ಪುಟ:ಕಥಾಸಂಗ್ರಹ ಸಂಪುಟ ೨.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾದೆಗಳು 287 ಮಾರಿಯ ಮನೆಗೆ ಹೋತ ಕನ್ಯಾ ಕೊರೆದ ಹಾಗೆ, ಮಾರಮ್ಮ ಅರಿಯದ ಕೋಣೆಯೋ ? ಮೀನು ನೀರಿನಲ್ಲಿ ಮುಳುಗಿದರೆ ಸ್ನಾನದ ಫಲ ಬಂದೀತೇ ? ಮುತ್ತಿನ ಚಲುವು ಕತ್ತೆಗೆ ತಿಳಿದೀತೇ ? ಮತ್ತು ಕೆಟ್ಟರೆ ಭತ್ತಕ್ಕಿಂತ ಕಡೆಯೇ ? ಮಕನೆದುರಿಗೆ ಮಗು ತುರಿಸಿಕೊಂಡ ಹಾಗೆ. ಮೂಗಿಗಿಂತ ಮೂಗುತಿ ಭಾರ. ಮಗು ಕೊಯಿದು ಮೊಗ್ಗಿನ ತುರಾಯಿ ಕೊಟ್ಟ ಹಾಗೆ. - ಮರ್ಖಗೆ ಹೇಳಿದ ಬುದ್ದಿ ಗೋರ್ಕಲ್ಲಿನ ಮೇಲೆ ಮಳೆ ಹೊಯಿದ ಹಾಗೆ. ಮರ್ತಿ ಸಣ್ಣದಾದರೂ ಕೀರ್ತಿ ದೊಡ್ಡದು. ಮವರ ಕಿವಿಗೆ ಮುಟ್ಟಿದ್ದು ಮೂರು ಲೋಕಕ್ಕೆ ಮುಟ್ಟು ವುದು. ಮರೆತ್ತಿನ ಬಂಡಿ ಹೊಲಕ್ಕೆ ಹೋಗದು, ಮನೆಗೂ ಬಾರದು. ಮೆಚಿ ದವನಿಗೆ ಮಸಣವೇ ಸುಖ ಮೆಟ್ಟಿದಲ್ಲದೆ ಹಾವು ಕಡಿಯದು. ಮೆಟ್ಟಿದಾಕ್ಷಣ ಗಟ್ಟ ತಗ್ಗಿತೇ ? ಮೈಯಲ್ಲಿ ಹುಟ್ಟಿದ ರೋಗಕ್ಕಿ೦ತ ಕಾಡಲ್ಲಿ ಹುಟ್ಟಿದ ಔಷಧ ಮೇಲು. ಮೊಗೇ ಮಾಡದ ಕುಂಬಾರ ಗುಡಾಣಾ ಮಾಡಾನೇ ? ಮೊಳಕೈ ಆಡಿದರೆ ಮುಂಗೈ ಆಡುತ್ತದೆ. ಯಾತ ತಲೇ ತೂಗಿದರೆ ಪಾತಾಳದ ನೀರು ಹರಿಯುತ್ತದೆ ; ತಾತ ತಲೇ ತೂಗಿದರೆ ಪಾಗು ಬೀಳುತ್ತದೆ. ಯಾರೂ ಇಲ್ಲದ ಊರಿಗೆ ಅಗಸರ ಮಾಳಿಯೇ ಮುತ್ತೈದೆ. ಯಾರೂ ಇಲ್ಲದ ಊರಿಗೆ ಹೋಗಿ ನೀರ ಮಜ್ಜಿಗೆ ಬಯಸಿದ ಹಾಗೆ. ಯಾವ ರಾಯನಿಗೆ ರಾಜ್ಯ ವಾದರೂ ರಾಗಿಬೀಸೋದು ತಪ್ಪದು. ಯೋಗಿಯಾದರೂ ಭೋಗೆ ಬಿಡ. ಯೋಗ್ಯತೆ ಅರಿಯದ ದೊರೆಯ ರೋಗವರಿಯದ ವೈದ್ಯನೂ ಒಂದೇ. ರಂಗನ ಮುಂದೆ ಸಿಂಗನೇ ? ರಾಗ ನಡಿಸುವಾಗ ತಂತೀ ಹರಿಯಿತು. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ. ರಾಯರ ಪಾದದಾಣೆ ಹಾಗೇ ನು೦ಗು. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ? ಲಂಗು ಹರಿದ ಮೇಲೆ ಜಂಗಮನ ಹಂಗೇನು ? ಲೆತ್ತಾ ಹಾಕಲಿಕ್ಕೆ ಹೋದರೆ ಬೋಕೀ ಬಿತ್ತು. ಲೋಕದವರೆಲ್ಲಾ ಸತ್ತರೆ ಶೋಕಾ ಮಾಡುವರಾರು ? ವಂಚಕನಿಗೆ ಸಂಚು ಕೊಟ್ಟ ಹಾಗೆ,