ಪುಟ:ಕಥಾಸಂಗ್ರಹ ಸಂಪುಟ ೨.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾದೆಗಳು 283 ತುಂಬಿದ ಕೊಡ ತುಳುಕುವದಿಲ್ಲ. ತುಚ್ಛನ ಸಂಗಡ ಬಾಳೋದಕ್ಕಿಂತ ಹುಚ್ಚನ ಸಂಗಡ ಬೀಳೋದು ವಾಸಿ, ತುಚ ಮಾತಾಡುವವನು ಹುಚ ನಿಗಿಂತ ಕಡೆ. ತುದಿಯಲ್ಲಿ ಕಾಣುವದು ಮದುವೇ ಗುಣ. ದಣಿದ ಎತ್ತಿಗೆ ಮಣವೇ ಭಾರ. ದಾರಿ ತಪ್ಪಿದ ಮೇಲೆ ಹಾರಿ ಏನು ಫಲ ? ದಾಸ್ಯೆಯ ತಿರುಪತಿಗೆ ಹೋದ ಹಾಗೆ, ದಾಹ ಹತ್ತಿದವನಿಗೆ ಹತ್ತಿ ಕುಡಿಯೋದಕ್ಕೆ ಕೊಟ್ಟ ಹಾಗೆ. ದಿಕ್ಕಿಲ್ಲದ ಮನುಷ್ಯನಿಗೆ ದೇವರೇ ಗತಿ. ದಿಕ್ಕು ದಿಕ್ಕಿಗೆ ಹೋದರೂ ದುಃಖತಪ್ಪಿತೆ ? ದುಃಖದ ಮೇಲೆ ಸುಖ; ಸುಖದ ಮೇಲೆ ದುಃಖ. ದುಮ್ಮನಿಂದ ಹಮ್ಮ ಕಳಕೊಂಡ. ದೂರಕ್ಕೆ ಬೆಟ್ಟ ನುಣ್ಣಗೆ. ದೆಬ್ಬೆ ಕೊಟ್ಟು ಬೊಬ್ಬೆ ಕೊಂಡ. ದೇವರು ಕೊಟ್ಟರೂ ಪೂಜಾರಿ ಕೊಡ. ದೇಶಾಂತರ ಹೋದರೆ ದೈವ ಬಿಟೀತೇ ? ದೊಣ್ಣೆ ಹಿಂಡಿದರೆ ಎಣ್ಣೆ ಬೀಳುವದೇ ? ದೋತ್ರ ದೊಡ್ಡದಾದರೆ ಗೋತ್ರ ದೊಡ್ಡದೇ ? ದೋಷಾ ಮಾಡುವವನಿಗೆ ರೋಷ ಬಹಳ. ದ್ರಾಕ್ಷಿ ಸೀ ಎಂದು ಬಳ್ಳಿ ಸಹಾ ತಿನ್ನಬಾರದು. ಧರ್ಮಕ್ಕೆ ಕೊಟ್ಟ ಎಮ್ಮೆ ಹಲ್ಲು ಹಿಡಿದು ನೋಡಿದನು. ಧರ್ಮಕ್ಕೆ ಕೊಟ್ಟೆ ದಟ್ಟ ಹಿತ್ತಲಿಗೆ ಹೋಗಿ ಮೊಳಾ ಹಾಕಿ ನೋಡಿದನು. ಧೂಪಾ ಹಾಕಿದರೆ ಪಾಪ ಹೋದೀತೇ ? ಧೈರ್ಯವುಂಟಾದವನಿಗೆ ದೈವ ಸಹಾಯವುಂಟು. ದೊರೆಯಿ೦ದ ಆಗುವಂಥಾದ್ದು ನರಿಯಿಂದ ಆದೀತೇ ? ಧೋರೆ ಹೇಳಿದನೆಂದರೆ ಮರದ ಕಾಯಿ ಬಿದ್ದಿತೇ ? ನಡಗುವವನ ಮೇಲೆ ಸತ್ಯ ಹಾವು ಬಿದ್ದ ಹಾಗೆ. ನಯವಿದ್ದಲ್ಲಿ ಭಯವಿಲ್ಲ. ನಯಶಾಲಿಯಾದವ ಜಯಶಾಲಿಯಾದಾನು. ನರಕಕ್ಕೆ ನವದ್ಯಾರ, ನಾಕಕ್ಕೆ ಒಂದೇ ದ್ವಾರ. ನರಿಯ ಹೊಟ್ಟೆಯಲ್ಲಿ ಸಿಂಹದ ಮರಿ ಹುಟ್ಟಿತೇ ? ನರ್ಮದೆಗೆ ಹೋದರೆ ಕರ್ಮ ತಪ್ಪಿತೇ ! ನವಿಲು ಕುಣಿಯೋದ ನೋಡಿ ಕೆಂಬೂತ ಪುಕ್ಕಾ ತೆರೆಯಿತು.