ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

474 'ಕರ್ಣಾಟಕ ಕವಿಚರಿತೆ. [17 ನೆಯ

 ಬ್ರಹ್ಮಾಂಡಪುರಾಣದ ತೀರ್ಥಕಾಂಡದೊಳಗೆ ಉಕ ಅಥವಾ ಕಾಂಚಿಯ ಮಹಾತ್ಮ್ಯವು ಹೇಳಿದೆ. ಈ ಕಾವ್ಯದ ಉತ್ಕೃಷ್ಟ ತೆಯನ್ನು ಕವಿ
                                ಅಳಿ ಮುಸುಕದ ಸುಮಲತ  |  ತೆಳವರೆಯದ ಕನ್ನೆಯಂತಿರಿನಿವಾಲಂತು |
                             ಚ್ವಳಿಪತಿಳಿಜೊನ್ನ ದಂತೆರ್ದೆ | ಗೊಳೆ ಸೇೞ್ವೌಂ ಹಸ್ತಿಗಿರಿಯ ಮಹಾತ್ಮ್ಯಮನಾಂ || 
  ಎಂಬ ಪದ್ಯದಲ್ಲಿ ತಿಳಿಸಿದ್ದಾನೆ. ಗ್ರಂಥಾವತಾರದಲ್ಲಿ ವರದರಾಜ ಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ, ಭೂದೇವಿ, ನೀಳಾದೇವಿ, ಅನಂತ, ಗರುಡ, ವಿಶ್ವಕ್ಸೇನ, ದಿವ್ಯಸೂರಿಗಳು, ರಾಮಾನುಜ ಇವರುಗಳನ್ನು ಪರಿವಿಡಿಯಿಂದ ಸ್ತುತಿಸಿದ್ದಾನೆ. ಆಶ್ವಾಸಗಳ ಕೊನೆಯಲ್ಲಿ
   ಇದು..................ಕರಿಧರಣೀಧರಶಿಖರಮಂದಿರವರದರಾಜಚರಣರಾಜೀವಮಕರಂದಬೃಂದಾಸ್ವಾದನಮುದಿತದ್ವಿರೇಫಾಯಮಾನ..........ಚಿಕ್ಕದೇವಮಹಾರಾ ಜೇಂದ್ರಸಾಂದ್ರಕೃಪಾಪಾಲಿತಸರ್ವತಂತ್ರಸ್ವತಂತ್ರ ಶ್ರೀಚಿಕ್ಕುಪಾಧ್ಯಾಯವಿರಚಿತಮಸ್ಪ ಹಸ್ತಿಗಿರಿ ಮಹಾತ್ಮ್ಯದೊಳ್
  ಎಂಬ ಗದ್ಯವಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತೇವೆ ---

                                                                       ಕನ್ನಡದನಾಡು   
                                          ಗಾಡಿಯ ಸೀಮೆ ಚೆಲ್ವೊಗೆವ ತಾಣಮಲಂಪಿನ ಸಂತೆ ಸೆಂಪು ಸಾ |
                                          ರ್ದಾಡುವ ಭೂಮಿ ಸೌಖ್ಯದೆಡೆ ಪುಣ್ಯದ ಗೊತ್ತು ವಿನೋದದಾಗರಂ ||
                                         ಮೋಡಿಯ ಮಂಟಪಂ ಸಿರಿಯ ಪೆರ್ಚುಗೆಗೊಳ್ಮನೆ ಮುಕ್ತಿಕಾಂತೆ ಕೈ |
                                         ಗೂಡುವ ಬೀಡು ಕನ್ನಡದನಾಡು ವಿರಾಜೆಪುದೆಂತು ಒಣ್ಣಿಸೆಂ ||
                                               ವಿಷ್ಣುದರ್ಶನಮಾಡಿದ ಬ್ರಹ್ಮನ ಭಕ್ತ್ಯತಿಶಯ 
                                        ಓಡುವನಾಡುವಂ ಒೞಿಕೆ ಸುತ್ತುವನಳ್ಕುವನೊರ್ಮೆ ಹರ್ಷದಿಂ |
                                       ನೋಡುವನೊಲ್ದು ಬೇಡುವನನನ್ಯಮನಂ ಮಿಗೆ ಬೀೞುತೆೞ್ದು  ಮುಂ ||
                                       ಡಾಡುವನಪ್ಪವಂ ತಡಹಿ ತಕ್ಕೆಯೊಳಿಟ್ಟು ಬೆಮರ್ತು ಮುದ್ದಿಪಂ |
                                       ಪಾಡುವನೆಯ್ದುವಂ ನಲಿದು ತತ್ಪದದೊಳ ತನುವಂ ಸಮರ್ಪಿಪಂ ||