ಪುಟ:ಕಥಾ ಸಂಗ್ರಹ - ಭಾಗ ೨.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥ 43 ತುಟಿಗಳೂ ಉಳ್ಳವನಾಗಿ ದುಃಖಿಸುತ್ತಿರುವ ತನ್ನ ತಂದೆಯನ್ನು ನೋಡಿ ಮೊದಲು ಆತನ ಕಾಲುಗಳಿಗೆ ನಮಸ್ಕರಿಸಿ ಆ ಮೇಲೆ ಕೈಕೇಯಿಗೆ ವಂದಿಸಿ ಜಡೀಭೂತನಾಗಿ ನಿಂತು ಕೊಂಡನು. ಆಗ ಕಾಮನನ್ನು ನೋಡಿ ಧಾರಾಸಂಪಾತರೂಪವಾಗಿ ಕಣ್ಣೀರು ಗಳನ್ನು ಸುರಿಸುತ್ತ ದಶರಥನು-ಹಾ ! ರಾಮಾ ! ಎಂದು ಗಟ್ಟಿಯಾಗಿ ಕೂಗಿ ಕೆಳಗೆ ಬಿದ್ದು ಮೂರ್ಛಹೊಂದಿದನು. ಆಗ ರಾಮನು ರಾಹುಗ್ರಸ್ತನಾದ ಚಂದ್ರನಂ ತೆಯ ಮೇಘಮಾಲೆಯಿ೦ದ ಆಚ್ಛಾದಿಸಲ್ಪಟ್ಟ ಸೂರ್ಯನಂತೆಯ ಸುಳ್ಳು ಹೇಳಿದ ಋಷಿಯಂತೆಯ ತೇಜೋಹೀನನಾಗಿರುವ ತಂದೆಯನ್ನು ನೋಡಿ ಭಯಭ್ರಾಂತನಾಗಿ ತಿರಿಗಿ ಕೈಕೇಯಿಗೆ ವಂದಿಸಿ-ಎಲೈ ತಾಯೇ, ನನ್ನ ತಂದೆಯು ಮೊದಲಿನಂತೆ ನನ್ನನ್ನು ಏಕೆ ಸಂತೋಷಪಡಿಸುವುದಿಲ್ಲ? ಪೂರ್ವದಲ್ಲಿ ನನ್ನ ತಂದೆಯು 'ಯಾವ ಕಾರಣದಿಂದಾದರೂ ಕೋಪವುಳ್ಳವನಾಗಿದ್ದರೆ ನನ್ನನ್ನು ನೋಡಿದ ಮಾತ್ರದಿಂದಲೇ ಪ್ರಸನ್ನ ವದನನಾಗುತ್ತಿದ್ದನು. ಅಂಥವನು ಈಗ ನನ್ನನ್ನು ನೋಡಿ ಏತಕ್ಕಾಗಿ ಇಷ್ಟು ದುಃಖವನ್ನೂ ಸಂಕಟವನ್ನೂ ಅನುಭವಿಸುತ್ತಿರುವನು ? ಎಳೆಯದಾದ ಮಾವಿನ ಚಿಗುರು ಬೇಸಿಗೆಯ ಉರಿಬಿಸಿಲಿನಿಂದ ಕಂದಿರುವಂತೆ ಈತನ ಕೋಮಲವಾದ ಮುಖವ ಕ೦ದಿರುವುದಕ್ಕೆ ಕಾರಣವೇನು ? ನಾನೇನಾದರೂ ಅರಿಯದೆ ಅಪರಾಧ ಮಾಡಿದುದರಿಂದ ಇಷ್ಟು ಕೋಪಿಷ್ಠ ನಾಗಿರಬಹುದೋ ? ಹಾಗೇನಾದರೂ ಇದ್ದರೆ ನೀನು ನನ್ನಲ್ಲಿ ಕನಿಕರವನ್ನಿಟ್ಟು ನನಗೋಸ್ಕರ ಪ್ರಸನ್ನನಾಗುವಂತೆ ಮಾಡಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತಿರುವ ರಾಮನನ್ನು ನೋಡಿ--ಕರಾತ್ಕಳಾದ ಕೈಕೇ ಯಿಯು ಲಜ್ಜೆಯನ್ನು ತೊರೆದು ತನ್ನ ಆಲೋಚನೆಗೆ ಅನುಕೂಲವಾದ ಮಾತುಗಳನ್ನು ಹೇಳಲುದ್ಯುಕ್ತಳಾಗಿ ಎಲೈ ರಾಮನೇ, ನಿನ್ನ ಮೇಲೆ ಅರಸಿಗೆ ಸ್ವಲ್ಪವಾದರೂ ಕೋಪವಿಲ್ಲ, ಆತನ ಮನೋಗತವೊಂದುಂಟು. ಅದು ಅತಿಕ್ರಮಿಸುವುದಕ್ಕೆ ಅಸಾಧ್ಯವಾದುದು. ನೀನು ಏನು ಹೇಳುವಿಯೋ ಎಂಬ ಭಯದಿಂದ ಆತನು ಅದನ್ನು ಹೇಳಲಾರದೆ ಮನೋವ್ಯಥೆ ಯನ್ನನುಭವಿಸುತ್ತ ಇದ್ದಾನೆ. ಪ್ರಿಯನಾದ ನಿನಗೆ ಅಪ್ರಿಯವಾದ ಮಾತನ್ನು ಹೇಗೆ ಹೇಳಿಯಾನು ? ಪೂರ್ವದಲ್ಲಿ ಪ್ರತಿಜ್ಞಾಪೂರ್ವಕವಾಗಿ ನನಗೆ ಎರಡು ವರಗಳನ್ನು ಕೊಟ್ಟು ಈಗ ಅವುಗಳನ್ನು ನಡಿಸಿಕೊಡುವ ವಿಷಯದಲ್ಲಿ ಸಾಧಾರಣ ಜನರಂತೆ ಈ ರೀತಿಯಾಗಿ ಸಂಕಟಪಟ್ಟು ಪೇಚಾಡುತ್ತಿರುವನು. ಸತ್ಯಸಂಧನಾದ ಈತನು ನನಗೆ ಕೊಟ್ಟ ಭಾಷೆಯನ್ನು ನೀನಾದರೂ ನಡಿಸಿ ಆತನನ್ನು ಸತ್ಯವಂತನನ್ನಾಗಿ ಮಾಡು. ಆ ಕೆಲಸವು ನಿನಗೆ ಪ್ರಿಯವಾಗಿದ್ದರೂ ಅಪ್ರಿಯವಾಗಿದ್ದರೂ ನೀನು ಅದನ್ನು ನಡಿಸಿ ಕೊಡುವುದಾದರೆ ಆ ಸಂಗತಿಯನ್ನು ವಿವರವಾಗಿ ಹೇಳುವೆನು ಎನಲು ; ರಾಮನು ಆ ಮಾತನ್ನು ಕೇಳಿ ತಂದೆಯ ಸನ್ನಿಧಾನದಲ್ಲಿ ಕೈಕೇಯಿಯನ್ನು ಕುರಿತು-ಎಲೈ ತಾಯೇ, ನೀನು ನನಗೆ ಈ ವಿಧವಾದ ಮಾತುಗಳನ್ನು ಹೇಳಬಹುದೇ ? ಪೂಜ್ಯನಾದ ನನ್ನ ತಂದೆಯ ಅಪ್ಪಣೆಯಾದರೆ ಉರಿಯುವ ಬೆಂಕಿಯಲ್ಲಾದರೂ ಬೀಳುವೆನು. ಪ್ರಾಣಾಪಹಾರಕವಾದ ವಿಷವನ್ನಾದರೂ ಪಾನಮಾಡುವೆನು. ಅಗಾಧವಾದ ಕಡಲಿ