ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೌದ್ಧಾವತಾರದ ಕಥೆ 277 ಒಂದು ಗಳಿಗೆಯವರೆಗೂ ಯೋಚಿಸಿ ತರುವಾಯ ಆ ವ ರು ಮಂದಿಯನ್ನೂ ಕುರಿತು ನಿಮ್ಮ ಕೋರಿಕೆಯಂತೆ ನಿಮಗೆ ಆಕಾಶದಲ್ಲಿ ಮರು ಪಟ್ಟಣಗಳು ಉಂಟಾಗುವುವು. ಮಹಾಶೂರರಾದ ನೀವು ಇಂದ್ರಾದಿ ದೇವತೆಗಳೆಂಬ ನೊರಜುಗ ಇನ್ನು ಬಡಿದು ನಿಮ್ಮ ಸೇವೆ ಮಾಡಿಸಿಕೊಳ್ಳಿರಿ. ನಿಮ್ಮ ಮೂರು ಪಟ್ಟಣಗಳೂ ದಿವ್ಯ ಸಹಸ್ರ ಸಂವತ್ಸರಗಳಿಗೊಂದುಸಾರಿ ಒಂದು ಸ್ಥಾನದಲ್ಲಿ ಕೂಡುವುವು. ಆ ವೇಳೆಯಲ್ಲಿ ಯಾವ ಮಹಾತ್ಮನು ಆ ನಿಮ್ಮ ಮೂರು ನಗರಗಳನ್ನೂ, ಒಂದೇ ಬಾಣದಿಂದ ಕಡಿದು ಹಾಕುವನೋ ಆ ಸಮಯದಲ್ಲಿ ನಿಮಗೆ ಸಾವುಂಟಾಗುವುದೇ ಹೊರತು ಅನ್ಯಥಾ ನೀವು ಯಾವ ವಿಧದಿಂದಲೂ ಸಾಯುವುದಿಲ್ಲ ಹೋಗಿರಿ ಎಂದು ಹೇಳಿ ಅದೃಶ್ಯನಾದನು.. ತರುವಾಯ ಆ ದುಷ್ಟರು ಅ೦ಥ ಕಾಲವು ಬಂದಾಗ ನೋಡಿಕೊಳ್ಳೋಣ ಎಂದು ಸಂತೋಷದಿಂದ ಕೂಡಿ ಅಲ್ಲಿಂದ ಹೊರಟು ಬಂದು ದೈತ್ಯರ ಬಡಗಿಯಾದ ಮಯನನ್ನು ಕರಿಸಿ ಆಕಾಶದಲ್ಲಿ ತ್ರಿಪುರಗಳನ್ನು ನಿರ್ಮಾಣಮಾಡಿಸಿಕೊಂಡು ಇಂದ್ರಾ ದಿ ದೇವತೆಗಳನ್ನೆಲ್ಲಾ ಬಡಿದು ಅವರಿಂದ ನಿರಂತರದಲ್ಲೂ ಸೇವೆಯನ್ನು ಮಾಡಿಸಿಕೊ ಳ್ಳುತ್ತ ಅತಿ ಪ್ರಬಲರಾಗಿದ್ದರು. ಆ ಮೇಲೆ ಇಂದ್ರಾದಿ ದೇವತೆಗಳೆಲ್ಲಾ ಕೂಡಿ ಯೋಚಿಸಿ ಯಾವ ವಿಧದಿಂದಲೂ ಆ ದೈತ್ಯರ ಸಂಹಾರೋಪಾಯವನ್ನು ಕಾಣದೆ ಕಡೆಗೆ ಅವರೆಲ್ಲರೂ ಹೊಗಟು ಕೈಲಾಸಕ್ಕೆ ಹೋಗಿ ಪ್ರಮಥಾಧಿಪನಿಗೆ ಅಡ್ಡ ಬಿದ್ದು ತಮಗೆ ಸಂಭವಿಸಿರುವ ತಾರಕನ ಮಕ್ಕಳ ಬಾಧೆಯನ್ನು ಹೇಳಿಕೊಂಡು ಮೊರೆಯಿ ಡಲು ಶಂಕರನು-ಎಲೈ , ದೇವತೆಗಳಿರಾ ! ತಾರಕನ ಮಕ್ಕಳು ವೇದಮಾರ್ಗಗ ಳಲ್ಲಿ ಎಳ್ಳಷ್ಟಾದರೂ ತಪ್ಪದೆ ವೇದೋಕ್ತವಾದ ಕರ್ಮಗಳನ್ನು ಮಾಡುತ್ತ ಬಹಳ ಪರಿಶುದ್ಧರಾಗಿರುವರು. ಇಂಥವರನ್ನು ನಿಷ್ಕಾರಣವಾಗಿ ಸಂಹರಿಸುವುದು ಹೇಗೆ ? ನೀವು ಈಗಲೇ ಹೋಗಿ ವಿಷ್ಣುವಿಗೆ ಈ ಸಂಗತಿಯನ್ನು ತಿಳಿಸಿರಿ ಎಂದು ಹೇಳಲು ಅವರೆಲ್ಲರೂ ವಿಷ್ಣುವಿನ ಬಳಿಗೆ ಬಂದು ಈಶ್ವರವಚನವನ್ನು ತಿಳಿಸಿ ತಮ್ಮ ಕಷ್ಟವನ್ನು ಹೇಳಿಕೊಂಡು ಗೋಳಾಡಲು ಆಗ ಕರುಣಾಳುವಾದ ಹರಿಯು ಬೌದ್ಧಾವತಾರವನ್ನು ಮಾಡಿ ಯುಕ್ತಿಯಿಂದ ಸೌಗತವೆಂಬ ಒಂದು ಶಾಸ್ತ್ರವನ್ನು ಕಲ್ಪಿಸಿ ಆ ಪುಸ್ತಕವನ್ನು ಕೈಯಲ್ಲಿ ಹಿಡಿದು ಕೊಂಡು ಹೋಗಿ ಆ ತ್ರಿಪುರಗಳನ್ನು ಪ್ರವೇಶಿಸಿ ಆ ತಾರಕನ ಮಕ್ಕ ಳಿಗೆ ಕಾಣಿಸಿಕೊಳ್ಳಲು ಅವರು ಈತನ ಅನ್ಯಾದೃಶವಾದ ತೇಜಸ್ಸನ್ನು ನೋಡಿ ಇವ ನಾರೋ ಮಹಾ ಪುರುಷನೆಂದು ಯೋಚಿಸಿ ಎದುರೆದ್ದು ಬಂದು ಆತನಿಗೆ ನಮಸ್ಕಾರ ವನ್ನು ಮಾಡಿ ದಿವ್ಯ ಪೀಠಾಗ್ರದಲ್ಲಿ ಕುಳ್ಳಿರಿಸಿ ಷೋಡಶೋಪಚಾರಗಳಿಂದ ಪೂಜಿಸಿ-. ಎಲೈ ಮಹಾನುಭಾವರೇ ! ತಾವು ಎಲ್ಲಿಂದ ಬಂದಿರಿ ? ಪವಿತ್ರರಾದ ನಿಮ್ಮ ಸಂದರ್ಶನ ದಿಂದ ನಾವು ಧನ್ಯರಾದೆವು. ಇಲ್ಲಿ ಬಂದ ಕಾರ್ಯವೇನು ಎಂದು ಭಯಭಕ್ತಿ ಯಿಂದ ಕೂಡಿ ಕುಶಲಪ್ರಶ್ನೆಯನ್ನು ಮಾಡಲು ಬೌದ್ಧ ವೇಷಧಾರಿಯಾದ ವಿಷ್ಣು ವು ಅವರನ್ನು ಕುರಿತು ನಾವು ಭಿಕ್ಷುಕರು. ನಮಗೆ ಊರೆಲ್ಲಿರುವುದು ? ನಮ್ಮ ತಪಸ್ಸು ನಿರಾತಂಕವಾಗಿ ನಡೆಯುವ ಹಾಗೆ ಮಾಡಿ ನಮ್ಮನ್ನು ಯಾರು ಪ್ರೀತಿಯಿಂದಿ ರಿಸಿಕೊಂಡಿರುವರೊ ಅಂಥವರಲ್ಲೇ ಇದ್ದು ಕೊಂಡು ತತ್ವ ನಿರ್ಣಯಗಳನ್ನೂ ಧರ್ಮ