ಪುಟ:ಕನ್ನಡದ ಬಾವುಟ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಡಿನಲಿ ನುಸಿಯುತ್ತ, ಕಲ್ಲಿನಲ್ಲಿ ಮೊರೆಯುತ್ತ, ಮರಳಿನಲ್ಲಿ ಸುಳಿಸುಳಿದು, ಸರಿಯ ದುಮುಕಿ, ಪಯಿರುಗಳ ಬದುಕಾಗಿ, ಹೊಳಲುಗಳ ಬೆಳಕಾಗಿ, ಕಣ್ಣುಗಳ ಬೆರಗಾಗಿ ಹರಿವ ಹೊನಲು, ಅಲ್ಲಿ ಅಲೆಯಲೆಯಾಗಿ ಬಂದು, ನೆಲೆ ನೆಲೆಯಾಗಿ ನಿಂದು, ಹಲತರದಿಂದ ನುಡಿದು, ನಡೆದು, ಕಡೆಗೆ ನಾಡೊಂದೆಂದು, ದೊರೆಯೊಬ್ಬ ನಮಗೆಂದು, ಬಾಳ ಬೆಲೆ ಹುದುವೆಂದು ಕಲಿತು, ಕಲೆತು, ಜಾಣಿನಲಿ, ಚೆಲುವಿನಲಿ, ಸೊಗಸಿನಲಿ, ನಯದಲೌ ದಾರ್ಯದಲಿ, ಕಾರ್ಯದಲ್ಲಿ ಕಳಶವೆನಿಸಿ, ಮೆರೆಯುತಿಹ ಜನನ ನಾನೇನೆಂಬೆ, ಎಂತು ನಾ ಕನ್ನಡಿಗರೆ ಸಿರಿಯ ಬಣ್ಣಿಸುವೆನು. ಚಿನ್ನದ ನಾಡದು, ಮೈಸೂರು. ಗಂಧದ ಗುಡಿಯದು, - ಮೈಸೂರು. ವೀಣೆಯ ಬೆಡಗದು, ಮೈಸೂರು. - ನಾಲುಮಡಿ ಕೃಷ್ಣನ ಮೈಸೂರು. ಅಲ್ಲೊಬ್ಬ ನಮಗಿಹನು ನಾಯಕನು ; ಭಕ್ತಿಯಲಿ ನಿಲು ನಿಲುಕಿ ಕಣ್ ತುಂಬ ನೋಡುತಿರಲು, ಆನೆಯಂಬಾರಿಯಲಿ ನಸುನಗೆಯನಿಕ್ಕೆಲಕೆ ಬೀರಿ, ಜನರಕ್ಕರೆಯನುಕ್ಕಿಸುವನು. ಧೀರನಾತನು ; ತುಂಬು ಗಾಂಭೀಯ್ಯ ದಲಿ ಸತ್ಯವನೆ ಎತ್ತಿ ನಿಲಿಸುವನು - ಪ್ರಜೆಯ ತಂದೆ ; ಮರೆತು ತನ್ನ ನು ರಾಜ್ಯಸೇವೆಯಲಿ, ಸಲಿಸುವನು ಧಮ್ಮವನು ರಾಜರ್ಷಿ ಕರ್ಮಯೋಗಿ, ಬನ್ನಿ ಕೆಳೆಯರ, ನಮ್ಮ ಬಾಳಿಕೆಯ ಕಾಣಿಕೆಯನೊಪ್ಪಿಸುವ, ಕೈಕೊಳುವ

  • ದೊರೆಯ ಗುರಿಯ ; ನೋಹಿಯಾತನದು- ತನ್ನರಮನೆಯ ಹಸಗೆಯು ಬೆಳಗಿದಂತೆಯೆ, ಬೆಳಗಿ

ಊರ, ನಾಡ,