ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ನಡೆವಳಿ not menananananananana ಕ್ಕಿಂತಲೂ ಮುಂಚೆ ಆಲೋಚಿಸಬೇಕು. ಸಂಭಾಷಣೆಗೆ ಬೆಲೆಯು ಬೆಳ್ಳಿ ಯಾದರೆ ಮೌನದ ಬೆಲೆಯ ಚಿನ್ನವೆಂದು ದೊಡ್ಡವರು ಹೇಳುವರು. ಮಾತಾಡುವುದಕ್ಕೆ ವಿಷಯವೇನೂ ಇಲ್ಲದಿದ್ದರೂ ಅನೇಕರು ಹರಟೆಗೋ ಸ್ಕರ ವೃಥಾ ಮಾತಾಡಿ ತಮ್ಮ ಶಕ್ತಿಯನ್ನೂ ಕಾಲವನ್ನೂ ವೃಥಾ ಕಳದು ಕೊಳ್ಳುವರು. ಇದರಿಂದ ಆಡಬಾರದ ಮಾತುಗಳು ಕೂಡ ಅಕಸ್ಮಾತಾಗಿ ಬಾಯಿಂದ ಹೊರಟು ಬಹಳ ಅನರ್ಥಗಳನ್ನುಂಟುಮಾಡಿಯಾವು. ಮುತ್ತು ಯಾರ ವಿಷಯದಲ್ಲಿ ಈ ಮಾತುಗಳು ನಡೆಯುವುವೋ ಅಂಥವರಿಗೂ ನನಗೂ ಮನಸ್ತಾಪಕ್ಕೂ ದ್ವೇಷಾಸೂಯೆಗಳಿಗೂ ಅವಕಾಶವಾದೀತು. ಡೆಮರಾಟಸ್' ಎಂಬ ಪಂಡಿತನು ಬಂದು ಮಂಡಲಿಯಲ್ಲಿ ಮೌನವಾಗಿದ್ದು ದನ್ನು ಕಂಡು ಅಲ್ಲಿದ್ದವರು- ಇದೇಕೆ ಮೌನವಾಗಿದ್ದೀಯೆ ? ನೀನೇನು ಬುದ್ಧಿಯಿಲ್ಲದ ದಡ್ಡನೆ ? ಅಥವಾ ವಾತು ಬಾರದೆ ? ಎಂದು ಕೇಳಿದ್ದು ಆತನು-ಬುದ್ಧಿಯಿಲ್ಲದವರಿಗೆ ನಾಲಗೆಯು ಹದ್ದಿನಲ್ಲಿರುವುದು ಅಂಭವವು' ಎಂದು ಉತ್ತರ ಕೊಟ್ಟನಂತೆ ! ಇತರರಿಗಿಂತ ನಾವೇ ದೊಡ್ಡವರೆಂದು ತೋರಿಸಿ ಕೊಳ್ಳಬಾರದು. ಏಕೆಂದರೆ-ನಮಗಿಂತಲೂ ಕೀಳೆನಿಸಿಕೊಳ್ಳುವುದಕ್ಕೆ ಇತರರ ಮನಸ್ಸು ಸಂಕಟಪಡುವುದು. ಯಾವುದನ್ನೂ ಹೀಗೆಯೇ ಸರಿಯೆಂದು ಅಷ್ಟು ದೃಢ ವಾಗಿ ಹೇಳಿ ಹಠವನ್ನು ಸಾಧಿಸಬಾರದು. ಎಷ್ಟೋ ವೇಳೆ ನಮ್ಮ ಸ್ಮೃತಿ ಶಕ್ತಿಯ ಕಡೆಗೆ ನನ್ನ ಕಣ್ಣು ಕಿವಿಗಳು ಕೂಡ ನಮ್ಮನ್ನು ಮೋಸಗೊಳಿ ಸುವುವು. ಸರಿಯಾದ ಸಮಯ ಸಂದರ್ಭಗಳು ದೊರೆಯದಿದ್ದರೆ ದೊರೆಯು ವವರೆಗೂ ತಾಳ್ಮೆಯಿಂದ ನಿರೀಕ್ಷಿಸಬೇಕು. ಏಕೆಂದರೆ ಬೇಸಗೆಯಲ್ಲಿ ಎರೆ ವಿದ ಕಲ್ಲನ್ನು ಮಳೆಗಾಲದಲ್ಲಿ ಕೀಳುವುದುತ್ತಮವಲ್ಲವೆ ? ಕೇವಲ ಚಪಲ ಚಿತ್ತರಾಗಿ ಕಂಡು ಕಂಡುದನ್ನೆಲ್ಲಾ ಹಾರಯಿಸಬಾರದು. ಯಾವುದರಲ್ಲೂ ತಪ್ಪಿಗೆ ಅವಕಾಶ ಕೊಡದಂತೆ ನಡೆಯಬೇಕು, ಆದರೆ ಅದಕ್ಕಾಗಿ ಅತ್ಯಂತ