ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ ಬ. ಳನ್ನು ಮಿತವಾಗಿ ನಡೆಯಿಸಿಕೊಳ್ಳತಕ್ಕುದು ಪ್ರತಿಯೊಬ್ಬರಿಗೂ ಕರ್ತವ್ಯ, ಆಗಬೇಕಾದ ಯಾವ ಕೆಲಸಗಳಿಗೂ ಇದರಿಂದ ಲೋಪವಿಲ್ಲ, ಮತ್ತು ಸ್ಪಸಂಬಂಧದಲ್ಲಿಯೇ ಇದು ಪಠ್ಯವಸ್ಥಿತವಾಗುವುದು. ಲುಬ್ದ ತವಾದರೋ ಇಂಥದಲ್ಲ. ಲುಬ್ಬನು ತನ್ನಲ್ಲಿರುವುದನ್ನು ತಾನೂ ಉಪಯೋಗಿಸುವು ದಿಲ್ಲ. ಇತರರಿಗೂ ಕೊಡುವುದಿಲ್ಲ. ಹೆಚ್ಚಾಗಿ ಹಣಗಾರರಾಗಿದ್ದ ಮಾತ್ರಕ್ಕೆ ಮಿತವ್ಯಯವನ್ನು ಆಚರಿಸ ಕೂಡದೆಂಬುದಾಗಲಿ, ಬಡವರು ಮಾತ್ರ ಇದನ್ನು ಆಚರಿಸಬೇಕೆಂಬುದು ಗಲಿ ಏನೂ ಇಲ್ಲ. ಅಕ್ಷರವಂತರೂ ಮಿತವ್ಯಯವನ್ನು ಆಚರಿಸುತ್ತ ಬಂದರೆ ಇದರಲ್ಲಿ ಶೇಖರಿಸಬಹುದಾದ ದ್ರವ್ಯಗಿಂದ ಬಡಬಗ್ಗರಿಗೆ ಹಲವು ಬಗೆಯ ಉಪಕಾರಗಳನ್ನು ಮಾಡಿ ಪುಣ್ಯವನ್ನು ಸಂಪಾದಿಸಿಕೊಳ್ಳಬಹುದು. ಜಾರ್ಜ್ ವಾಷಿಂಗ್ರನ್ನನನ್ನು ಉತ್ತರ ಅಮೇರಿಕಾದ ಸಂಯುಕ್ತ ಸಂಸ್ಥಾನಗಳ ಪ್ರೆಸಿಡೆಂಟ್ ಕೆಲಸಕ್ಕೆ ಕರೆವುದಕ್ಕೆ ಹೋದಾಗ್ಗೆ ಆತನು ತನ್ನ ಹೊಲವನ್ನು ತಾನೇ ಉಳುತ್ತಿದ್ದನಂತೆ ! ನಂದರನ್ನು ನಿಲ್ಲೋಲವಾಡಿ ಚಂದ್ರಗುಪ್ತನಿಗೆ ಪಟ್ಟಾಭಿಷೇಕವಾಡಿದ ಚಾಣಕ್ಯನು ಒಂದು ಹುಲ್ಲು ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದನಂತೆ ! ಮಿತವ್ಯಯಾಚರಣೆ ಯು ಹುಟ್ಟುವಾಗಲೇ ಜತೆಯಲ್ಲಿ ಬರುವಂಥ ಸ್ವಾಭಾವಿಕವಾದ ಗುಣವಲ್ಲ, ವಿತವ್ಯಯಾಚರಣೆಯುಳ್ಳವರನ್ನು ನೋಡು ವುದು, ಅಥವಾ ಸ್ವಂತ ಅನುಭವ, ವಿದ್ಯಾಭ್ಯಾಸ, ನಾಗರಿಕತೆ, ಮುಂದು ಲೋಚನೆ ಇತ್ಯಾದಿಗಳ ಮೂಲಕ ಕಲಿಯತಕ್ಕುದಾಗಿದೆ. ಮನುಷ್ಯನು ಮುಂ ದಿನ ಅನುಕೂಲತೆಗೊಸ್ಕರ ಈಗ ಕೆಲಸಮಾಡುತ್ತಲೂ ಮುಂದೆ ಬರುವ ತೊಂದರೆ ನಿವಾರಿಸಿಕೊಳ್ಳುವುದಕ್ಕೋಸ್ಕರ ಸನ್ನದ್ದನಾಗುತ್ತಲೂ ಇರು ವನು, ಕಾಸುಗಳನ್ನು ನಾವು ಕೂಡಿಹಾಕುತ್ತ ಬಂದರೆ ರೂಪಾಯಿಗಳನ್ನು ಕೂಡಿ ಹಾಕುವ ಕೆಲಸವನ್ನು ಆ ಕಾಸುಗಳು ತಾವಾಗಿಯೇ ಮಾಡಿಕೊಳ್ಳು ಇದು ಶೇಖರಿಸುವ ವಿಧಾನವಾಯಿತಷ್ಟೆ. ದುಂದುಗಾರಿಕೆಯು ವಿಟಿ ರವೂ ಹೀಗೆಯೇ ಒಂದು ದೊಡ್ಡ ಪಾತ್ರೆಗೆ ಒಂದೇ ಒಂದು ಸಣ್ಣ ರಂಧ್ರವಿ