ಪುಟ:ಕಥಾಸಂಗ್ರಹ ಸಂಪುಟ ೨.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

282 ಕಥಾಸಂಗ್ರಹ-೬ ನೆಯ ಭಾಗ ಕೆರದ ಅಳತೆಗೆ ಕಾಲು ಕೆಯಿಸಿದ ಹಾಗೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕೊಯಿದ ಕಾಲು ನಾಯಿ ತಿಂದರೇನು, ನರಿ ತಿಂದರೇನು ? ಕೋಟಿ ವಿದ್ಯೆಯ ಕೂಳಿಗೋಸ್ಕರವೇ, ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ. ಗಂಗೆಗೆ ಹೋಗಿ ತೆಂಗಿನ ಓಟೆ ತಂದ ಹಾಗೆ. ಗಂಡಹೆಂಡಿರ ಜಗಳದಲ್ಲಿ ಕೂಸು ನಾಶವಾಯಿತು. ಗಾಳಿ ಬಂದಾಗಲೇ ತೂರಿಕೊಳ್ಳಬೇಕು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ ? ಗುರುವಿನಂತೆ ಶಿಷ್ಯ, ತಂದೆಯಂತೆ ಮಗ. ಗೇಣು ಬಿಟ್ಟು ಅಗಳು ದಾಟಿದ ಹಾಗೆ, ಚರ್ಮ ತೊಳೆದರೆ ಕರ್ಮ ಹೋದೀತೇ ? ಚಿಂತೆಯೇ ಮುಪ್ಪ, ಸಂತೋಷವೇ ಯೌವನ ಚಿನ್ನದ ಚೂರಿ ಎಂದು ಕುತ್ತಿಗೆ ಕೆಯಿಸಿಕೊಳ್ಳಬಹುದೇ ? ಚೇಳಿನ ಮಂತ್ರವನ್ನರಿಯದವನು ಹಾವಿನ ಹುತ್ತಕ್ಕೆ ಕೈಯಿಕ್ಕಿದ ಹಾಗೆ, ಜಗದೀಶ್ವರನ ದಯೆ ಒಂದಿದ್ದರೆ ಜಗತ್ತೆಲ್ಲಾ ನನ್ನದು. ಜನ ಮರುಳೋ ! ಜಾತ್ರೆ ಮರುಳೋ ! ಜೋಗಿಗೆ ಜೋಗಿ ತಬ್ಬಿ ಕೊಂಡರೆ ಮೈಯೆಲ್ಲಾ ಬೂದಿ. ಜ್ಞಾನವಂತನಿಗೆ ಸ್ನಾನವೇಕೆ ? ತಟಸ್ಥನಾದವನಿಗೆ ತಂಟೆಯೇನು ? ತರ್ಕ ಮಾಡುವವ ಮೂರ್ಖನಿಗಿಂತ ಕಡೆ. ತಲೆ ಗಟ್ಟಿ ಎಂದು ಕಲ್ಲನ್ನು ಹಾಯಬಾರದು. ತಾ ಕಳ್ಳನಾದರೆ ಪರರನ್ನು ನಂಬ.. ತಾನಾಗಿ ಬೀಳುವ ಮರಕ್ಕೆ ಕೊಡಲಿಯೇಕೆ ? ತಾನು ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು. ತಾಸಿಗೊಂದು ಕೂಸು ಹೆತ್ತರೆ ಈ ಸೀಸು ಮುತ್ತು, ತಾಳಿದವ ಬಾಳಿಯಾನು. ತಿಪ್ಪೇ ಮೇಲೆ ಮಲಗಿ ಉಪ್ಪರಿಗೇ ಕನಸ ಕಂಡ ಹಾಗೆ. ತೀರಕ್ಕೆ ಬಂದ ಮೇಲೆ ತೆರೆಯ ಭಯವೇ ? ತೀರದಲ್ಲಿರುವ ಮರಕ್ಕೆ ನೀರು ಏಕೆ ? ತುಂಟ ಕುದುರೆಗೆ ಗಂಟು ಲಗಾಮು. ತುಂಡಿಲ್ಲ ದವನಿಗೆ ತುಂಟನ ಭಯವೇನು ? ತುಂತುರು ಮಳೆಯಿಂದ ತೂಬಿನ ಕೆರೆ ತುಂಬೀತೇ ?