ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

216 ಕರ್ಣಾಟಕ ಕವಿಚರಿತೆ. [16ನೆಯ

       ಭಿಕ್ಷಾ ಟನಚರಿತೆಯನ್ನು ಬರೆದಿರುವ ಗುರುಲಿಂಗವಿಭು ಇವನೇ ಆಗಿರಬಹುದೋ ಎಂಬ ಸಂಶಯವುಂಟಾಗುತ್ತದೆ. ಮಂತ್ರಿಯಾದುದರಿಂದ ವಿಭು ಎಂಬ ವಿಶೇಷಣವು ಯುಕ್ತವಾಗಿ ತೋರಬಹುದು, ಆದರೆ ಗುರು ಎಂಬ ಉಪಪದವಿಲ್ಲದಿರುವುದರಿಂದಲೂ ಭಿಕ್ಷಾಟನಚರಿತೆಯಲ್ಲಿ ಕವಿಯ ವಿಷಯವಾಗಿ ಆವ ಅಂಶಗಳೂ ಹೇಳಿಲ್ಲವಾದುದರಿಂ ದಲೂ ಆ ಕವಿ ಬೇರೊಬ್ಬನಾಗಿರಬಹುದೆಂದು ತೋರುತ್ತದೆ.
    ಇವನ ಗ್ರಂಥ
                               ಕಬ್ಬಿಗರ ಕೈಪಿಡಿ
       ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ; ಪದ್ಯ 100, ಇದರಲ್ಲಿ ಮುಖ್ಯವಾಗಿ ಹಳಗನ್ನಡಪದಗಳ ಅರ್ಥವು ಹೇಳಿದೆ. ಇಲ್ಲಿ ಪ್ರತಿಪಾದಿತವಾದ ವಿಷಯವನ್ನು ಕವಿ ಈ ಪದ್ಯಭಾಗದಲ್ಲಿ ಹೇಳಿದ್ದಾನೆ____
    ಮಿಸುವ ಗೂಢಪದಪ್ರಯೋಗದೊಳ್ವಂ ರಸಮ |
    ನೊಸರ್ವಚ್ಚಗನ್ನಡದ ಚೆಲ್ವುಮಂ ತದ್ಭವದ |
    ಬೆಸುಗೆಯಂ ದೇಶ್ಯಕ್ಕೆಮರ್ದ್ದ ಸೊಂಪಂ ತೊಳಪ ತತ್ಸಮದ ಬಿನ್ನಣವನು || 
    ಉಸಿರೆಂದು ಕೋವಿದರ ಬೆಸಸಲಾನಿದಕೆ ಶೋ |
    ಭಿಸುವ ಕಬ್ಬಿಗರಕೈಪಿಡಿಯೆಂದು ಪೆಸರನಿ |
   ತ್ತೊಸೆದು ಪೇೞ್ದಪೆನು.
      ಗ್ರಂಥಾವತಾರದಲ್ಲಿ ಸಂಭಾವಿರೂಪಾಕ್ಷಸ್ತುತಿಯಿದೆ. ಈ ಗ್ರಂಥ ದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ____
    ವಂಚನೆಗೆ ಮಾಜೆಂದು ಪೆಸರಕ್ಕು ವಂಶಮಂ |
    ಬಂಚಮೆನಲಕ್ಕು ಗಾವಿಲನೆಂದು ಗ್ರಾಮಣಿ ಪ |
    ಳಂಚೆಂದು ತಾಗೆಂದು ಸಂಘಟ್ಟನಾರ್ಧ ಪಾಗದಮೆನಲ್ ಪ್ರಾಕೃತಾಖ್ಯಂ || 
    ಉಂಡಮೆಂದುದ್ದಮಪ್ಪುದು ಮೇಣಪೂರ್ವಮಂ |
    ಪಂಚವೆಂಬುದು ಅವಸೆಯೆನಲಮಾವಾಸ್ಯೆ ಗುಳ | 
    ವಂಚಿತಂ ಗುಡ ಪಕ್ಕರಕ್ಕೆಯಪ್ಪುದು ನಾಡಿ ನಾಯಿಯೆನೆ ಗೇಟಿಗೆಯಕ್ಕುಂ || 
    ತುೞುಲೆಂದು ಮೋಟ್ಠಂದು ಕುಂಬೆಂದುಮೆಗೆಂದು | 
    ಬೞಿಕ ಮಣಿಯೆನೆ ನಮಸ್ಕಾರಕ್ಕೆ ಪೆಸರಕ್ಕು | 
    ಮಿಳೆಯ ಪಿರಿಯರ್ ನೇರಿದರ್ ದಿಮ್ಮಿದ‌ರ್ ಗನಹರುಱೈ ಸೈದರೆನಿಸಿಕೊಳ್ಗುಂ ||