ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

276 ಕಥಾಸಂಗ್ರಹ-೫ ನೆಯ ಭಾಗ ಪಟ್ಟವನ್ನು ಕಟ್ಟಿ ನರಕಾಸುರನೆಂಬ ದೈತ್ಯನನ್ನೂ ಕೊಂದು ಅವನು ಸೆರೆಯಲ್ಲಿಟ್ಟಿದ್ದ ಹದಿನಾರು ಸಾವಿರ ದೇವಕನ್ನಿಕೆಯರನ್ನೂ ರುಕ್ಕಿಣೀ ಸತ್ಯಭಾಮೆಯರೇ ಮೊದಲಾದ ಅಷ್ಟ ಮಹಿಷೆಯರನ್ನೂ ತಾನು ಮದುವೆಯಾಗಿ ಅವರಲ್ಲಿ ಸಾಂಬ ಮನ್ಮಥರೆಂಬವರೇ ಮೊದಲಾದ ಮಕ್ಕಳು ಗಳನ್ನು ಪಡೆದು ಇನ್ನೂ ಹಂಸ ಡಿಬಿಕ ಮುರ ಸಾಲ್ವಾದ್ಯನೇಕ ದೈತ್ಯರನ್ನು ಸಂಹರಿಸಿ ವೈಕುಂಠ ದ್ವಾರಪಾಲಕರಾದ ಜಯವಿಜಯರು ಮಾರನೆಯ ಜನ್ನ ದಲ್ಲಿ ಶಿಶುಪಾಲ ದಂತವಕ್ರರೆಂಬ ಹೆಸರಿನಿಂದ ಹುಟ್ಟಿದುದರಿಂದ ಅವರಿಬ್ಬರನ್ನೂ ಸಂಹರಿಸಿ ಪಾಂಡವರಿಗೆ ಸಹಾಯವನ್ನು ಮಾಡಿ ಭಾರತಯುದ್ದ ದಲ್ಲಿ ಜರಾಸಂಧ ಕೌರವ ಜಯದ್ರಥ ಶಲ್ಯ ದೃಪದ ಕೇಕಯ ವಿರಾಟ ತ್ರಿಗರ್ತ ಭೂರಿಶ್ರವ ಎಂಬವರೇ ಮೊದಲಾದ ಅನೇಕ ದುಷ್ಟ ರಾಜರುಗಳನ್ನೂ ಕೊಲ್ಲಿಸಿ ಭೂಭಾರವನ್ನಿಳಿಸಿ ಹಸ್ತಿನಾ ವತೀ ನಗರದಲ್ಲಿ ಸತ್ಯಸಂಧನಾದ ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿ ಭೂಲೋಕದಲ್ಲಿ ತನ್ನ ಮಾನವದೇಹವನ್ನು ಬಿಟ್ಟು ವೈಕುಂಠಕ್ಕೆ ತೆರಳಿದನು. 8, THE NINTH OR BAUNDDHA INCARNATION. ೮. ಬೌದ್ಧಾವತಾರದ ಕಥೆ, ಪೂರ್ವಕಾಲದಲ್ಲಿ ತಾರಕಾಸುರನೆಂಬ ರಾಕ್ಷಸನು ಮಹಾ ಪರಾಕ್ರಮಶಾಲಿ ಯಾಗಿ ಇಂದ್ರಾದಿ ದೇವತೆಗಳಿಗೆ ಬಹಳವಾಗಿ ತೊಂದರೆಯನ್ನು ೦ಟುಮಾಡುತ್ತಿದ್ದನು. ಅದು ಕಾರಣ ದೇವತೆಗಳೆಲ್ಲ ರೂ ಬಹು ವಿಧವಾಗಿ ಪ್ರಾರ್ಥನೆಯನ್ನು ಮಾಡಿಕೊಂಡು ದರಿಂದ ಈಶ್ವರನ ಮಗನಾದ ಷಣ್ಮುಖನು ದೇವಸೇನಾಪತಿತ್ವವನ್ನು ವಹಿಸಿ ಆ ದುಷ್ಟನಾದ ದೈತ್ಯನನ್ನು ಸಂಹರಿಸಿದನು. ಅವನ ಮಕ್ಕಳಾದ ತಾರಕಾಕ್ಷ ಕಮಲಾಕ್ಷ ವಿದ್ಯುನ್ಮಾಲಿ ಎಂಬ ಮರು ಮಂದಿಯ ಸರೋಜಸಂಭವನನ್ನು ಕುರಿತು ಬಹಳವಾಗಿ ತಪಸ್ಸು ಮಾಡಿ ಮೆಚ್ಚಿಸಿ ಪ್ರತ್ಯಕ್ಷನಾಗಿ ಬಂದ ಬ್ರಹ್ಮನನ್ನು ನೋಡಿ ತಮ್ಮ ತಂದೆ ಯಾದ ತಾರಕಾಸುರನನ್ನು ಕೊಲ್ಲಿಸಿದ ದೇವತೆಗಳೆಂಬ ಮೃಗಗಳನ್ನು ಬೇಟೆಯಾಡಬೇ ಕೆಂದು ತಮ್ಮ ಮನಸ್ಸಿನಲ್ಲಿ ಯೋಚಿಸಿಕೊಂಡು-ಎಲೈ ಚತುರ್ಮುಖನೇ ! ನಮಗೆ ಆಮರತ್ರವುಂಟಾಗುವ ಹಾಗೂ ದೇವಾಸುರಾದಿಗಳೆಲ್ಲರೂ ನಮಗೆ ಸೇವಕರಾಗಿ ನಮ್ಮನ್ನು ಓಲೈಸಿಕೊಂಡಿರುವ ಹಾಗೂ ನಮ್ಮ ವಾಸಕ್ಕೆ ಯೋಗ್ಯವಾಗಿ ಯಾರಿಂದಲೂ ಜಯಿಸಲಶಕ್ಯವಾದ ಮೂರು ಪಟ್ಟಣಗಳು ಆಕಾಶಮಾರ್ಗದಲ್ಲಿ ಉಂಟಾಗುವ ಹಾಗೂ ಈ ಮೂರು ವರಗಳನ್ನೂ ನಮಗೆ ಕೊಡಬೇಕೆಂದು ಬೇಡಿಕೊಂಡರು. ಆಗ ಬ್ರಹ್ಮನು ಅಹಾ ! ಇದಕ್ಕೇನು ಮಾಡಬೇಕು ! ನಾನು ಹುಲಿಗೆ ಧೈರ್ಯವನ್ನೂ ಕತ್ತಲೆಗೆ ಕಾಠಿಣ್ಯವನ್ನೂ ಕುಲಗಿರಿಗಳಿಗೆ ಚೈತನ್ಯವನ್ನೂ ಆನೆಗಳಿಗೆ ಸೂಕ್ಷ್ಮಬುದ್ದಿಯನ್ನೂ ಕೊಲೆ ಗಾರರಿಗೆ ನಿತ್ಯ ದೇಹವನ್ನೂ ಒಲಿದು ಕೊಟ್ಟರೆ ಲೋಕಕ್ಕೆ ಲೇಸಾಗುವುದೇ ಎಂದಿಗೂ ಇಲ್ಲ. ಈ ದುರಾತ್ಮರು ಇಂಥ ಮಹಾವರಗಳನ್ನು ಕೇಳಿಕೊಂಡರಲ್ಲಾ ! ಶಿವಶಿವಾ ! ಈ ಅನಿವಾರ್ಯವಾದ ಕಾರ್ಯಕ್ಕೆ ನಾನು ಮಾಡತಕ್ಕ ಯೋಚನೆ ಯಾವುದು ಎಂದು