ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಾವತಾರದ ಕಥೆ 265 ಉಗ್ರಸೇನನೆಂಬ ರಾಜನಿಗೆ ಕ್ಷೀರಸಮುದ್ರದಲ್ಲಿ ವಿಷವು ಹುಟ್ಟಿದಂತೆ ಕಂಸನೆಂಬ ಒಬ್ಬ ದುಷ್ಟನಾದ ಮಗನು ಹುಟ್ಟಿ, ಯೌವನವನ್ನು ಹೊಂದಿ ಮಹಾ ಪರಾಕ್ರಮಶಾ ಲಿಯಾಗಿ ಕೇವಲ ದುರ್ಮಾರ್ಗಿಯಾದುದರಿಂದ ತಂದೆಯಾದ ಉಗ್ರಸೇನನನ್ನು ನಿರ್ಬ೦ ಧಿಸಿ ತಾನೇ ರಾಜ್ಯಭಾರವನ್ನು ಮಾಡುತ್ತಾ ದುಷ್ಟರಿಗೆ ಸಂತೋಷದಾಯಕನಾಗಿಯ ಸತ್ಪುರುಷರಿಗೆ ಎದೆಯು ಶೂಲಪಾಯನಾಗಿಯೂ ಇರುತ್ಯ ದೇವಕೀದೇವಿಯೆಂಬ ತನ್ನ ತಂಗಿಯು ಪ್ರಾಯದವಳಾದುದನ್ನು ನೋಡಿ ಆಕೆಯನ್ನು ವಸುದೇವನೆಂ ಬವನಿಗೆ ಕೊಟ್ಟು ಅತಿಸಂಭ್ರಮದಿಂದ ವಿವಾಹವನ್ನು ಮಾಡಿ ನಾಕಬಲಿಯ ದಿವಸ ಆ ವಧೂವರರನ್ನು ದಿವ್ಯರಥದ ಮೇಲೆ ಕುಳ್ಳಿರಿಸಿ ತಾನೇ ಸಾರಥ್ಯವನ್ನು ಮಾಡುತ್ತಾ ಅತಿಸಂಭ್ರಮದಿಂದ ರಾಜವೀಧಿಯಲ್ಲಿ ಮೆರವಣಿಗೆಯನ್ನು ಮಾಡಿ ಸಿಕೊಂಡು ಮಹಾಸಂತೋಷದಿಂದ ಕೂಡಿದವನಾಗಿ ಬರುತ್ತಿದ್ದನು. ಆ ಸಮ ಯದಲ್ಲಿ ಎಲೈ ಬುದ್ದಿ ಶೂನ್ಯನಾದ ಕಂಸನೇ ! ಮೂಢತ್ವದಿಂದ ಏಕೆ ಇಷ್ಟು ಸಂತೋಷ ಪಡುತ್ತಿರುವಿ ? ಈ ನಿನ್ನ ತಂಗಿಯಾದ ದೇವಕಿಯ ಎಂಟನೆಯ ಬಸು ರಿನಲ್ಲಿ ನಿನ್ನನ್ನು ಕೊಂದುಹಾಕುವ ಮಗನು ಹುಟ್ಟು ವನು ಎಂದು ಆಕಾಶವಾ ಣಿಯು ಕೇಳಿಬಂದುದರಿಂದ ಆ ಕಂಸಾಸುರನು ಚಿಂತಾಕ್ರಾಂತನಾಗಿ ಮುಂತೋಚದೆ ಸ್ವಲ್ಪ ಕಾಲದ ವರೆಗೂ ದಿಗ್ಗಾಂತನಾಗಿದ್ದು ಕ್ರೂರಕರ್ಮಿಯಾದುದರಿಂದ ಈ ದೇವಕಿಯು ಇದ್ದರಷ್ಟೆ ನನ್ನನ್ನು ಕೊಲ್ಲುವ ಮಕ್ಕಳು ಹುಟ್ಟುವುದು. ಈ ಕ್ಷಣ ದಲ್ಲಿ ಇವಳನ್ನೇ ಕಡಿದುಹಾಕುವೆನೆಂದು ಶೀಘ್ರವಾಗಿ ಒರೆಯಿಂದ ಕತ್ತಿಯನ್ನು ಹಿರಿ ಯಲು ಆಗ ವಸುದೇವನು ಮಹಾ ವ್ಯಾಕುಲಿತಾ೦ತರ೦ಗನಾಗಿ ಕಂಸಾಸುರನನ್ನು ಕುರಿತು-ಎಲೈ ಮಹಾ ಪರಾಕ್ರಮಶಾಲಿಯೇ ! ನೀನು ಇಂಥ ಶ್ರೇಷ್ಠವಾದ ಯದುವಂಶದಲ್ಲಿ ಹುಟ್ಟಿ ಅಪ್ರತಿಮಶ್ರಪುರುಷನಾಗಿ ಹೇಡಿಗಳಂತೆ ಸೀಹತ್ಯೆಗೆ ಎಳೆ ಸಬಹುದೇ ? ಈ ಸಾಮಾನ್ಯ ಕಾರ್ಯವು ಲೋಕಭೀಕರವಾದ ನಿನ್ನ ವಿಕ್ರಮಕ್ಕೆ ಅಪ ಮಾನಕರವಾಗಿಲ್ಲ ವೇ ? ಅದು ಕಾರಣ ಮಹಾ ವೀರಾಗ್ರೇಸರನಾದ ನೀನು ಇಂಥ ಅಲ್ಪ ಕೃತ್ಯವನ್ನು ಬಿಡು, ಈಕೆಯ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳಷ್ಟೇ ನಿನ್ನನ್ನು ಕೊಂದು ಹಾಕತಕ್ಕವರು. ಈಕೆಯು ಬೇರೆ ನಿನ್ನನ್ನು ಕೊಲ್ಲುವುದಿಲ್ಲವಷ್ಟೇ. ಆದುದರಿಂದ ಇವ ಳ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೆಲ್ಲಾ ಹುಟ್ಟಿದ ಕ್ಷಣದಲ್ಲೇ ನಿನ್ನ ವಶಕ್ಕೆ ಕೊಡು ವೆನು. ಅವುಗಳನ್ನು ನೀನು ತೆಗೆದು ಕೊಂಡು ನಿನ್ನ ಮನಸ್ಸಿಗೆ ಬಂದ ಹಾಗೆ ಮಾಡಿಕೊಂಡು ನೀನು ಚೆನ್ನಾಗಿ ಬದುಕುವ ದಾರಿಯನ್ನು ನೋಡಿಕೊಳ್ಳಬಹುದು ಎಂದು ವಿವಿಧ ವಾಗಿ ಸಾಮವಚನಗಳನ್ನು ಹೇಳಿದನು. ಆಗ ಕಂಸನು ಆ ಮಾತುಗಳಿಗೆ ಒಪ್ಪಿ ಅವ ರನ್ನು ಯಥಾಪ್ರಕಾರವಾಗಿ ಮೆರವಣಿಗೆಯಿಂದ ಕರೆದು ಕೊಂಡು ಬಂದು ಅರಮನೆ ಯಲ್ಲಿರಿಸಿ ಅವರು ಒಂದು ಕ್ಷಣಕಾಲವಾದರೂ ಹೊರಗೆ ಹೋಗದ ಹಾಗೆ ಅತಿ ಜಾಗ ರೂಕತೆಯಿಂದಿರುವಂತೆ ನಂಬಿಕೆಯುಳ್ಳವರಾದ ಕಾವಲುಗಾರರನ್ನು ನೇಮಿಸಿ ಅವಳು ಗರ್ಭಿಣಿಯಾಗಿ ಹೆತ್ಯ ಕ್ಷಣದಲ್ಲೇ ಬಂದು ತನಗೆ ತಿಳಿಸುವಂತೆ ಆಪ್ತರಾದ ಜನರನ್ನು ಕಟ್ಟು ಮಾಡಿಸಿ ತಾನು ಬಂದು ಎಂದಿನಂತೆ ರಾಜ್ಯಭಾರವನ್ನು ಮಾಡುತ್ತಾ ನಿಂತ