತರಾದ ಕಾರ್ತವೀರ್ಯಾರ್ಜುನನ ಮಕ್ಕಳು ಮಾಡಿದ ದುಷ್ಕೃತ್ಯವೆಂದು ತಿಳಿದು ಅಕಟಕಟಾ! ಈ ಭೂಲೋಕದಲ್ಲಿ ದುರಾತ್ಮರಾದ ಕ್ಷತ್ರಿಯರು ಕರ್ತವ್ಯಾ ಕರ್ತವ್ಯಗ ಳನ್ನು ತಿಳಿಯದೆ ಉನ್ಮತ್ತರಾಗಿ ಸಜ್ಜನರನ್ನು ಬಹಳವಾಗಿ ಬಾಧಿಸುತ್ತಿದ್ದಾರೆ. ಈ