ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ) ಪರ್ವತಶಿವಯೋಗಿ, ೩೯೭

                 ಕೈಲಾಸ                        ತಳತಳಿಸುವೆಳಮುತ್ತುಗಳ ರಾಶಿಯೋ ಸಮು |           ಜ್ಜಳಪ ಸತ್ಕುಲಿಶದೊಟ್ಟಿಲೋ ಮಾಱಿ ಮಂದೈಸಿ |          ಬಳೆದು ಬೆಳ್ವಳಿಪ ಬೆಳ್ದಿಂಗಳೋಬ್ಬುಳಿಯೊ ಲೋಕದೊಳು ಪರ್ಬಿದ ಪುಣ್ಯದ |                                 ಗೆಳಸೊ ಪೀಯೂಷ ಭಾಸ್ಕರರಶ್ಮಿಯಿಂದ ಕಾ |   ಯದುಳುಗಟ್ಟಿಗೊಂಡ ಬಗೆಯೋ ಶಾರದಾಭ್ರಸಂ |              ಕುಳವನುಱಿ ಮಿದಿದು ಮುದ್ದೆಯನಾಗಿಸಿದನಜನೆನಲ್-ಬೆಳ್ಳಿ ವೆಟ್ಟೆಸೆದುದು!
                 ಸ್ತ್ರೀಯರು                 ರಸವೆ ರಂಜಿಸುವಂತೆ ಚೆಲ್ವೆ ಚೈತನ್ಯವಾಂ |            ತೆಸೆವಂತೆ ಚೋದ್ಯಮೇ ಹೃದ್ಯಮಪ್ಪಂತೆ ಭಾ | ವಿಸಲಲಂಕಾರಮಾಕಾರಮಾಂತಂತೆ ಕಲರುತಿಯೆ ಮಾತಾಡುವಂತೆ || ಒಸೆದು ಚಾತುವ್ಯ ಮೇ ಚಾರುತನವೆತ್ತು ಶೋ |        ಭಿಸುವಂತೆ ಕಲೆಯ ಕಾಲ್ಗಳೆದು ನಡೆವಂತೆ ಸವಿ |        ಯೊಸೆದು ಸಾಲಿಡುವಂತೆ ವನಿತೆಯರ್‌ ನಡೆತಂದರುಪವನಕೆ ವಹಿಲದಿಂದ ||
            ಪರ್ವತಶಿವಯೋಗಿ ಸು. 1650.                   
ಈತನು ಬಸವೇಶ್ವರದೇವರ ವಚನಸಾರಾರ್ಥ, ಮುರಿಗೆಯ ಶಾಂತ ವೀರೇಶನ ಪ್ರಭುಲಿಂದಕಂದದ ಟೀಕೆ, ಕರಸ್ಥಲದ ನಾಗಲಿಂಗತ್ರಿಪದಿಯ ಟೀಕೆ, ಗುರುಸ್ತೋತ್ರತ್ರಿಪದಿಯ ಟೀಕೆ, ಚೆನ್ನಬಸವನ ಕರಣಹಸುಗೆಯ ಟೀಕೆ, ಚೆನ್ನಬಸವನ ಮಿಶ್ರಾ ರ್ಪಣದ ಟೀಕೆ ಇವುಗಳನ್ನು ಬರೆದಿದ್ದಾನೆ.

ಇವನು ವೀರಶೈವಕವಿ; 'ಸಿದ್ದಲಿಂಗಾಖ್ಯಸ್ವಾಮಿಗಳ ಜ್ಞಾನೋಪದೇಶ ಪಾತ್ರನು, ಬಾಲೇಂದುಪುರದ ಹರೀಶ್ವರಶಾಂತವೀರೇಶ್ವರಕರಸರಸಿಜಜಾ ತನು”ಎಂದು ಹೇಳಿಕೊಂಡಿದ್ದಾನೆ, ಮುರಿಗೆಯ ಶಾಂತವೀರೇಶನ(ಸು 1530) ಗ್ರಂಥಕ್ಕೆ ಇವನು ಟೀಕೆಯನ್ನು ಬರೆದಿರುವುದರಿಂದ ಅವನ ಕಾಲಕ್ಕಿಂತ ಈಚೆಯವನು ಎಂಬುದು ಸ್ಪಷ್ಟವಾಗಿದೆ. ಇವನ ಕಾಲವು ಸುಮಾರು 165೧ ಆಗಬಹುದೆಂದು ತೋರುತ್ತದೆ.

 ಇವನ ಟೀಕೆಗಳಲ್ಲಿ