ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಬ ನವೇ ನಮ್ಮಲ್ಲಿ ಬಡಗಿ, ಕಮ್ಮಾರ, ಅಕ್ಕಸಾಲೆ, ಕುಂಬಾರ, ವರ್ತಕ, ಬೇಸಾಯಗಾರ, ಚಮ್ಮಾರ ಮೊದಲಾದ ಹಲವು ಬಗೆಯ ವೃತ್ತಿಗಳನ್ನವಲಂ ಬಿಸಿರುವವರುಂಟಷ್ಟೆ. ಇವುಗಳಲ್ಲಿ ಯಾರ ವೃತ್ತಿಯಿಲ್ಲದಿದ್ದರೂ ಲೋಕ ದಲ್ಲಿ ಜನಗಳಿಗೆ ತೊಂದರೆಯೇ ಎಂಬುದು ಎಲ್ಲರಿಗೂ ತಿಳಿದೇ ಇರುವುದು. ಆದರೂ ನಮ್ಮವರು ಆಯಾ ವೃತ್ತಿಯವರನ್ನೇ ಬೇರೆಬೇರೆ ಒಂದೊಂದು ಜಾತಿಯನ್ನಾಗಿ ವಿಂಗಡಿಸಿರುವರು. ಮತ್ತು ಆಯಾ ಜಾತಿಯಲ್ಲಿ ಹುಟ್ಟಿದ ಪರೇ ಆಯಾ ವೃತ್ತಿಗಳನ್ನವಲಂಬಿಸಬೇಕೆಂಬ ನಿರ್ಬಂಧವನ್ನು ಕೂಡ ಕಲ್ಪಿಸಿಕೊಂಡಿದ್ದರು. ಆದರೆ ಈ ವಿಷಯದಲ್ಲಿ ಮುಸಲ್ಮಾನರ ಮತ್ತು ಶಂಕಾ ತ್ಯರ ನಡವಳಿಕೆಗಳು ಬೇರೆ ವಿಧವಾಗಿವೆ. ಅವರಲ್ಲಿ ಒಂದು ಮನೆ ಯಲ್ಲಿ ಐದಾರುಜನ ಸಹ ೧ದರರಿದ್ದರೆ ಒಬ್ಬನು ನ್ಯಾಯವಾದಿ, ಮತ್ತೊ ಬೃನು ಬಡಗಿ, ಇನ್ನೊಬ್ಬನು ವರ್ತಕ, ನಾಲ್ಕನೆಯವನು ಬೇಸಾಯಗಾರ, ಐದನೆಯವನು, ಸಂಗೀತಗಾಳ, ಅಗನೆದು ಫಸಯೋಧ, ಹೀಗೆ ಅವರವರ ಇಷ್ಟಕ್ಕೆ ತಕ್ಕಂಥ ಬೇರೆಬೇರೆ ವೃತ್ತಿಗಳನ್ನು ಕೈಗೊಳ್ಳುವರು. ಇದೊಂದು ವಿಧದಲ್ಲಿ ಸರಿ, ಹೇಗೆಂದರೆ-ಒಂದೇ ಜಾತಿಯಲ್ಲಿ, ಕಡೆಗೆ ಒಂದೇ ವಂಶಗಳ ಹುಟ್ಟಿದವರಿಗೆಲ್ಲಾ ಒಂದೇ ವಿಧವಾದ ವೃತ್ತಿಯನ್ನವಲಂಬಿಸಲು ಅನುಕೂಲಿ ಸುವ ಶಂಟವವಿರುವುದೆಂದು ನಂಬಲಾಗುವುದಿಲ್ಲ. ಈಚಿಂತೆಗೆ ನಮ್ಮವ ರಲ್ಲೂ ಇಂಥ ತಿಳಿವಳಿಕೆಯು ಹೆಚ್ಚುತ ಬಂದಂತೆಲ್ಲಾ ಬ್ರಾಹ್ಮಣರು ವ್ಯವ ಸಾಯ, ವ್ಯಾಪಾರ ಅಥವಾ ಯಂತ್ರಕೌಶಲ ಮುಂತಾದುವನ್ನೂ, ಒಕ್ಕಲಿ ಗರು ಸತ್ಕಾರದ ಉದ್ಯೋಗ ಅಥವಾ ಬೇರೆ ವಿಧವಾದ ಕೈಗಾರಿಕೆ ಮೊದಲಾ ದುವುಗಳನ್ನೂ ಕೆಟ್ಟ ಯು ನ್ಯಾಯವಾದಿ ಕ್ಷ, ಉಪಾಧ್ಯಾಯತೆ ಅಥವಾ ಮತ್ತೆ ಯಾವುದಾದರೊಂದು ಬೇರೆ ವೃತ್ತಿಯನ್ನು ಕೈಗೊಳ್ಳುತ್ತಿರುವುದು ಒಂದು ಸಂತೋಷಕರವಾದ ಸಂಗತಿಯಾಗಿದೆ. ಇದರಿಂದ ಇವರ ಯೋಗ್ಯತೆಗಾಗಲಿ . ಅವರ ಚತುರ ತ ಗ ಏನ ಬೇಪವಿಲ್ಲ,