ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇರ್#ಟಕ ಗ್ರಂಥಮಾಲೆ ರರ ವಿಷಯದಲ್ಲಿ ಯ ದೇವರ ವಿಷಯದಲ್ಲೂ ನಮಗೆ ಎಷ್ಟೋ ಕರ್ತವ್ಯ rಗಳುಂಟು. ಇವಾವಕ್ಕೂ ಸಿಕ್ಕದೆ ಮನುಷ್ಯರು ಸುಮ್ಮನೆ ಹುಟ್ಟುವುದು ಸಾಯುವುದು ಅಸಂಭವ. ವಿಧಿಗಳಿಗೆ ಬದ್ಧರಾಗಿ ನಡೆಯತಕ್ಕುದೂ ಕರ್ತವ್ಯವೇ, ಮೇಲಾದ ನಾಗರಿಕತೆಯನ್ನು ಮತ್ತು ಉತ್ತಮವಾದ ಮತಬೋಧೆಯನ್ನು ಪಡೆದಂಥ ದೇಶಗಳಲ್ಲಿ ಜನಗಳಿಗೆ ತಮ್ಮ ಕರ್ತವ್ಯಗಳೇನು ಎಂಬ ತಿಳಿವಳಿಕೆಯು ಚನ್ನಾಗಿರುತ್ತದೆ. ಸಣ್ಣ ಪುಟ್ಟ ವುಗಳೆಂದು ಕರ್ತವ್ಯವನ್ನು ಯಾವಾಗಲೂ ತಾತ್ಸಾರ ಮಾಡಬಾರದು. ಸಾಮಾನ್ಯವಾಗಿ ನಿತ್ಯ ಗಟ್ಟಿ ಒಂದೇ ಬಗೆಯಾದ ಕರ್ತವ್ಯವನ್ನು ನಡೆಯಿಸುವುದರಲ್ಲಿ ಮನಸ್ಸು ಬೇಸರಪಟ್ಟು ಹಿಂದೆಗೆಯುವು ದುಂಟು. ಆದರೂ ಅದನ್ನು ಹದ್ದಿನಲ್ಲಿಟ್ಟುಕೊಂಡು ಕರ್ತವ್ಯವನ್ನು ನೆರವೇ ರಿಸುವುದರಿಂದ ಪರಿಣಾಮದಲ್ಲಾದರೂ ಒಳ್ಳೆಯದಾಗುವುದು ಖಂಡಿತ. ಉದು-ನಿತ್ಯಗಟ್ಟೆ ಅಂಗಸಾಧನೆಯನ್ನು ಮಾಡಬೇಕೆಂದರೆ ಮನಸ್ಸು ಹಿಂದೆ ಗೆಯುವುದು. ಆದರೂ ತಪ್ಪದೆ ನಿತ್ಯವೂ ಅದನ್ನು ಸಾಧಿಸುತ್ತ ಬಂದರೆ ಯಾವಾಗ ಅರೋಗದೃಢಕಾಯರಾಗಿರಬಹುದು. ಹೀಗೆ ಫಲಿತಾಂಶದಲ್ಲಿ ಒಳ್ಳಯವಾದರೂ ಪ್ರಕೃತಕ್ಕ ಕಷ್ಟವೆಂದು ತೋರುವ ಕೆಲಸಗಳು ಎಷ್ಟೋ ಉಂಟು. ಇಂಥ ಕೆಲಸಗಳನ್ನು ಮಾಡಗೊಳಿಸದೆ ಸದ್ಯಃ ವಿನೋದಕರವಾಗಿ ಮುಂದಕ್ಕೆ ನಮ್ಮನ್ನು ತಪ್ಪು ದಾರಿಗೆಳೆಯುವಂಥ ಸನ್ನಿವೇಶಗಳು ಒದಗಿ ನಮ್ಮನ್ನು ಚರಲಗೊಳಿಸುವುವು. ಅವಕ್ಕೆ ನಾವು ಮನಸ್ಸು ಕೊಡಬಾರದು. ವಿಧೇಯತೆ, ಪ್ರೀತಿ, ಅಸಾರ್ಥಪರತೆ, ಇತ್ಯಾದಿಗಳು ಬಾಲ್ಯದಿಂದಲೂ ಮನೆಯಲ್ಲಿ ಆಚರಿಸಲ್ಪಡಬೇಕಾದ ಕರ್ತವ್ಯಗಳು ಇನ್ನು ಸ್ವಲ್ಪ ವಯಸ್ಸು ದನಂತರ ಪಾಠಶಾಲೆಯಲ್ಲಿ ನಡೆಯಿಸತಕ್ಕ ಕರ್ತವ್ಯಗಳೂ ಎಷ್ಟೋ ಉಂಟು. ತನಗೋಸ್ಕರ ತಾವು ಮಾಡಿಕೊಳ್ಳಬೇಕಾದ ಕರ್ತವ್ಯಗಳು, ಅವುಗಳ ಜವಾಬ್ದಾರಿ ಇಂಥವುಗಳನ್ನೆಲ್ಲ ಮಕ್ಕಳಿಗೆ ದೊಡ್ಡವರು ತಿಳಿ (