ಪುಟ:ಕಥಾಸಂಗ್ರಹ ಸಂಪುಟ ೨.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾದೆಗಳು 291 ಹಾಸಿಗೇ ಅರಿತು ಕಾಲ್ಮೀಡಬೇಕು. ಹಾಳು ತೋಟಕ್ಕೆ ನೀರು ಹಾಕಿ ಬೀಳು ರಟ್ಟೆ ಬಿದ್ದು ಹೋಯಿತು. ಹಿಗ್ಗಿದವ ಮುಗ್ತಾನು, ತಗ್ಗಿದವ ಜಯಿಸಾನು. ಹಿಡಿದದ್ದು ತಪ್ಪಿತು, ಮೆಟ್ಟಿ ದ್ದು ಮುರಿಯಿತು. ಹಿಡಿತುಂಬಾ ಹಣ ಕೊಟ್ಟರೂ ನುಡಿ ಚೆನ್ನಾಗಿರಬೇಕು. ಹಿಡಿಯುವದಕ್ಕೆ ಪಟ್ಟಿಲ್ಲ, ನಿಲ್ಲುವದಕ್ಕೆ ಕೊನೆಯಿಲ್ಲ, ಹಿರಿಯಕ್ಕನ ಚಾಳೀ ಮನೇ ಮಕ್ಕಳಿಗೆಲ್ಲಾ. ಹುತ್ತಾ ಬಡಿದರೆ ಹಾವು ಸಾಯುವದೇ ?" ಹುಬ್ಬೇ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ ಹುರುಳೀ ಸಾರಿಗೆ ಹೋಗಿ ಕುದುರೆ ಬೆಲೆ ಕೇಳಿದ ಹಾಗೆ. ಹುಲೀ ಬಣ್ಣಕ್ಕೆ ನರಿ ಮೈಸುಟ್ಟು ಕೊಂಡ ಹಾಗೆ. ಹುಲೀ ಮರೀ ಹುಲ್ಲು ಮೇದೀತೆ ? ಹುಲ್ಲೇ ಹಾರಿದ್ದಕ್ಕೂ ಹುಲಿ ಅಡಗಿದ್ದಕ್ಕೂ ಸರಿಬಂದೀತೇ ! ಹೂ ಮಾರಿದ ಊರಲ್ಲಿ ಹುರೀ ಮಾರಬಾರದು ಹೂವಿನಿಂದ ನಾರು ಮಂಡೇ ಮೇಲೆ. ಹೆಗ್ಗಣ ಸರದೇಶಕ್ಕೆ ಹೋದರೆ ನೆಲಾ ಕೆರೆಯುವದು ಬಿಟೀತೇ ? ಹೆಣ್ಣು ಚಿ, ಕಣ್ಣು ಮಾತ್ರ ಕಾಣುವದಿಲ್ಲ. ಹೆತ್ತೆ ಯನ ಅರಿಯದವ ಮುತ್ತೆ ಯನ ಬಲ್ಲ ನೇ ? ಹೆತ್ತವರಿಗೆ ಹೆಗ್ಗಣ ಮುದ್ದು. ಹೆಸರು ಮಾತ್ರ ಗಂಗಾಭವಾನಿ, ಕುಡಿಯುವದಕ್ಕೆ ನೀರಿಲ್ಲ ಕೇಳಿಕೊಟ್ಟ ಬುದ್ದಿ ಕಟ್ಟಿ ಕೊಟ್ಟ ಬುತ್ತಿ ಎಲ್ಲಿ ತನಕಾ ಬರುವದು ? ಹೇಳುವವರು ಹೆಡ್ಡರಾದರೆ ಕೇಳುವವರಿಗೆ ಮತಿಯಿಲ್ಲವೇ ? ಹೊಟ್ಟು ಕುಟ್ಟಿ ಕೈಯೆಲ್ಲಾ ಗುಳ್ಳೆ, ಹೊರಗೆ ಹೋಗುವ ಮಾರಿ ನನ್ನ ಮನೆಗೆ ಹೊಕ್ಕು ಹೋಗು ಅಂದ ಹಾಗೆ, ಹೊಸ ವೈದ್ಯನಿಗಿಂತ ಹಳೇ ರೋಗಿ ವಾಸಿ, ಹೊಸ್ತಿಲ ಸಾರಿಸಿದ ಮಾತ್ರದಲ್ಲಿಯೇ ಹಬ್ಬವಾಯಿತೋ ? ಹೊಳೆ ದಾಟಿದ ಮೇಲೆ ಅಂಬಿಗನ ಮಿಂಡ. ಹೊಳೆಗೆ ನನೆಯದ ಕಲ್ಲು ಮಳಗೆ ನನೆದೀತೇ ? ಹೊಳೇ ನೀರಿಗೆ ದೊಣ್ಣಪ್ಪನಾಯಕನ ಅಪ್ಪಣೆಯೇ ? ಹೊಳೆ ಮಗಾವುದವಿರುವಾಗ ಕೆರಾ ಕಳಚುವರುಂಟೇ ? ಹೋಗದ ಊರಿಗೆ ದಾರಿ ಕೇಳಿದ ಹಾಗೆ, ಹೋದರೆ ಒಂದು ಕಲ್ಲು, ಬಿದ್ದರೆ ಒಂದು ಹಣ್ಣು, ಕ್ಷೌರದ ಕತ್ತಿ ಚಲೋದು ಯಾಕೆ ಅಳುತ್ತೀರಮ್ಯಾ ? ಕೌರಕ್ಕೆ ಕೂತಲ್ಲಿ ಸೀನು ಬಂದ ಹಾಗೆ,