ಪುಟ:ಕರ್ನಾಟಕ ಗತವೈಭವ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರ್ನಾಟಕ ಗತವೈಭವ


ನಾಮಾವಳಿಯು ನಲಿದಾಡುವದೆಂತು? ಅವರಲ್ಲಿ ರಾಷ್ಟ್ರೀಯ ವಿಭೂತಿಗಳ ಉತ್ಸವಗಳಾಗುವದೆಂತು? ತಮ್ಮ ಪೂರ್ವಜರ ಅಭಿಮಾನವೇ ಇಲ್ಲದಂಥವರು ತಮ್ಮ ಜನರಲ್ಲಿ ರಾಷ್ಟ್ರೀಯತ್ವದ ಭಾವನೆಗಳನ್ನು ಬಿತ್ತುವದೆಂತು? ಇಂಥ ಜನರಲ್ಲಿ ನಿಜವಾದ ರಾಷ್ಟ್ರಾಭಿಮಾನವು ಎಂದಾದರೂ ಮೊಳೆದೋರುವದೋ? ಯಾವ ಕರ್ನಾಟಕಸ್ಥರಿಗೆ ತಮ್ಮ ಪೂರ್ವಜರ ಬಗ್ಗೆ ಸಕೌತುಕವಾದ ಅಭಿಮಾನ ವುಂಟಾಗಿರುವದಿಲ್ಲವೋ, ಯಾರು ತಮ್ಮ ಜನರ ಮಹಾ ಕಾರ್ಯಗಳ ಜ್ಞಾನವಿಲ್ಲದೆ ಇನ್ನೂ ಕಗ್ಗತ್ತಲೆಯಲ್ಲಿ ಅಲೆ ದಾಡುತ್ತಿರುವರೋ ಅಂಥ ಜನರ ಭಾಷಾವೃಕ್ಷವು ಕೂಡ ಭರದಿಂದ ಬೆಳೆಯದಿದ್ದರೆ ಸೋಜಿಗವೇನು? ಕನ್ನಡಿಗರೇ, ನಿಮ್ಮ ಈ ವಿಷಾದವನ್ನು ಹೋಗಲಾಡಿಸಿ, ನಿಮ್ಮ ಮೇಲಿನ ನಿರಭಿಮಾನತೆಯ ಮುಸಕನ್ನು ಹಾರಹೊಡೆಯಲಿಕ್ಕೆ ನೀವು ನಿಮ್ಮ ಇತಿಹಾಸಕ್ಕೆ ಶರಣುಹೋಗಿರಿ, ನಿಮ್ಮ ಮಂದದೃಷ್ಟಿಗೆ ಅದೇ ಮೇಲಾದ ಅಂಜನವು.

೨ನೆಯ ಪ್ರಕರಣ


ಕರ್ನಾಟಕವು ಮೃತರಾಷ್ಟ್ರವೇ?

कैब्यं मा स्म गमः पार्थ नैतत्त्वय्युपपद्यते |
क्शुद्र ह्ऋदयदौरबल्य त्यक्तोत्तिष्ट परंतप ||

- ಗೀತಾ, ೨. ೩.

ಅರಿಭಯಂಕರ ನೀ ನಪುಂಸಕ | ರಿರವನೈದಲು ಬೇಡ ನಿನಗಿದು |
ದೊರಕಲಾಗದು ಧೀರತನಕಿದು ಹಾನಿಕರವಹುದು ||
ಮರುಳೆ, ಬಡಮನದಿಂದ ಹೆದರದೆ | ಮರುಳತನವನು ಬಿಟ್ಟು ಕದನಕೆ |
ಭರವಸದಲೇಳೆನಲು ಕೃಷ್ಣಗೆ ಪಾರ್ಥ ನಿಂತೆಂದ ||

-ನಾಗರಸ

ರತಖಂಡಾಂತರ್ಗತರಾದ ಕನ್ನಡಿಗರೇ,
ಳೆದ ಪ್ರಕರಣದಲ್ಲಿ ನಾವು ನಮ್ಮ ಮಿಕ್ಕ ರಾಷ್ಟ್ರಬಂಧುಗಳಲ್ಲಿ ಉಂಟಾಗಿರುವ ಪೂರ್ವಸ್ಥಿತಿಯ ತಿಳುವಳಿಕೆಯನ್ನೂ, ಸದ್ಯಸ್ಥಿತಿಯ ವಿಷಯದಲ್ಲಿ ಅವರು ನಡಿಸಿರುವ ಪಶ್ಚಾತ್ತಾಪ ಪೂರ್ವಕವಾದ ಉನ್ನತಿಯ ಕ್ರಮವನ್ನೂ, ನಾವು ಮಾತ್ರ