ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ nha ಮಾಡುತ್ತಿರಬೇಕೆಂದು ಮೇಲೆ ಹೇಳಿದೆಯಷ್ಟೆ. ಆದರೆ ಹೀಗೆಂದು ಮಕ್ಕಳ ಶಿಕ್ಷಣಕ್ಕೋಸ್ಕರವಾಗಿ ಅತಿಯಾಗಿ ಪ್ರಯತ್ನ ಪಡಬಾರದು. ಒಂದುವೇಳ ಹಾಗೆ ಮಾಡುತ್ತ ಬಂದರೆ ಮಕ್ಕಳಲ್ಲಿ ಧೈಯ್ಯ, ಧಾರಾಳ ಸ್ವಭಾವ, ಸ್ವಾತಂ ತು, ಇಂಥವುಗಳು ಬೆಳೆಯುವುದಕ್ಕೆ ಅವಕಾಶವೇ ಇಲ್ಲದೆ ಹೋಗುವುದು, ದುಘ್ನ ಭಾವಗಳನ್ನು ಕಂಡರೆ ಮುರಿಯುತ್ತಲೂ ಒಳ್ಳೆಯ ನಡತೆಯನ್ನು ಪ್ರೋತ್ಸಾಹಿಸುತ್ತಲ ಬರಬೇಕು. ಮತ್ತು ಪ್ರತಿಯೊಂದಕ್ಕೂ ಸ್ಕೂಲವಾದ ನಿದರ್ಶನಗಳನ್ನು ಕೊಡುತ್ತ ಬಂದು ಒಳ್ಳೆಯತನದಲ್ಲಿ ಪ್ರೀತಿಯ, ಕೆಟ್ಟ ತನದಲ್ಲಿ ಜುಗುಪ್ಪೆಯ ಹುಟ್ಟುವಂಥ ಘನವಾದ ಸ್ವಭಾವವನ್ನು ಅವರಲ್ಲಿ ಉಂಟುಮಾಡಬೇಕು. ಸ್ವಭಾವದ ಬೆಲೆಯನ್ನು ಅಪ್ಪಿಷ್ಟೆಂದು ಹೇಳುವುದಕ್ಕೆ ಕೂಡ ಸಾಧ್ಯ ವಿಲ್ಲ. ಸ್ಥಳಾವದಿಂದ ಉಂಟಾಗುವ ಘನತೆ, ಗೌರವ, ಕೀರ್ತಿ ಇತ್ಯಾದಿಗ ಳನ್ನೆಲ್ಲಾ ದೊಡ್ಡ ನಿಧಿಯೆಂದು ಭಾವಿಸಬೇಕು. ಈ ವಿಷಯದಲ್ಲಿ ಷೇಕ್ಸ್ಪಿಯರ್ ಮಹಾಕವಿಯು ಹೇಳಿರುವ ಈ ಮುಂದn ವಾಕ್ಯಗಳು ಬಹಳ ಶ್ರಾವ್ಯವಾಗಿರುವುವು. ಈ ಸನ್ನಿವೇಶಗಳು ಬದಲಾಯಿಸಿಯಾವು, ಅವಕಾಶಗಳು ಕಳೆದುಹೋದವು, ಸಂಪತ್ತು ಜಲಬದ್ಭುದದಂತೆ ಅಸ್ಥಿರ ಸೌಂದಠ್ಯವು ಕ್ಷೀಣಿಸಿ ಹೋಗುವುದು, ಆದರೆ ಮನುಷ್ಯನಲ್ಲಿ ನೆಲೆಯಾಗಿ ನಿಲ್ಲುವುದು ಸ್ವಭಾವವೊಂದೇ, ಅನೇಕ ವಿಧವಾದ ಆಕಸ್ಮಿಕ ಸಾಹಸಗಳಿಂದ ಪಡೆಯಬಹುದಾದುದಕ್ಕಿಂತಲೂ ಉತ್ತಮವಾದ ಲಾಭವನ್ನು ಸುಸ್ಪಭಾವವು ಕಲ್ಪಿಸಿಕೊಡುವುದು. ಗಾರ್ಡ, ಲೀವಿಂಗ್‌ರ್ಸ್ಟೋ, ವಿರ್ಲ್ಫ ಫೋರ್ಡ್ ಇವರು ಗಳಲ್ಲು ಅಂಥಹ ಸಾಹಸಕಾವ್ಯಗಳನ್ನುವುದನ್ನೂ ಮಾಡದಿದ್ದರೂ ತಮ್ಮ ಸುಸ್ವಭಾವದಿಂದಲೇ ಸುಪ್ರಸಿದ್ಧರಾಗಿದ್ದಾರೆ. ನಾವು ಯಾವುದರ ಬಲದಿಂದ ಯೋಜಿಸುತ್ತೇವೋ ಅದನ್ನು ಮನಸ್ಸನ್ನುವೆವು. ಮನಸ್ಸಿನ ಪ್ರವರ್ತನೆಯ ಲ್ಲದೆ ಯಾವ ಕೆಲಸವನ್ನೂ ಮಾಡುವುದಕ್ಕಾಗುವುದಿಲ್ಲ. ಒಳ್ಳೆಯ ಮನ