ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

264 264 ಕಥಾಸಂಗ್ರಹ-೫ ನೆಯ ಭಾಗ 7, THE EIGHTH OR KRISHNA INCARNATION. ೭. ಕೃಷ್ಣಾವತಾರದ ಕಥೆ, ದ್ವಾಪರಯುಗದಲ್ಲಿ ದುಷ್ಟರಾದ ದಾನವರೂ ದೈತ್ಯರೂ ಧರಣಿಪಾಲಕರೂ ಹೆಚಿ ಪಾಪವು ಬಹಳವಾದುದರಿಂದ ಭೂದೇವಿಯು ಆ ಭಾರವನ್ನು ಸಹಿಸಲಾರದೆ ತನ್ನನ್ನು ಸೃಷ್ಟಿಸಿದ ಚತುರ್ಮುಖಬ್ರಹ್ಮನ ಬಳಿಗೆ ಬಂದು ಆತನಿಗೆ ನಮಸ್ಕರಿಸಿಎಲೆ ಸೃಷ್ಟಿಕರ್ತನೇ ! ಈಗ ಅನೇಕ ದುಷ್ಟರು ಹುಟ್ಟಿ ದುರ್ಮಾರ್ಗಪ್ರವರ್ತಕರಾ ಗಿದ್ದಾರೆ. ನಾನು ಅವರ ಭಾರವನ್ನು ಸಹಿಸಲಾರೆನು. “ಅದು ಕಾರಣ ಲೋಕರಕ ಕ ನಾದ ನೀನು ಅವರನ್ನು ಸಂಹರಿಸಿ ನನಗೆ ಭಾರವು ತಪ್ಪುವ ಹಾಗೆ ಮಾಡಬೇಕೆಂದು ಬೇಡಿಕೊಳ್ಳಲು ಬ್ರಹ್ಮನು ಆ ಭೂದೇವಿಯನ್ನು ಸಂಗಡ ಕರೆದು ಕೊಂಡು ಸಕಲ ದೇವಗಣಸಮೇತನಾಗಿ ಹೊರಟು ಕ್ಷೀರಸಮುದ್ರವನ್ನು ಸೇರಿ ಅಲ್ಲಿ ಮಹಾವಿಷ್ಣು ವನ್ನು ಅನೇಕ ವಿಧವಾಗಿ ಸ್ತುತಿಸಿ ದುಷ್ಟರಿಂದ ಧರಣಿಗೆ ಉಂಟಾಗಿರುವ ಭಾರ ವನ್ನು ಪರಿಹರಿಸಿ ಕಾಪಾಡಬೇಕೆಂದು ಬೇಡಿಕೊಂಡನು. ಆಗ ಗರುಡಾರೂಢನಾದ ಶ್ರೀ ಮಹಾವಿಷ್ಣುವು ಬ್ರಹ್ಮಾದಿಗಳಿಗೆ ಪ್ರತ್ಯಕ್ಷ ನಾಗಿ ಮುಗುಳ್ಳಗೆಯಿಂದ ಕೂಡಿ ಆ ಸರೋಜಸಂಭವನನ್ನು ಕುರಿತು ಎಲೆ ಕಮಲಜನೇ ! ನಾನು ಕೃತಯುಗದಲ್ಲಿ ಅನೇಕಾವತಾರಗಳನ್ನು ಮಾಡಿ ಕೊಂದುಹಾಕಿದಂಥ ದೈತ್ಯ ದಾನವರೂ ತ್ರೇತಾಯುಗದಲ್ಲಿ ಸಂಹರಿಸಿದ ದೈತ್ಯರೂ ಈ ಕಲಿಯುಗದಲ್ಲಿ ತಿರಿಗಿ ಹುಟ್ಟಿ ಭೂಭಾರಕರಾಗಿರುವುದನ್ನು ಬಲ್ಲೆನು. ಈ ವಿಷಯದಲ್ಲಿ ನಾನು ನಿಮಗೆ ಹೇಳು ವೆನು ಕೇಳಿರಿ. ಕಾಲನೇಮಿಯೆಂಬ ದೈತ್ಯನು ಕಂಸಾಸುರನಾಗಿಯೂ ವರಾಹಾವ ತಾರದಲ್ಲಿ ನನ್ನ ಸಂಬಂಧದಿಂದ ಭೂಮಿಗೆ ಉಂಟಾದ ಮಗನು ನರಕಾಸುರನಾ ಗಿಯ ಕುಂಭಕರ್ಣನು ದಂತವಕ್ರನಾಗಿಯ ರಾವಣನು ಶಿಶುಪಾಲನಾಗಿಯ ಪೂರ್ವದಲ್ಲಿ ನಾನು ರಸಾತಲಕ್ಕೆ ಮೆಟ್ಟಿದ್ದ ಬಲಿಚಕ್ರವರ್ತಿಯ ಮಗನು ಬಾಣಾ ಸುರನಾಗಿಯ ಇನ್ನೂ ಅನೇಕರಾದ ದೈತ್ಯರು ಸಾಲ್ವ ಮಗಧಾದಿ ದುಷ್ಟರಾ ಗಿಯ ಹುಟ್ಟಿರುವರು. ದ್ವಾದಶಾದಿತ್ಯರ ತಾಯಿತಂದೆಗಳಾದ ದಿತಿಯ ಕಶ್ಯಪ ನೂ ವರುಣನ ಶಾಪದಿಂದ ವಸುದೇವನೆಂದೂ ದೇವಕೀದೇವಿಯೆಂದೂ ಭೂಲೋಕ ದಲ್ಲಿ ಹುಟ್ಟಿ ಗಂಡಹೆಂಡಿರಾಗಿರುವರು. ನಾನು ಮೊದಲು ನಿಮಗೆ ಮಗನಾಗಿ ಹುಟ್ಟು ವೆನೆಂದು ಅವರಿಗೆ ವರವನ್ನು ಕೊಟ್ಟಿರುವೆನು. ಅದೇ ಪ್ರಕಾರ ನಾನು ಅವರಿಗೆ ಮಗನಾಗಿ ಹುಟ್ಟಿ ಕಂಸಾದಿ ದುಷ್ಟರನ್ನು ಕೊಲ್ಲುವೆನು. ನೀವೆಲ್ಲರೂ ದೇವತೆಗಳ ಅಂಶದಿಂದ ನನಗೆ ಸಹಾಯಕರಾಗಿ ಹುಟ್ಟಿರಿ ಎಂದು ಹೇಳಿ ಅಭಯವನ್ನು ಕೊಟ್ಟು ಕಳುಹಿಸಲು ಅವರೆಲ್ಲರೂ ಅಲ್ಲಿಂದ ಹೊರಟು ತಮ್ಮ ತಮ್ಮ ಲೋಕಗಳಿಗೆ ತೆರಳಿದರು. ಇತ್ತಲು ಆರ್ಯಾವರ್ತವೆಂಬ ಪುಣ್ಯ ದೇಶದಲ್ಲಿ ಪ್ರಸಿದ್ಧವಾದ ಮಧುರಾ ಪಟ್ಟ ಣದಲ್ಲಿ ಧರ್ಮದಿಂದ ರಾಜ್ಯಭಾರವನ್ನು ಮಾಡುತಿದ್ದ ಯದುವಂಶೋತ್ಪನ್ನ ನಾದ