ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 183 ಅದು ಕಾರಣ ಅಂಥವನಿಗೆ ಜಯವು ಸಿದ್ಧಿಸುವುದು, ಪರಭಾಗಾ ಪಹಾರಕನೂ ಪರ ಸಂತಾಪಸಮುತ್ಪಾದಕನೂ ಮಹಾ ದ್ರೋಹಿಯೂ ಆಗಿರುವ ನಿನ್ನಂಥವನಿಗೆ ವ್ಯರ್ಥಾ ಯಾಸವಲ್ಲದೆ ಎಂದಿಗೂ ಜಯವುಂಟಾಗಲಾರದು. ಆದರೂ ಮರ್ಖರಿಗೆಲ್ಲಾ ಕಲ್ಲಾ ಝನಾದ ನೀನು ಹಿತಚಿಂತಕರಾದವರ ಹಿತೋಕ್ತಿಗಳನ್ನು ಕೇಳದೆ ಅನ್ಯಾಯವಾಗಿ ನಿನ್ನ ಪುತ್ರ ಮಿತ್ರ ಬಾಂಧವಾಶ್ರಿತರನ್ನು ಕಳೆದು ಕೊಂಡು ಏಕಾಂಗಿಯಾಗಿ ನಿಂತಿರುವಿ. ಈಗಲಾದರೂ ವಿವೇಕವನ್ನು ತಂದುಕೊಂಡು ನಿನ್ನ ತಮ್ಮ ನಾದ ವಿಭೀಷಣನಂತೆ ನಮಗೆ ಶರಣಾಗತನಾಗಿ ಸೀತೆಯನ್ನು ತಂದೊಪ್ಪಿಸಿ ವಿಭೀಷಣನೊಡನೆ ಕೂಡಿ ಅಂಕಾರಾ ಜ್ಯವನ್ನು ಎಂದಿನಂತೆ ಆಳಿಕೊಂಡಿರು, ಈ ನಮ್ಮ ಹಿತೋಕ್ತಿಗಳನ್ನು ಕೇಳದೆ ಬುದ್ದಿ ಭ್ರಂಶತೆಯಿ೦ದ ಗರ್ವಿಸಿದಿಯಾದರೆ ನಿನ್ನ ತಲೆಗಳನ್ನೂ ತರಿದುರುಳಿಸಿ ನಿನ್ನ ಬಲೆ ಯನ್ನು ಹರಿದು ಹದ್ದು ಕಾಗೆ ನಾಯ್ಕ ರಿಗಳಿಗೆ ಆಹಾರಾರ್ಥವಾಗಿ ಪಾಲುಮಾಡಿ ಕೊಡುವೆನು ಎಂದು ಹೇಳಿದನು. ಆಗ ಮೃತ್ಯುದೇವತೆಯ ಮನೆಗುರಿಯಂತಿರುವ ರಾವಣನು ರಾಮನನ್ನು ನಿಂದಿಸಿ ನುಡಿದನು, ಆಹಾ ! ಶ್ರೀ ರಾಮನ ಬಲಾತಿಶಯ ವನ್ನು ಬಣ್ಣಿಸುವವರಾರು ? ತತ್‌ಕ್ಷಣದಲ್ಲೇ ಅತಿ ತೀಕವಾದ ಬಾಣಗಳನ್ನು ಪ್ರಯೋಗಿಸಿ ರಾವಣನ ಹತ್ತು ತಲೆಗಳನ್ನೂ ಕತ್ತರಿಸಿ ಆಕಾಶಕ್ಕೆ ಹಾರಿಸಿದನು. ಮಹಾ 'ನಾದ ರಾವಣನ ತಸಶ್ನ ಕೈಯನ್ನು ವಿವರಿಸುವ ಬಗೆಯೆಂತು ? ಆ ಕೂಡಲೆ ಅವನ ದಶಶಿರಸ್ಸುಗಳೂ ಎಂದಿನಂತೆ ಹುಟ್ಟಿ ಬೆಳೆದು ಆರ್ಭಟಿಸಿದುವು. ಮತ್ತು ಅವನು ಅತ್ಯುಗ್ರ ಕೋಪದಿಂದ ಕೂಡಿದವನಾಗಿ ಅಸಂಖ್ಯಾತ ಮಹಾಸ್ತ್ರಗಳನ್ನು ರಾಮನ ಮೇಲೆ ಪ್ರಯೋಗಿಸಿದನು. ಆ ಅಸ್ತ್ರಗಳು ಕೌಸಲ್ಯಾನಂದನನನ್ನು ಮರ್ಛಗೊಳಿಸಿದು ದಲ್ಲದೆ ಬ್ರಹ್ಮಾಂಡಮಂಡಲವನ್ನೆಲ್ಲಾ ತುಂಬಿ ಜೀವಿಜಾಲವನ್ನು ಭಯಸಾಗರದಲ್ಲಿ ಮುಳುಗಿಸಿ ಕಡೆಗೆ ದೇವಲೋಕಕ್ಕೆ ಹೋಗಿ ಇಂದ್ರಾದಿ ದೇವತೆಗಳ ಒಡಲುಗಳಲ್ಲಿ ಹೊಕ್ಕು ನೋಯಿಸಿ ಮೈ ಮರೆಸಿದುವು. ಅನಂತರದಲ್ಲಿ ಶೈತ್ಯೋಪಚಾರಗಳಿಂದ ತಿಳಿವನ್ನು ಹೊಂದಿ ಮೇಲೆದ್ದ ಶ್ರೀರಾ ಮನನ್ನು ಕುರಿತು ಮಾತಲಿಯು-ಎಲೈ ಶ್ರೀ ರಾಮನೇ, ಈ ಖಳನು ಬಲು ಬಲ್ಲಿ ದನು. ಕೂರರ ಕುಲನಾಯಕನು, ಮೂಢರ ಮನೆಯ ಗುರು ವು, ದುಷ್ಪರ ಗರು ಡಿಯ ಆಚಾರನು, ಪಾಪಿಷ್ಟರ ಪರಮ ಮಿತ್ರನು. ದ್ರೋಹ ಕರ್ಮದೀಕ್ಷಿತನು. ಆದುದರಿಂದ ಇವನ ಮಹಾಸ್ತ್ರಗಳ ಸೆಟ್ಟನ್ನು ತಾಳುವುದು ಅಸಾಧ್ಯವು, ಇನಕುಲ ದರಸರಿಗೆ ಯುದ್ಧ ರಂಗದಲ್ಲಿ ಆಲಸ್ಯವು ಸಲ್ಲದು. ಅದು ಕಾರಣ ಶೀಘ್ರವಾಗಿ ಮಹಾ ಸ್ಯಗಳನ್ನು ತೊಡು, ಪ್ರಯೋಗಿಸು, ಖಳನ ಮಸ್ತಕಗಳ ಸರಿಸದಲ್ಲಿ ಕೂರಲಗುಗಳಾ ಡುತ್ತಿರಲಿ, ಕೈಗುಂದಬೇಡವೆಂದು ಹೇಳಿ ತೇರಿನ ತೇಜೆಗಳನ್ನು ಮುಂದಕ್ಕೆ ನೂಕಿ ದನು, ಮಾತಲಿಯ ಮಾತುಗಳು ಕಿವಿಗಳಿಗೆ ಬೀಳುವುದಕ್ಕೆ ಮುಂಚಿತವಾಗಿಯೇ ತೀವ್ರಗತಿಪ್ರಯುಕ್ತಗಳಾದ ರಾಮನ ಬಾಣಗಳು ರಾವಣನ ತಲೆಗಳನ್ನು ಕಡಿದು ಹಾರಿಸುತ್ತಿದ್ದುವು. ಆ ತಲೆಗಳು ರಣದೇವತೆಯು ಆಡುತ್ತಿರುವ ಚಂಡುಗಳೊ ಎಂಬಂತೆ ಪ್ರಕಾಶಿಸುತ್ತಿದ್ದುವು: ಹೀಗೆ ಶ್ರೀ ರಾಮನು ನೂರಾರುಸಾರಿ ರಾವಣನ ತಲೆ ಗಳನ್ನು ತರಿದಿಕ್ಕುತ್ತಿದ್ದರೂ ಅವನ ತಲೆಗಳು ಮತ್ತೆ ಮತ್ತೆ ಬೆಳೆದು ಬೊಬ್ಬಿರಿಯುತ್ತಿ