ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 241 ಸಂಭೂತನಾದ ಪುರುಷನಾಗಿರುವನು. ಇದು ನಿಶ್ಚಯವು ಎಂದು ಯೋಚಿಸಿಕೊಂಡು ಪ್ರಹ್ಲಾದನನ್ನು ಕರೆದು ಕೊಂಡು ಹಿರಣ್ಯಕಶಿಪುವಿನ ಬಳಿಗೆ ಬಂದು ನಡೆದ ಸಂಗತಿಯ ನ್ನೆಲ್ಲಾ ವ್ಯತ್ಯಾಸವಿಲ್ಲದಂತೆ ಹೇಳಿದರು. ಹಿರಣ್ಯಕಶಿಪುವು ಆ ಮಾತುಗಳನ್ನು ಕೇಳಿ ಪ್ರಳಯಾಗ್ನಿಗೆ ಸಮಾನವಾದ ಕೋಪದಿಂದ ಸಂತಪ್ತನಾಗಿ ಹುಬ್ಬುಗಳನ್ನು ಹಾರಿಸುತ್ತ ತುಟಿಗಳನ್ನು ಕುಣಿಸುತ್ತ ಆ ದೂತರನ್ನು ಕುರಿತು ದೊಡ್ಡ ದೊಡ್ಡವುಗಳಾದ ಒಣ ಮರಗಳನ್ನು ತೆಗೆದುಕೊಂಡು ಬಂದು ಒಟ್ಟಿ ನಾಲ್ಕು ಕಡೆಗಳಿಗೂ ಅಗ್ನಿಯನ್ನು ಹೊತ್ತಿಸಿ ಚೆನ್ನಾಗಿ ಉರಿಸಿ ಈ ನೀಚನ ಕೈಕಾಲುಗಳನ್ನು ಕಟ್ಟಿ ಆ ಮಹಾಗ್ನಿ ಮಧ್ಯ ದಲ್ಲಿ ಹಾಕಿಬಿಡಿರಿ ಎಂದು ನೇಮಿಸಿ ಕಳುಹಿಸಿದನು. ಅವರೆಲ್ಲರೂ ಅದೇ ಮೇರೆಗೆ ಬಲ್ಗೊರಡುಗಳನ್ನು ತಂದು ಒಟ್ಟಿ, ಅದಕ್ಕೆ ಬೆಂಕಿಯನ್ನು ಹಾಕಿ ಹೊತ್ತಿಸಿ ಚೆನ್ನಾಗಿ ಉರಿಯುವಂತೆ ಮಾಡಲು ; ಆಗ ಮಹಾಜ್ವಾಲೆಯು ಮೇಘಮಂಡಲವನ್ನು ಹೊಯ್ಕ ಸ್ಪಳಿಸಿ ಮೇಲುಲೋಕಗಳನ್ನು ನೆಕ್ಕಿ ಮುಕ್ಕುವುದೋ ಎಂಬಂತಿರುವ ಮಹಾಗ್ನಿ ಯಲ್ಲಿ ಕೈಕಾಲುಗಳನ್ನು ಕಟ್ಟಿ ಪ್ರಹ್ಲಾದನನ್ನು ತೆಗೆದುಕೊಂಡು ಬಂದು ಹಾಕಿದರು. ಆ ಕೂಡಲೆ ಅಗ್ನಿ ದೇವತೆಯು ಪ್ರತ್ಯಕ್ಷನಾಗಿ ಬಂದು ಕೋಟಿಸೂರ್ಯ ಪ್ರಕಾಶಯುಕ್ತ ನೂ ಮಹಾಮಹಿಮೆಯುಳ್ಳವನೂ ಆದ ಪ್ರಹ್ಲಾದನನ್ನು ದಹಿಸುವುದಕ್ಕೆ ಶಕ್ತಿ ಸಾಲದುದ ರಿಂದ ಅವನನ್ನು ಬಹಳವಾಗಿ ಉಪಚರಿಸಿ ಸಂತೋಷದಿಂದಲೂ ಭಕ್ತಿಯಿಂದಲೂ ಎತ್ತಿ ಕೊಂಡು ಬಂದು ಆ ರಾಜದ,ತರ ವಶಕ್ಕೆ ಕೊಟ್ಟು ಆ ಬೆಂಕಿಯಲ್ಲಿಯೇ ಹೊಕ್ಕು ಮರಿ ಸಿಕೊಂಡನು. ಅನಂತರದಲ್ಲಿ ದೂತರು ಬಂದು ಹಿರಣ್ಯಕಶಿಪುವಿಗೆ ಈ ವರ್ತಮಾನ ವನ್ನೂ ಹೇಳಲು ; ಕೂಡಲೆ ಕೋಪೋಗ್ರನಾದ ಹಿರಣ್ಯಕಶಿಪುವು-ಆ ಪಾಪಿಯನ್ನು ಘಟಸರ್ಪಗಳಿಂದ ಕಚ್ಚಿಸಿ ಕೊಂದುಹಾಕಿರಿ ಎಂದು ಅಪ್ಪಣೆಯನ್ನು ಕೊಡಲು ; ಅವರು ಶೀಘ್ರವಾಗಿ ದೊಡ್ಡ ದೊಡ್ಡ ಹಾವುಗಳನ್ನು ತೆಗೆದುಕೊಂಡು ಬಂದು ಆ ಪ್ರಹ್ಲಾದನ ಮೇಲೆ ಬಿಟ್ಟು ಹೊಡೆದು ತಿವಿದು ಕೋಪಗೊಳಿಸಲು ; ವಿವಿಧವಾದ ಆ ಸರ್ಪಗಳೆಲ್ಲವೂ ಅವನನ್ನು ಸ್ವಲ್ಪವಾದರೂ ಮುಟ್ಟದೆ ಹಿಂದಿರುಗಿ ಆ ರಾಜದೂತರನ್ನೇ ಕಚ್ಚಿ ಕೊಲ್ಲುವುದಕ್ಕೆ ಮೊರೆಯುತ್ತ ಓಡಿಸಿಕೊಂಡು ಬಂದುವು. ಆಗ ಅವರೆಲ್ಲರೂ ಹೆದರಿಕೊಂಡು ಪ್ರಾಣಭೀತಿಯಿಂದ ಕಡಿದವರಾಗಿ ದಿಕ್ಕು ದಿಕ್ಕಿಗೆ ಓಡಿ ಕಡೆಗೆ ಹಿರ ಣ್ಯಕಶಿಪುವಿನ ಬಳಿಯನ್ನು ಸೇರಿ ಬದುಕಿದೆವೆಂದುಕೊಂಡು ನಡೆದ ಸಂಗತಿಯನ್ನೆಲ್ಲಾ ಸ್ವಲ್ಪವನ್ನಾದರೂ ಬಿಡದೆ ಅವನೊಡನೆ ಹೇಳಿದರು. ಅನಂತರದಲ್ಲಿ ಹಿರಣ್ಯಕಶಿಪುವು ಮಹಾ ಕೋಪಸಂತಾಪಯುಕ್ತನಾಗಿ ಪರ್ವತಾಗ್ರಗಳಿಂದ ನೂಕಿಸುವುದೇ ಮೊದಲಾದ ಕೃತ್ಯಗಳನ್ನು ಮಾಡಿಸಿದಾಗ್ಯೂ ಅವನಿಗೆ ಮರಣವುಂಟಾಗದಿದ್ದುದನ್ನು ಕಂಡು ಮತ್ತೂ ಕೋಪದಿಂದ ಹೆಚ್ಚಾದ ದ್ವೇಷವುಳ್ಳವನಾಗಿ ದೂತರನ್ನು ನೋಡಿ ಆ ಪ್ರಹ್ಲಾದ ನನ್ನು ನಮ್ಮ ಚಾವಡಿಗೆ ಹಿಡಿದು ಕೊಂಡು ಬನ್ನಿರೆಂದು ಆಜ್ಞಾಪಿಸಲು ; ಅವರು ಶೀಘ್ರ ವಾಗಿ ಅವನನ್ನು ಹಿಡಿದು ಕೊಂಡು ಬರಲು ; ಆಗ ಹಿರಣ್ಯಕಶಿಪುವು ವೇಗದಿಂದವನ ಬಳಿಗೆ ಹೋಗಿ ಅವನ ಜುಟ್ಟನ್ನು ಹಿಡಿದು ಕೊಂಡು ಕತ್ತಿಯನ್ನು ತೆಗೆದು ಕೊಂಡುಎಲಾ, ಪರಮ ವಿರೋಧಿಯ ಕುಲದ್ರೋಹಿಯ ಆದ ಪಾಪಿಷ್ಠನೇ ! ನೀನು ಹೇಳುವ 16