ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

274 ಕಥಾಸಂಗ್ರಹ-೫ ನೆಯ ಭಾಗ ಬಳಿಗೆ ಓಡಿಬರಲು ಕೃಷ್ಣನು ಅದರ ಆರ್ಭಟಕ್ಕೆ ಸ್ವಲ್ಪವಾದರೂ ಅಂಜದೆ ಹತ್ತಿರಕ್ಕೆ ಹೋಗಿ ಆ ಕತ್ತೆಯ ನಾಲ್ಕು ಕಾಲುಗಳನ್ನೂ ಜೋಡಿಸಿ ಹಿಡಿದು ಕೊಂಡು ಓಲೆಮ ರಗಳ ಮೇಲಿರುವ ಹಣ್ಣಿನ ಗೊನೆಗಳನ್ನು ಕೆಡಹುವುದಕ್ಕೆ ಒಳ್ಳೆಯ ಸಹಾಯವಾಯಿ ತೆಂದು ಹೇಳಿ ಗರನೆ ಬೀಸಿ ಮರದ ಮೇಲಿರುವ ಗೊನೆಗಳಿಗೆ ಗುರಿಕಟ್ಟಿ ಎಸೆಯುತ್ತ ಬಿದ್ದು ಎತ್ತು ಕೊಳ್ಳುವುದಕ್ಕೆ ಸ್ವಲ್ಪವಾದರೂ ಅವಕಾಶವನ್ನು ಕೊಡದೆ ತಿರಿಗಿ ತೆಗೆದುಕೊಂಡು ಇಡು, ಇದೇ ರೀತಿಯಾಗಿ ಮಾಡುತ್ತ ಬಂದುದರಿಂದ ಆ ರಕ್ಕಸನು ನೊಂದು ಬಳಲಿ ಕಂಗೆಟ್ಟು ಮೈಮರೆತು ಸತ್ತು ಹೋದನು. ಆ ಮೇಲೆ ಕೃಷ್ಣನು ಜೊತೆಯ ಹುಡುಗರನ್ನೆಲ್ಲಾ ಕರೆದು--ಇಗೋ, ಹೆದರಬೇಡಿರಿ, ನೀವು ಹೇಳಿದ ಕತ್ತೆಯು ಸತ್ತು ಬಿದ್ದಿದೆ, ನೋಡಿರಿ. ಓಲೆಯಹಣ್ಣಿನ ಗೊನೆಗಳು ಅಪರಿಮಿತವಾಗಿ ಬಿದ್ದಿವೆ. ತಿನ್ನೋಣ, ಬನ್ನಿರಿ ಎಂದು ಹೇಳಲು ಅವರೆಲ್ಲರೂ ಬಂದು ನೋಡಿ ಕೃಷ್ಣನ ಸಾಮರ್ಥ್ಯಕ್ಕೆ ಆಶ್ಚರ್ಯಪಟ್ಟು ಸಂತೋಷದಿಂದ ಬೇಕಾದಷ್ಟು ಹಣ್ಣುಗಳನ್ನು ತಿಂದು ಸಾಯಂಕಾಲದ ವೇಳೆಯಲ್ಲಿ ಹಣ್ಣಿನ ಗೊನೆಗಳನ್ನು ಹೊತ್ತುಕೊಂಡು ತಮ್ಮ ಹಳ್ಳಿಗೆ ಬಂದು ಈ ವರ್ತಮಾನವನ್ನು ನಂದಗೋಪಾದಿಗಳಿಗೆ ತಿಳಿಸಿದರು. ಅವರೆಲ್ಲರೂ ಕೇಳಿ ಬಹಳ ಸಂತೋಷಾಶ್ಚರ್ಯಮನಸ್ಕರಾಗಿ-ಈ ಕೃಷ್ಣನು ಮನುಷ್ಯ ಮಾತ್ರವಲ್ಲ, ಇವನ ಸಾಮರ್ಥ್ಯವನ್ನು ಇಷ್ಟೆಂದು ತಿಳಿಯಲಾಗದು ಎಂದು ಮಾತಾಡಿಕೊಳ್ಳುತ್ತಿದ್ದರು. ತರುವಾಯ ಮತ್ತೊಂದು ದಿವಸ ಕೃಷ್ಣ ಬಲರಾಮರು ತಮ್ಮ ದನಗಳನ್ನು ಅಟ್ಟಿ ಕೊಂಡು ಜೊತೆಯ ಹುಡುಗರೊಡನೆ ಯಮುನಾನದಿ ಯ ಪ್ರಾಂತ್ಯದಲ್ಲಿ ದನಗಳಿಗೆ ಒಳ್ಳೆಯ ಎಳೇಹುಲ್ಲನ್ನು ಮೇಯಿಸುತ್ತ ಮಧ್ಯಾಹ್ನ ವಾದ ಕೂಡಲೆ ತಿಳಿನೀರನ್ನು ಕುಡಿಸಿ ಸಮೀಪದಲ್ಲಿರುವ ಭಾ೦ಡೀರವೆಂಬ ಒಂದು ದೊಡ್ಡ ಆಲದ ಮರದ ನೆರಳಿಗೆ ದನಗಳನ್ನೆಲ್ಲಾ ಅಟ್ಟಿಕೊಂಡು ಬಂದು ನಿಲ್ಲಿಸಲು ಆಗ ದನಗಳೆಲ್ಲಾ ಅಲ್ಲಿ ಮಲಗಿ. ಕೊಂಡು ಮೆಲಕುಹಾಕುತ್ತಿದ್ದುವು. ಆ ವೇಳೆಯಲ್ಲಿ ಕೃಷ್ಣನೇ ಮೊದಲಾದವರೆ ಲ್ಲರೂ ಕೂಡಿ ಬಿಸಿಲು ಕಡಮೆ ಯಾಗುವ ವರೆಗೂ ಇಲ್ಲಿ ಕುದುರೆಚಂಡನ್ನು ಆಡೋಣ. ಸೋತವರು ಗೆದ್ದವರನ್ನು ಹೊತ್ತು ಕೊಂಡಿರಬೇಕೆಂದು ಗೊತ್ತು ಮಾಡಿಕೊಂಡು ಆಟ ವನ್ನು ಆಡುತ್ತಿರಲು ಆ ಸಮಯದಲ್ಲಿ ಕಂಸನಿಂದ ಕಳುಹಿಸಲ್ಪಟ್ಟ ಪ್ರಲಂಬಾಸುರನೆಂಬ ದೈತನು ಆ ದನಗಳನ್ನು ಕಾಯುವ ಹುಡುಗರಂತೆ ವೇಷವನ್ನು ಹಾಕಿಕೊಂಡು ಅವ ರೊಳಗೆ ಬಂದು ಸೇರಿ ಕೃಷ್ಣನನ್ನು ಕೊಲ್ಲುವುದಕ್ಕೆ ತನ್ನಿ೦ದ ಅಸಾಧ್ಯವೆಂದೆಣಿಸಿ ಬಲ ರಾಮನ ಜೊತೆಯಲ್ಲಿ ಆಡುವುದಕ್ಕೆ ತೊಡಗಿ ಕಡೆಗೆ ತಾನವನಿಗೆ ಸೋತು ಆತನನ್ನು ಹೊತ್ತುಕೊಂಡು ಆಕಾಶಕ್ಕೆ ಹಾರಿಹೋಗಲು ಕೃಷ್ಣನು ನೋಡಿ-ಎಲೈ ಅಣ್ಣಾ! ಇವನು ಕಪಟಿಯಾದ ರಾಕ್ಷಸನು. ನಿನಗೆ ಮೋಸಮಾಡಿದನು. ಬೇಗನೆ ಅವನನ್ನು ಕೊಂದು ಹಾಕು, ತಡಮಾಡಬೇಡ ಎಂದು ಕೂಗಿ ಹೇಳಿದುದರಿಂದ ಬಲರಾಮನು ಅವನೆರಡು ಕೈಗಳನ್ನೂ ಹಿಡಿದು ಕೊಂಡು ಕೆಳಕ್ಕೆ ತುಳಿದು ಕುಂಬಾರರ ಗಾಲಿಯಂತೆ ಗಿರನೆ ತಿರುಗಿಸಿ ನೆಲಕ್ಕೆ ಬಡಿದು ಅಪ್ಪಳಿಸಿ ಕೊಂದು ಬೀಸಾಡಿದನು. ಆ ಮೇಲೆ ಸಾಯಂ ಕಾಲವಾಗಲು ಎಲ್ಲರೂ ಹಳ್ಳಿಗೆ ಬಂದು ಆ ದಿವಸ ನಡೆದ ಸಮಾಚಾರವನ್ನೆಲ್ಲಾ ತಿಳಿ