ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

htv ಕರ್ಣಾಟಕ ಗ್ರಂಥಮಾಲೆ wwwwwwwwwn C ನಮ್ಮಲ್ಲಿ ಬೇರೂರಿ ಅಭಿವೃದ್ಧಿಯಾಗುವುದರಿಂದ ನಮ್ಮ ಜೀವಮಾನವೇ ಕೆಟ್ಟು ಹೋದೀತು. (26) ಕೆಲಸಮಾಡುವುದರಲ್ಲಿರುವ ಘನತ. ಕಲಸಮಾಡುವುದು ಏನೂ ಹೀನಾಯವೆಂದು ಕೆಲವರು ತಿಳಿದು ಕೊಂಡಿರುವರು. ಕೆಲಸಮಾಡಿದ ಹೊರತು ಯತ್ನವಿಲ್ಲ, ಆದುದರಿಂದ ಮಾಡ ಬೇಕಾಗಿದೆ ಎಂದು ಇನ್ನು ಕೆಲವರು ತಿಳಿದುಕೊಂಡಿರುವರು. ಮತ್ತೆ ಕೆಲ ವರು ಕೆಲಸಮಾಡಿ ಅನ್ಯಾಯವಾಗಿ ಕಷ್ಟ ಪಡಬೇಕಲ್ಲಾ ಎಂದು ಅಸಮಾ ಧಾನ ಪಡುವರು. ಇದನ್ನೆಲ್ಲಾ ನೋಡಿದರೆ ಕಷ್ಟಪಟ್ಟು ಕೆಲಸಮಾಡುವುದ ಕ್ಕಿಂತಲೂ ವಿನೋದವಾಗಿ ಕಾಲವನ್ನು ತಳ್ಳುವುದೇ ಉತ್ತಮವೆಂದು ನನ್ನ ಮನಸ್ಸಿಗೆ ಬಂದೀತು. ಆದರೆ ಹಾಗೆ ಮಾಡದೆ ಕುಳಿತಿರುವುದೇ ಸೋಮಾರಿ ಕನ, ಲೋಕದಲ್ಲಿ ಎಲ್ಲರೂ ಸೋಮಾರಿಗಳೇ ಆಗಿದ್ದಲ್ಲಿ ನಮಗೆ ಅಥವಾ ಇತರರಿಗೆ ಈಗಿನ ಅನುಕೂಲತೆಗಳು ದೊರೆಯುತ್ತಲೇ ಇರಲಿಲ್ಲ. ಪ್ರತಿಯೊಬ್ಬರೂ ದೇಹದಿಂದ ಅಥವಾ ಬುದ್ದಿಯಿಂದ ದುಡಿಯಲೇ ಬೇಕು. ರೈತ, ಬಡಗಿ, ಗಾಯಕಿ, ನೆಮ್ಮೆಯವನು, ಕಮ್ಮಾರ, ಕಲ್ಕು ಟಿಗ ಮೊದಲಾದವರು ಕಾಯತಕ್ಕಿಯಿಂದ ಕಷ್ಟಪಟ್ಟು ಕೆಲಸಮಾಡತಕ್ಕವರು, ಉಪಾಧ್ಯಾಯ, ಕವಿ, ಚಿತ್ರಗಾರ, ನ್ಯಾಯವಾದಿ, ವೈದ್ಯ, ನ್ಯಾಯಾಧಿಪತಿ, ಶಾಸ್ತಶೋಧಕ, ಸತ್ಕಾರದ ಅಧಿಕಾರಿಗಳು, ವರ್ತಕ ಇಂಥವರೆಲ್ಲಾ ತಮ್ಮ ಬುದ್ಧಿ ಬಲದಿಂದ ಕೆಲಸಮಾಡುತ್ತ ಲೋಕೋಪಕಾರ ಮಾಡುವರು. ನಾವ ಲ್ಲರೂ ಕೆಲಸಮಾಡಿಕೊಂಡು ಪರಸ್ಪರ ಸಹಾಯಕರಾಗಿದ್ದುಕೊಂಡಿರಲಿ ಎಂಬ ಉದ್ದೇಶದಿಂದಲೇ ದೇವರು ನಮ್ಮನ್ನು ಸೃಷ್ಟಿಸಿರುವನೇ ಹೊರತು ಸುಮ್ಮನೆ ಕುಳಿತಿರುವುದಕ್ಕಲ್ಲ, ಕೆಲಸ ಮಾಡುವುದರಿಂದ ಹೀಗೆ ಪರಸ್ಪರ ಸಹಾಯವಾಗುವುದಲ್ಲದೆ ಚಟುವಟಿಕೆಯ ಆರೋಗ್ಯವೂ ಹೆಚ್ಚು ವುವು. ಲೋಕದಲ್ಲಿ ನಾನಾಜನರು ನಾನಾವಿಧವಾದ ಕೆಲಸಗಳನ್ನು ಮಾಡು ತಾರೆ. ಆದರೆ ದೇವರ ಸೃಷ್ಟಿಯಲ್ಲೇನೋ ಈ ಎಲ್ಲಾ ಕೆಲಸಗಳೂ ಸವ