ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

274 ಕಥಾಸಂಗ್ರಹ-೫ ನೆಯ ಭಾಗ ಸಿದನು, ಆ ಮೇಲೆ ಆ ಸರ್ಪವು ಕೃಷ್ಣನ ತುಳಿತವನ್ನು ತಡೆಯಲಾರದೆ ಕಂಗೆಟ್ಟು ಬಲ ಹೀನತೆಯನ್ನು ಹೊಂದಿ ಸಾಯುವ ಅವಸ್ಥೆಗೆ ಬಂದಿತು. ಅಷ್ಟರಲ್ಲಿ ಕಾಳಿಂಗನಾಗೇಂದ್ರನ ಪತ್ನಿ ಯರಾದ ನಾಗಕನ್ನಿಕೆಯರು ಓಡಿಬಂದು ಕೃಷ್ಣನಿಗೆ ಸಾಷ್ಟಾಂಗವಾಗಿ ನಮಸ್ಕ ರಿಸಿ ಬಹಳವಾಗಿ ಸ್ತೋತ್ರಮಾಡಿ-ಎಲೈ ಮಹಾತ್ಮನೇ, ನಮ್ಮ ಪತಿಯನ್ನು ಕಾಪಾಡಿ ನಮ್ಮ ಮುತ್ತೆ ದೆತನವನ್ನು ರಕ್ಷಿಸಬೇಕು ಎಂದು ದೀನತೆಯಿಂದ ಕೂಡಿ ಬೇಡಿ ಕೊಂ ಡುದರಿಂದ ಶ್ರೀಕೃಷ್ಣನು ಆ ಕಾಳಿಂಗನನ್ನು ಬಿಟ್ಟು ಇನ್ನಿಲ್ಲಿರದೆ ಈ ಕ್ಷಣದಲ್ಲಿಯೇ ಇಲ್ಲಿಂದ ಹೊರಟುಹೋಗಿ ಸಮುದ್ರದಲ್ಲಿ ಸೇರಿಕೋ ಎಂದು ಅಪ್ಪಣೆಯನ್ನು ಕೊಟ್ಟು ದರಿಂದ ಅದು ಆ ಸ್ಥಳವನ್ನು ಬಿಟ್ಟು ಹೊರಟು ತನ್ನ ಸಂಸಾರಸಹಿತವಾಗಿ ಹೋಗಿ ಸಮುದ್ರವನ್ನು ಸೇರಿಕೊಂಡಿತು. ತರುವಾಯ ನಂದಗೋಪನೇ ಮೊದಲಾದ ಗೊಲ್ಲ ಗೆಲ್ಲಾ ಈ ಮಹದಾಶ್ಚರ್ಯವನ್ನು ಕಂಡು--ಈ ಬಾಲಕನು ಸಾಮಾನ್ಯ ಬಾಲಕನಲ್ಲ. ದೇವಾಂಶಸಂಭೂತನಾದ ಬಾಲಕನೇ ಸರಿ ಎಂದು ಒಬ್ಬರಿಗೊಬ್ಬರು ಮಾತಾಡಿ ಕೊಂಡು ಸಂತೋಷ ಪಡುತ್ತಿದ್ದರು. ಮತ್ತೊಂದು ದಿವಸ ಶ್ರೀಕೃಷ್ಣನು ತನಗೆ ದನಗಳನ್ನು ಕಾಯುವ ಪ್ರಾಯವಾ ದುದರಿಂದ ಬಲರಾಮನ ಜೊತೆಯಲ್ಲಿ ದನಗಳನ್ನು ಕಾಯುವ ಹುಡುಗರ ಸಂಗಡ ತನ್ನ ಮನೆಯ ದನಗಳನ್ನೂ ಅಟ್ಟಿಕೊಂಡು ಹೋಗಿ ಗೋವರ್ಧನಗಿರಿಯ ತಪ್ಪಲಲ್ಲಿ ಅವುಗಳನ್ನು ಮೇಯಿಸುತ್ತ ಆ ಗಿರಿಯ ಸಮಿಾಪದಲ್ಲಿರುವ ತಾಳೀವನವನ್ನು ಕಂಡು ಜೊತೆಯ ಹುಡುಗರನ್ನು ಕರೆದು-ಇಲ್ಲಿ ನೋಡಿರಿ ; ಈ ವನದಲ್ಲಿ ಓಲೆಯ ಹಣ್ಣು ಗಳು ಎಷ್ಟು ಚೆನ್ನಾಗಿರುವುವು, ಅವುಗಳನ್ನು ಕೆಡಹಿಕೊಂಡು ತಿನ್ನೋಣ ಬನ್ನಿರಿ ಎಂದು ಹೇಳಲು ; ಅವರೆಲ್ಲರೂ-ಅಯ್ಯೋ, ಅಪ್ಪಾ ! ಆಗದಾಗದು ! ಮಹಾವಿ ಪತ್ತು ಸಂಭವಿಸುವುದು ! ನಾವು ತಿರುಗಿ ಹೋಗಿ ನಮ್ಮ ತಾಯಿತಂದೆಗಳ ಮುಖಗ ಳನ್ನು ನೋಡುವುದಿಲ್ಲ, ಇದು ನಿಜ, ಈ ವನದಲ್ಲಿ ಉಂಟಾಗುವ ಹೆಂಡವು ಪ್ರತಿ ನಿತ್ಯ ದಲ ಕಂಸಾಸುರನ ಪತ್ನಿ ಯರ ಪಾನಾರ್ಥವಾಗಿ ಸಾಗಿಹೋಗುತ್ತಿರುವುದು. ಈ ವನದಲ್ಲಿ ಧೇನು ಕನೆಂಬ ಕತ್ತೆಯ ರೂಪಿನ ಒಬ್ಬ ದುಷ್ಟ ರಾಕ್ಷಸನಿರುವನು. ಮೊದಲು ಒಂದು ಸಾರಿ ಶಚೀಸಮೇತನಾದ ಇಂದ್ರನು ಈ ಓಲೆಮರಗಳ ಹೆಂಡವನ್ನು ಕುಡಿಯಬೇಕೆಂಬ ಅಪೇಕ್ಷೆಯಿಂದ ಬಂದು ಆ ಕತ್ತೆಯ ಕಾಲಿನಿಂದ, ಒದಿಸಿಕೊಂಡು ನೋವು ತಿಂದು ಭಯಪಟ್ಟು ಹಿಂದಿರುಗಿ ನೋಡದೆ ಅಮರಾವತಿಗೆ ಓಡಿಹೋದನು. ನಾವು ಇಂಥ ವನಕ್ಕೆ ಹೋದರೆ ಬದುಕುವೆವೇನಪ್ಪಾ ? ನಮಗೆ ಬೇಡಪ್ಪಾ ! ನಾವು ಖಂಡಿತವಾಗಿ ಬರುವುದಿಲ್ಲ ಎಂದು ಹೇಳಿದರು, ಅದಕ್ಕೆ ಕೃಷ್ಣನು ಅವರನ್ನು ನೋಡಿ ನಕ್ಕು-ಅಯ್ಯೋ ಬಾಳೇ! ನಿಮ್ಮ ಧೈರ್ಯವು ಕಂಡ ಹಾಗಾಯಿತು ! ಒಂದು ಕತ್ತೆಗೆ ಹೆದರಿಕೊಂಡು ಅಲ್ಲಿಗೆ ಹೋಗಿ ದಿವ್ಯವಾದ ಹಣ್ಣುಗಳನ್ನು ತಿನ್ನದೆ ಇರಬಹುದೋ? ಇ ದು ಗಂಡಸುತನವೋ? ಎಂದು ಹೇಳಿ ತಾನು ಶೀಘ್ರವಾಗಿ ಅಲ್ಲಿಗೆ ಹೋಗಿ ವನವನ್ನು ಹೊಕ್ಕನು, ಜೊತೆಯ ಹುಡುಗರೆಲ್ಲರೂ ಭಯಪಟ್ಟು ಹೋಗಲಾರದೆ ಕೃಷ್ಣನು ಏನಾ ಗುವನೋ ಎಂದು ಯೋಚಿಸುತ್ತ ನೋಡುತ್ತ ದೂರದಲ್ಲೇ ನಿಂತಿದ್ದರು. ತರುವಾಯ