ಪುಟ:ಕಥಾಸಂಗ್ರಹ ಸಂಪುಟ ೨.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಕಥಾಸಂಗ್ರಹ-೪ ನೆಯ ಭಾಗ ವಿವಿಧಾಯುಧಗಳನ್ನು ಧರಿಸಿ ಗರ್ಜಿಸುತ್ತ ಹೊರಡಲು ಆಗ ಇಂದ್ರನು-ಹೋ ಹೋ ! ತಾಳಿರಿ ತಾಳಿರಿ ! ಈ ರಾವಣನೊಡನೆ ಯುದ್ಧ ಮಾಡುವುದು ನಮ್ಮಿಂದ ಸಾಧ್ಯವಲ್ಲ ವು ಎಂದು ಸರಿಯಾದ ಕಾರಣಗಳಿಂದ ಅವರೆಲ್ಲರನ್ನೂ ಸಮಾಧಾನಪಡಿಸಿ ನಿಲ್ಲಿಸಿ ಆ ರಾತ್ರಿಯಲ್ಲಿಯೇ ಗುಪ್ತವಾಗಿ ಹೊರಟು ಶೇಷಶಯನನಾದ ವಿಷ್ಣುವಿನ ಬಳಿಗೆ ಹೋಗಿ ಆತನ ಪಾದಗಳಿಗೆ ನಮಸ್ಕರಿಸಿ ಕೈಮುಗಿದು ನಿಂತು ಕೊಂಡು ದೇವಾ ! ನನ್ನ ಬಿನ್ನ ಪವನ್ನು ಲಾಲಿಸು ರಾವಣನೆಂಬ ದುಷ್ಟ ರಾಕ್ಷಸನು ಬ್ರಹ್ಮನ ವರದಿಂದ ಗರ್ವಿತನಾಗಿ ನಮ್ಮ ದೇವಲೋಕವನ್ನು ಹಾಳು ಮಾಡಬೇಕೆಂದು ಯುದ್ಧಕ್ಕೆ ಬಂದಿ ದ್ದಾನೆ. ನಮ್ಮ ಪರಾಕ್ರಮ ಕ್ಕಿಂತಲೂ ಅವನ ಪರಾಕ್ರಮವು ನೂರ್ಮಡಿ “ಮಿಗಿಲಾಗಿ ರುವುದು, ಅದು ಕಾರಣ ಅವನು ನಮಗೆ ಅಜೇಯನಾಗಿರುವನು. ಭಕ್ತ ಪಂಜರ ನಾದ ನೀನೇ ಬಂದು ಚಕ್ರಾಯುಧದಿಂದ ಅವನ ತಲೆಯನ್ನು ಕತ್ತರಿಸಿ ನಿನ್ನ ಭಕ್ತ ರಾದ ನಮ್ಮನ್ನು ಕಾಪಾಡಬೇಕೆಂದು ದೈನ್ಯದಿಂದ ಬೇಡಿಕೊಂಡನು. ವಿಷ್ಣು ವು ಆ ಮಾತುಗಳನ್ನು ಕೇಳಿ ಈ ಸಮಯದಲ್ಲಿ ರಾವಣನೊಡನೆ ಯುದ್ಧ ಮಾಡುವುದಕ್ಕೆ ನಾನೂ ಬರಕೂಡದು. ಬ್ರಹ್ಮನ ವರವನ್ನು ಮನ್ನಿಸಿ ಮುಂದೆ ಭೂಲೋಕದಲ್ಲಿ ಮನು ಜನಾಗಿ ಅವತರಿಸಿ ವಾನರ ಸೇನಾಸಮನ್ವಿತನಾಗಿ ಬಂದು ಆ ರಾವಣನನ್ನು ಕೊಲ್ಲು ವೆನು. ಅಲ್ಲಿನವರೆಗೂ ನೀವು ಆತನ ಉಪದ್ರವವನ್ನು ಸಹಿಸಿಕೊಂಡಿರಬೇಕೆಂದು ಹೇಳಿ ಕಳುಹಿಸಿದನು. ಆ ಮೇಲೆ ದೇವೇಂದ್ರನು ಅಲ್ಲಿಂದ ಹೊರಟುಬಂದು ಅಮರಾವತಿ ಯನ್ನು ಸೇರಿದನು. ಆ ಮಾರನೆಯ ದಿವಸ ಸೂರ್ಯೋದಯವಾಗುವುದಕ್ಕಿಂತಲೂ ಮೊದಲೇ ಭೇರ್ಯದಿ ವಿವಿಧವಾದ್ಯಗಳ ಮಹಾರವದೊಡನೆ ಕೂಡಿದ ನಿಶಾಚರಬಲಜಲಧಿಯು ಸಿಂಹಗರ್ಜನೆಯನ್ನು ಮಾಡುತ್ತ ಅಮರಾವತಿಯನ್ನು ಮುತ್ತಿಕೊಂಡಿತು. ಆಗ ದೇವೇಂ ದ್ರನು-ಹೋ ಹೋ ! ತಡವೇಕೆ ? ತಡವೇಕೆ ? ಯುದ್ದಕ್ಕೆ ನಡೆಯಲಿ. ವೀರರೆಲ್ಲರೂ ಮು೦ಕೊಳ್ಳಲಿ. ನಮ್ಮ ಬಲಗಳನ್ನು ಬೇಗ ಬರಹೇಳಿರಿ ಎನ್ನುತ್ತ ಕೈಬೀಸಲು ಕಡಲೆ ಬಲು ಗಟ್ಟಿಗರಾದ ನಿರ್ಜರವೀರರು ಮಹಾಸೈನ್ಯದೊಡನೆ ಹೊರಟುಬಂದು ಸಮುದ್ರವು ಸಮುದ್ರವನ್ನು ತಾಗುವಂತೆ ರಾಕ್ಷಸರ ಬಲವನ್ನು ಪ್ರತಿಭಟಿಸಲು ಆಗ ಉಭಯ ಬಲವೂ ಕೂಡಿ ಒನಿಕೆ ಗದೆ ಗುರಾಣಿ ಕತ್ತಿ ಮುಸುಂಡಿ ಪ್ರಾಸ ಶಕ್ತಿ ಬಾಣ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಕಾದು, ಮಾತುಗಳಿಂದ ಮದಲಿಸುತ್ತ ಇದಿರುಬಿದ್ದವರನ್ನು ಕೊಲ್ಲು ತ ಜಗಳವಾಡುತ್ತಿರಲು ಆಗ ರಕ್ತಲೇಪಿತವಾದ ಮೈಗಳೂ ಹೊರಗೆ ಹೊರಟ ಕರುಳ ಳೂ ತುಂಡು ತುಂಡಾದ ಕೈ ಕಾಲ ಭೂ ಒಡೆದ ತಲೆಗಳೂ ಉಳ್ಳವರಾಗಿ ದೇವತೆಗಳಲ್ಲಿಯೂ ರಾಕ್ಷಸರಲ್ಲಿಯ ಅನೇಕರು ಮಡಿದರು. ಹೀಗೆಯೇ ಯುದ್ಧ ವಾಗುತ್ತಿರಲು ಬಲಿಷ್ಠರಾದ ರಾಕ್ಷಸವೀರರು ಅಪ್ರತಿಮಬಲವುಳ್ಳವರಾದ ಸುರ ವೀರರಿಂದ ಗಾಯ ಪಡೆದವರಾಗಿ ಕಂಗೆಟು ದಿಕ್ಕು ದಿಕ್ಕಿಗೆ ಓಡುತ್ತಿದ್ದರು. ಅದನ್ನು ಕಂಡು ರಾವಣನು ಶುಕ ಸಾರಣ ಮಹೋದರ ಧೂಮಾಕ್ಷ ದುರ್ಮುಖ ಖರ ಮಹಾ ಪಾರ್ಶ್ವ ಮಾರೀಚ ಪ್ರಹಸ್ತ ನಿಕುಂಭ ತ್ರಿಶಿರ ದೂಷಣ ಯಜ್ಞಾಂತಕ ಸುರಾಂತಕ