ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



78 ಕರ್ಣಾಟಕ ಕವಿಚರಿತೆ. [15 ನೆಯ

         ಸರಿಯದಿಹುದೆ ಧಮ೯ ತನುವ | ಕಳೆಯದಿಹುದೆ ಸದ್ದಿ ಚಿತ್ತ |
         ವಲುಗೆದಿಹುದೆ ಮುಕ್ತಿ ಮಣಿದು ನುಡಿದ ವಕ್ಕಣೆ ||
         ಹೊಳೆಯದಿಹುದೆ ಸತ್ಯ ರೋಷ | ದಳೆಯದಿಹುದೆ ಶಾಂತಿ ಕಪಟ |
         ಮೊಳೆಯದಿಹುದೆ ಸೌಖ್ಯವಿದನು ತಿಳಿದುಲವ ಕೃತಾರ್ಧನು ||
         ಶಮದಮಾದಿಗುಣವಿಶಿಷ್ಟ | ವಿಮಲಚಿತ್ರಪುಷ್ಪನಷ್ಟ |
         ಮಮತೆಹೀನ ದುಃಖಸುಖಸಮಾನವಾಗಿಯೇ ||
         ಭ್ರಮಣಭವವಿಕಾರನಾಟ್ಯ | ವಿಮುಖನಾಗಿ ತನ್ನ ತಾನೆ |
         ಸಮವನದನನ್ಯ ಸುಖದೊಳಿರ್ಪನವ ಕೃತಾರ್ಧನು ||
                                                   ---------------
                                                 6. ಅವಧೂತಗೀತೆ
      ಇದು ವಿರಕ್ತಿಬೋಧಕವಾದ ಹಾಡಿನ ರೂಪದಲ್ಲಿದೆ; ಹಾಡು 101. ಅಂತ್ಯದಲ್ಲಿ ಅವಧೂತಲಕ್ಷಣವು ಹೇಳಿದೆ ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಒಂದೆರಡು ನುಡಿಗಳನ್ನು ತೆಗೆದು ಬರೆಯುತ್ತೇವೆ----
           ಹಸುಗರಿಯದೆ ಸೊಣಗಳು ಮತಿಗೆಟ್ಟು| ಮುಸುರೆಯ ಮಡಕೆಯೊಳಗೆಮೊಗವಿಟ್ಟು | 
           ದೆಸೆಗಾಣದೆ ಬಾಧೆಗೆ ತನುಗೊಟ್ಟು |   ಪೆಸರ್ಗೊಳಲಿದು ಸಂಸಾರದ ಗುಟ್ಟು ||
           ವಡಬ ಜಡಂ ಗುಣಮಹಿಸಂತಾನ | ಸುಡುವ ವಿಷಂ ಪೀಯೂಷಸಮಾನ| 
           ಪೊಡೆವ ಸಿಡಿಲ್ ಮಂಜುಳವರಗಾನ | ಮೃಡಗುರುಕರುಣಕಟಾಕ್ಷದ ಭಾನ ||
                                                    ----------------------
                                                  7. ಮನೋವಿಜಯಕಾವ್ಯ
    ಇದು ಕುಸುಮಪಟ್ಟದಿಯಲ್ಲಿ ಬರೆದಿದೆ; ಪ್ರಕರಣ 9; ಪದ್ಯ 355. ಈ ಗ್ರಂಥದಲ್ಲಿ--ಸುವಿವೇಕನೆಂಬ ಜ್ಞಾನಿ ಸಂಸಾರಕಲಸಿ  ಗುರುವಿಡಿದು ತನ್ನ ನಿಜ ತಾನಾದ ಸಂಗತಿ ಹೇಳಿದೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ----
             ಸದುಗುರುಕಟಾಕ್ಷದಿಂ | ದುದಿಸಿದ ನಿಜಾನುಭವ | 
             ದುದಯದಿಂದಖಿಲಾದ್ಯರನುಮತದೊಳು || 
             ವಿದಿತವೇನಾಗಮೋ | ಕ್ರದೊಳುಪನಿಷತ್ತುಗಳೊ |
             ಳೂದವಿಸಿದ ಸಮ್ಮತಿಯ ಸಂಗ್ರಹವಿದು ||