ಪುಟ:ಕಥಾಸಂಗ್ರಹ ಸಂಪುಟ ೨.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಕಥಾಸಂಗ್ರಹ-೪ ನೆಯ ಭಾಗ ಟಾಗದಿರಲು ಆಗ ಪ್ರತ್ಯಕ್ಷನಾಗಿ ಬಂದ ಸರಸ್ವತೀಪತಿಯ ಅಪ್ಪಣೆಯಿಂದ ಉಭಯ ಪಕ್ಷದ ವೀರರೂ ಕೂಡಿ ಅಗ್ನಿ ಸಾಕ್ಷಿಯಾಗಿ ಸ್ನೇಹವನ್ನು ಮಾಡಿ ಕೊಂಡರು. ಅನಂತರದಲ್ಲಿ ರಾವಣನು ಅಲ್ಲಿಂದ ಹೊರಟು ಆಶ್ಚ ಪುರವೆಂಬ ನಗರಕ್ಕೆ ಬಂದು ಅಲ್ಲಿರುವ ಕಾಲಕೇಯರೆಂಬ ದೈತ್ಯನಾಯಕರೊಡನೆ ಬಡಿದಾಟಕ್ಕೆರೆ ಕಡೆಗೆ ಅನೇಕ ದೈತ್ಯರೊಡನೆ ಶೂರ್ಪನಖಿಯ ಗಂಡನಾದ ವಿದ್ಯುಜಿ ಹನನ್ನೂ ಕೊಂದು ಆ ನಗರವ ನ್ನೆಲ್ಲಾ ಸೂರೆಗೆಯ್ಯು ಅಲ್ಲಿಂದ ಹೊರಟು ವರುಣನ ನಗರಾಭಿಮುಖವಾಗಿ ಬಂದು ಯುದ್ಧರಂಗದಲ್ಲಿ ಅವನ ಮಕ್ಕಳನ್ನು ಮೈಮರೆವಂತೆ ಬಡಿದೊರಗಿಸಿದನು. ಆ ಮೇಲೆ ವರುಣನ ಬೊಕ್ಕಸಕ್ಕೆ ನುಗ್ಗಿ ಅಲ್ಲಿದ್ದ ಅನರ್ಘರತ್ನಗಳನ್ನು ಅಪಹರಿಸಿಕೊಂಡು ನಾಗ ದೇವ ದೈತ್ಯಾದಿ ಜಾತೀಯರಾದ ಯೌವನಸ್ಪಿಯರನೇಕರನ್ನು ಬಲಾತ್ಕಾರದಿಂದ ಎಳೆ ದುಕೊಂಡು ವಿಮಾನಾರೂಢನಾಗಿ ಜಯಭೇರಿಗಳನ್ನು ಹೊಡಿಸುತ್ತ ತಿರಿಗಿ ಲಂಕಾ ಪಟ್ಟಿ ಣಕ್ಕೆ ಬರಲು ಆಗ ನಗರ ನಾರೀಜನವು ಸಂಭ್ರಮದಿಂದ ನಲಿಯುತ್ತ ಚಿನ್ನದ ಹರಿವಾಣ ಗಳಲ್ಲಿ ಸೊಡರುಗಳನ್ನು ಹೊತ್ತಿಸಿಟ್ಟುಕೊಂಡು ನವರತ್ನದ ಆರತಿಗಳನ್ನು ತಂದು ರಾವ ಣನಿಗೆ ನಿವಾಳಿಸಿದರು. ಆಗ ರಾವಣನು ಪರಿವಾರ ಪರಿವೃತನಾಗಿ ಓಲಗದ ಚಾವಡಿ ಯಲ್ಲಿ ಕುಳಿತು ಕೊಂಡು ವಿಭೀಷಣ ಮಾಲ್ಯವಂತಾದಿ ರಾಕ್ಷಸ ಪ್ರಮುಖರ ಯೋಗ ಕ್ಷೇಮಗಳನ್ನು ವಿಚಾರಿಸಿ ತಾನು ಮಾಡಿದ ದಿಗ್ವಿಜಯ ವಿಷಯಕವಾದ ವೃತ್ತಾಂತ ವನ್ನು ಅವರೆಲ್ಲರಿಗೂ ತಿಳಿಸಿ ಅಂತಃಪುರಕ್ಕೆ ಬಂದು ಪಟ್ಟ ಮಹಿಷಿಯಾದ ಮಂಡೋ ದರಿಯನ್ನು ಕಂಡು ಸಂತೋಷಿಸಿ ಆಕೆಯೊಡನೆ ಸುಖವಾಗಿದ್ದು ಕೊಂಡು ರಾಜ್ಯಭಾರ ಮಾಡುತ್ತಿದ್ದನು. ಹೀಗಿರಲು ಒಂದಾನೊಂದು ದಿನ ಶೂರ್ಪನಖಿಯು ಅಣ್ಣನಾದ ರಾವಣನ ಬಳಿಗೆ ಬಂದು ಎಲೈ ಅಣ್ಣನೇ ! ನನಗೆ ಓಲೆಗಳೂ ಮಾಂಗಲ್ಯ ಸೂತ್ರವೂ ಇರಬಾ ರದು. ಇವಳು ಯಾವಾಗಲೂ ಮು೦ಡೆಯಾಗಿ ಅಮಂಗಲೆಯೆನ್ನಿಸಿಕೊಂಡಿರಲೆಂದು ನನ್ನ ಗಂಡನನ್ನು ಕೊಂದೆಯಾ ? ಗಂಡನಿಲ್ಲದವಳ ಬಾಳು ಬಂಡಬಾಳಲ್ಲವೇ ? ಈಗಲೇ ನನ್ನನ್ನೂ ಕೊಂದು ಪತಿಯಾದ ವಿದ್ಯುಜೈ ಹನ ಬಳಿಗೆ ಕಳುಹಿಸೆಂದು ಆತನ ಕಾಲು ಗಳ ಮೇಲೆ ಬಿದ್ದು ದುಃಖಿಸುತ್ತ ಮೊರೆಯಿಡುತ್ತಿರಲು ಆಗ ರಾವಣನು ಮನಸ್ಸಿನಲ್ಲಿ ಬಹುವಾಗಿ ವ್ಯಸನಪಡುತ್ತ ತಂಗಿಯನ್ನು ಹಿಡಿದೆತ್ತಿ ರಣರಂಗದಲ್ಲಿ ಕಾಲಕೇಯರನ್ನು ಕೊಲ್ಲುವ ಸಮಯದಲ್ಲಿ ಕೋಧದಿಂದ ಮದಿಸಿ ಮೈ ಮರೆತಿದ್ದೆನಾದುದರಿಂದ ಕಾಣದೆ ನಿನ್ನ ಗಂಡನನ್ನೂ ಕೊಂದು ಬಿಟ್ಟೆನು. ಕೈಮೀರಿ ಹೋದ ಕಾರ್ಯಕ್ಕಾಗಿ ಚಿಂತಿ ಸುವುದರಿಂದ ಪ್ರಯೋಜನವಿಲ್ಲವು. ನನ್ನ ಸಕಲೈಶ್ವರ್ಯವೂ ನಿನ್ನ ವಶವಾಗಿರುವುದು. ನೀನು ಯಾವುದಕ್ಕೂ ಚಿಂತಿಸಬೇಡೆಂದು ಸಮಾಧಾನಪಡಿಸಿ ಖರದೂಷಣಾದಿ ರಾಕ್ಷ ರಸ್ಸು ಕುರಿತು ನೀವು ಹದಿನಾಲ್ಕು ಸಾವಿರ ಮಂದಿ ರಕ್ಕಸರನ್ನು ಕರೆದು ಕೊಂಡು ಈ ಶೂರ್ಪನಖೀ ಸಮೇತರಾಗಿ ಹೋಗಿ ದಂಡಕವನದಲ್ಲಿರುವ ಜನಸ್ಸಾ ನವೆಂದು ಹೆಸರುಳ್ಳ ಈ ಲಂಕಾನಗರದ ಉಕ್ಕಡದಲ್ಲಿರತಕ್ಕುದೆಂದು ಅಪ್ಪಣೆಯನ್ನು ಕೊಡವ ಆಗ ರಾವಣನ ಚಿಕ್ಕಮ್ಮ ನ ಮಗನಾದ ಖರಾಸುರನು ಶೂರ್ಪನಖೀಸಹಿತ