ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ದ್ದರೂ ಸ್ವಲ್ಪ ಹೊತ್ತಿನಲ್ಲಿಯೇ ಅದನ್ನು ಬರಿದು ಮಾಡಬಲ್ಲುದು. ಆದ್ದರಿಂದ ಖರ್ಚುವೆಚ್ಚಗಳ ವಿಷಯದಲ್ಲಿ ಸರದ ಸಮತೆಯಿರಬೇಕು. ( ಇದ್ದಾಗ ಇರಿಯಲ್ಲಿ ಇಲ್ಲದಾಗ ಕಿರಿಯಣ್ಣ, ' ಎಂಬಂತೆ ನಡೆವುದು ಸುತರಾಂ ನಿಸಿದ್ದ. ಈ ವಿಷಯವಾಗಿ ಎಷ್ಟೋ ದೃಷ್ಟಾಂತಗಳಿವೆ. ಆಹಾರ-ವಿಹಾರಾ ದಿಗಳು ಕೂಡ ಮಿತಾಚರಣೆಯಿಂದ ಬಹಳ ಪ್ರಯೋಜನಗಳುಂಟು, ಇದ ರಿಂದ ಆರೋಗ್ಯವು ಕಡದಂತೆ ಇರುವುದು. ಆಹಾರದಲ್ಲಿ ಮಿತಿಮೀರಿ ನಡೆ ಯುವುದರಿಂದ ಅಜೀರ್ಣ ಮೊದಲಾದ ವ್ಯಾಧಿಗಳುಂಟಾಗುವುವು ಹಣಗಾ ರರು ಹೀಗೆ ಮಿತಿಮೀರಿ ನಡೆಯುವುದರಿಂದ ಬೊಜ್ಜು ಬೆಳೆಯಿಸಿಕೊಂಡು ನಿತ್ಯ ರೋಗಿಗಳಾಗಿರುವರು. ದುಂದುಗಾರನು ಎಷ್ಟು ವೆಚ್ಚ ಮಾಡಿದರೂ ಇನ್ನು ಮುಂದಕ್ಕೂ ಆಸೆಪಡುತ್ತಲೇ ಇರುವುದರಿಂದ ಅವನಿಗೆ ಯಾವಾಗೂ ತೃಪ್ತಿಯೇ ಇಲ್ಲ. ಮಿತಾಚರಣೆ ಮುಳ್ಳವನಿಗಾದರೂ ಮನಸ್ಸು ಸರದಾ ತೃಪ್ತವಾಗಿಯೂ ಶಾಂತವಾಗಿಯೇ ಇರುವುದು. ಮಿತಾಚರಣೆಯುಳ್ಳವರು ಸ್ವತಂತ್ರರಾಗಿ ಬಾಳುವರು. ಸ್ವಾತಂತ್ರವು ತುಂಬಾ ಗೌರವದವು. ಹಾಗಿಲ್ಲದೆ ಇತರರ ಹಂಗಿಗೆ ಬೀಳುವುದು ಬಲಹೀನಾಯ. ತಿರುಪ ಯಾಚ ನೆ, ದೈನ್ಯ ಇಂಥವೆಲ್ಲಾ ಮನುಷ್ಯನ ಘನತೆಯನ್ನು ಹಾಳುಮಾಡುತ್ತವೆ. ಲೋಕದಲ್ಲಿ ಎಷ್ಟೋ ಕೆಲಸಗಳು ನಡೆದ ನಡೆಯುತ್ತಲೂ ಇರುವುದೆಲ್ಲಾ ಮಿತಾಚರಣೆಯನ್ನು ಪಡೆದಿದ್ದ ಮಹನೀಯರಾದ ಧನಿಕರು ಶೇಖರಿಸಿದ್ದ ದ್ರವ್ಯದಿಂದಲೇ. ಉದಾ-ಕಟ್ಟಡಗಳು, ಸೇತುವೆಗಳು, ಕಾರ್ಖಾನೆಗಳು:`ರೈಲ್ವೆಗಳು, ಮೊದಲಾದುವುಗಳು ಏರ್ಪಟ್ಟು ಲೋಕದಲ್ಲೆಲ್ಲಾ ಪರಸ್ಪರ ಪಕಾರವನ್ನೂ ನಾಗರಿಕತೆಯನ್ನೂ ಹರಡುತ್ತಿರುವುದು ವಿತವ್ಯಯದ ಪ್ರ ಭಾವದಿಂದಲೇ ಅಲ್ಲವೆ ? ಮಿತವ್ಯಯಾಚರಣೆಯಿಂದ ಆತ್ಮಸಂಯಮನವೂ ನಿಗರಿತವೂ ಉಂಟಾಗುವುವು. ಒಬ್ಬೊಬ್ಬರು ಸ್ವಲ್ಪ ಸ್ವಲ್ಪವಾಗಿ ಶೇಖರಿ ಸಿದರೂ ಒಟ್ಟು ಜನಾಂಗವೇ ಭಾಗ್ಯಶಾಲಿಯಾಗುವುದು ಪೋಸ್ಟ್ ಆಫೀಸ್, ಸೇವಿಂಗ್ಸ್ ಬ್ಯಾಂಕ್, ಲೈಫ್ ಇಸ್ ಬ್ಯೂರೆನ್ಸ್ ಮೊದಲಾದವುಗಳಲ್ಲಿ ಸ್ವಲ್ಪ ಸ್ವಲ್ಪವಾಗಿಯೇ ಕಂಡಹಾಕಿದ ದ್ರವ್ಯವು ಕೂಡ ಕಾಲಕ್ರಮದಲ್ಲಿ ಬಹಳ ವಾಗಿ ಹೆಚ್ಚುವುದು, ಹೀಗೆಯೇ ಅನೇಕರು ಅಲ್ಪ ಸ್ವಲ್ಪ ಚಂದಾಹಣವನ್ನು