ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

828 ಕರ್ಣಾಟಕ ಕವಿಚರಿತ

           [17 ನೆಯ
 ನುಡಿಸಿದರೆ ನುಡಿದೆನಾಂ ಬೆಡಗುಗಳ ಗಡಣದಿಂ ಕಡುಸೊಬಗುವಡೆದ ಕೃತಿಯ || 
 ಮೃಡಶರಣರರಿಗೆಆಗಿ ಸಡಗರದೊಳೊಡರಿಸುವೆ | 
 ಬಿಡದೆ ತಪ್ಪಡಸಿಬಂದೊಡೆ ಕಲಿಸಿ ನಡೆಗೊಳಿಸಿ | 
 ಮೃಡಭಕ್ತಿಗೊಡಲಿತ್ತು ಪಡೆದರ್ಧ ಕೆಡದರ್ಧಕೆಡೆವೆತ್ತ ದೃಢಚಿತ್ತರು || 
 ಶ್ರುತಿಯ ಸೊಬಗುಗಳ ಸಂಗತಿಯ ಸಾರದ ಮಹೋ | 
 ನ್ನ ತಿಯನುಪಮಾನಂದರತಿಯ ರಂಜಕದ ಗಿರಿ | 
 ಸುತೆಯು ನಿಜಪತಿಯ ಘನನುತಿಯ ಚದುರತೆಯ ಪದಗತಿಯ ಸತ್ಕ್ರತಿಯ ಕಥೆಯ || 
 ಕ್ಷಿತಿಯೊಳಗೆ ಮೆಳವಂತುಟತಿಮುದದೊಳೆನ್ನ ಬಡ | 
 ಮತಿಗೆ ತಕ್ಕಂತೆ ನಾಂ ನುತಿಸುವೆನ' ನತಿ ಕೇಳಿ | 
 ಸಿತಗಳನ ಕವಿಗಳಪ್ರತಿಯೆನಿಸುತಿರ್ದ ವಸುಮತಿಯೊಳಗೆ ಗತಿಗೊಳಿಪುದು ||
                __ __ __ __
             ದೊಡ್ಡ ಷಡಕ್ಷರಿಸ್ವಾಮಿ ಸು 650 
      ಈತನು ವಚನಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ; ನಂಜನಗೂಡು ನಂಜುಂಡೇಶ್ವರನನ್ನು ಸ್ತುತಿಸುತ್ತಾನೆ; ಆ ಸ್ಥಳದವನಾಗಿರಬಹುದೋ ಏನೋ ತಿಳಿಯದು. ಇವನು ಸುಮಾರು 1650 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.
      ಇವನ ಗ್ರಂಥ
               ವಚನಗಳು
      ವಚನಗಳು ಎಂಬ ಹೆಸರಿದ್ದರೂ ಈ ಗ್ರಂಥವು 
ಹಾಡಿನರೂಪವಾ  
 ಗಿರುವ ಪಟ್ಟದಿಯಲ್ಲಿ ಬರೆದಿದೆ; ಪ್ರಯಿಕವಾಗಿ ನಂಜನಗೂಡು ನಂಜುಂ 
 ಡೇಶ್ವರ, ಪಾರ್ವತಿ ಅವರುಗಳ ಸ್ತುತಿರೂಪವಾಗಿದೆ. ಕೆಲವು ಪದಗಳು 
 ಶಿವಪೂಜಾಪದ್ಧತಿಯನ್ನು ವಿವರಿಸುತ್ತವೆ. ಒಂದೆರಡು ಪದ್ಯಗಳನ್ನು ಉದಾ
 ಹರಿಸುತ್ತೇವೆ_ _
   ವರಗಿರಿಜಾನನಸರಸಿರುಹಾರ್ಕನೆ | ಕರುಣಾರಸಮಯನಿರುಪಮಮಹಿಮನೆ | 
   ನಿರಘಚರಿತ್ರನೆ ಕಪಿಲಾಕ್ಷೇತ್ರದ ಗರಳವುರಾಧಿಪನೆ ||
   ಗರುವನೆ ಘನಗಂಭೀರನೆ ಧೀರನೆ | ಶರಣಾಗತಜನಪಾಲನೆ ಲೋಲನೆ | 
   ನರಸುರವಂದ್ಯನೆ ಪರತರನಂಜುಂಡೇತ ಕೃಪಾಕರನೆ ||