ಪುಟ:ಕರ್ನಾಟಕ ಗತವೈಭವ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬

ಕರ್ನಾಟಕ ಗತವೈಭವ


ತೀರಿತು. ಅಂದಿಗೆ ಕರ್ನಾಟಕದ ವೈಭವಕ್ಕೆ ಕೊನೆಯಾಯಿತು! ಕರ್ನಾಟಕ ದೇವಿಯ ಹಣೆಯ ಕುಂಕುಮವು ಅಳಿಸಿತು; ಕೊರಳ ಮಂಗಳಸೂತ್ರವು ಹೆಚ್ಚಿತು! ಕರ್ನಾಟಕದ ಸಂಪತ್ತಿಯು ಸಮಾಧಿ ಹೊಂದಿತು! ಕರ್ನಾಟಕ ವಿದ್ಯಾನಿಧಿಯು ಅಡಗಿಹೋಯಿತು! ಕರ್ನಾಟಕ ಪ್ರತಾಪ ಸೂರ್ಯನು ಅಸ್ತನಾದನು. ಸಾರಾಂಶವೇನೆಂದರೆ ಅಂದಿನಿಂದ ಇಂದಿನವರೆಗೆ ಕರ್ನಾಟಕರಾದ ನಾವು ಇತಿಹಾಸದಿಂದ ನಾಮಶೇಷರಾಗಿ ಹೋಗಿರುವವು ! ಕರ್ನಾಟಕರೇ ನಾವು ಪೂರ್ವವೈಭವವನ್ನು ಪಡೆಯಲು ಪ್ರಯತ್ನಿಸುವ ಕಾಲವು ಇನ್ನೂ ಪ್ರಾಪ್ತವಾಗಿಲ್ಲವೋ? ವಿಚಾರ ಮಾಡಿರಿ.