ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ವೀರಜನಜತಿ 425

       ಈಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ__
                                      ಸೂರ್ಯೋದಯ 
ಮೂಡಣದ್ರಿಯ ಕೆಂಪು ತೋಱೌ ತಾರಗೆ ಪರಿಯೆ | 
ಗೂಢಮಾಗಿರ್ದ ಕಮಲಂ ಬಿರಿಯೆಯಳಿ ಸರಿಯೆ |
ಕೂಡಿಸಿದ ತಂಬೆಲರ ಚಳಿ ಮುಱ'ಯೆ ತಾಮ್ರಚೂಡಂ ಕರೆಯೆ ರಜನಿ 
ಪರೆಯೆ || ಗಾಢದಲಿ ಚಕ್ರವಾಕಂ ಮೆಱೌಯೆ ಮಿಗೆ ಸಿರಿಯ |
ಕೂಡಿ ದೇಗುಲವಾದ್ಯ ಮೊರೆಯೆ ಕಿವಿ ಕಿಕ್ಕಿಱ'ಯೆ |
ಮಡಿದನು ರವಿ ಹಕ್ಕಿಯುಲಿದು ಮಱುಯೊಳು ಬೆರೆಯೆ ನೈದಿಲೆಯ 
ಸೊಂಪು ಪಱುಯೆ|| 
                                         ದೇವರ ದರ್ಶನ 
ದಾರಿದ್ರನಿಗೆ ಧನವು ಬಯಸೆ ಬಂದಂತೆ ಬಲು | 
ನೀರಡಸಿದವಗೆ ಗಂಗೋದಕವು ದೊರೆತಂತೆ | 
ಕುರುಡನಿಗೆ ಕಣ್ಗಳವು ಬಂದತೆಱನಂತೆ ಕುಮತಿಗೆ ಗುರುವು ಸಿಲುಕಿದಂತೆ॥ 
ಭರದಿಂದ ಬಿಸಿಲಿನೊಳು ಬೞಲಿದವನಿಗೆ ನೇೞಲು | 
ದೊರೆತಂತೆ ಪರಮಪತಿತಗೆ ಮುಕುತಿಯಾದಂತೆ |
ನೀರೊಳಗೆ ಮುೞುಗಿ ಸಾವಸಿಗೆ ನಾವೆಯು ಸಿಲುಕಿದಂತೆನಗೆಯೊಲಿದೆ 
ಸ್ವಾಮಿ |
                                                  ----
                                ವೀರಜನಪತಿ‌. ಸು 1650 
          ಈತನು ವಿಕ್ರಮವಿಲಾಸವನ್ನು ಬರೆದಿದ್ದಾನೆ. ಇವನು ವೀರಶೈವ

ಕವಿ; ಇವನ ತಂದೆ ಬೆಳಗೋಡಹುಚ್ಚ ಭೋಪಾಲಚಂದ್ರನ ಕುಲತಿಲಕನಾದ ಹಾಲೇಂದ್ರ , ತಾಯಿ ಮಲ್ಲಾಂಬಿಕೆ. ಇವನು ಸುಮಾರು 1650 ರಲ್ಲಿ ಇದ್ದಿ ರಬಹುದೆಂದು ತೋರುತ್ತದೆ. ಪೂರ್ವಕವಿಗಳನ್ನು ಈಪದ್ಯದಲ್ಲಿ ಸ್ಮರಿ ಸಿದ್ದಾನೆ-

   ಕವಿಕಾಳಿದಾಸ ಮಯೂರನುದ್ಧಟ ಬಾಣ | ಕವಿಮಲುಹಣ ಭವಭೂತಿ | 
   ಭುವನವಿನುತಗಸ್ವ ಶಿವಕವಿಗಳ ನೋಂತು | ವಿವರಿಸೆ ನಾನೀಕೃತಿಯ ||
           ಇವನ ಗ್ರಂಥ
           54