ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ವುಂಟು. ಇವುಗಳೆಲ್ಲಾ ಆಯಾಕಾಲದಲ್ಲಿ ತಪ್ಪದೆ ನಡೆಯುವಂತೆ ಮೇಲ್ಪ ಚಾರಣೆ ಮಾಡಿಕೊಳ್ಳುತ್ತಿರುವುದು ಪ್ರಕೃತಿಯ ಕೆಲಸವು. ಪ್ರಕೃತಿ ಯನ್ನು ಮಾರಿನಡೆಯುವುದು ಯಾರಿಗೂ ಸಾಧ್ಯವಿಲ್ಲ. ಮೇಲೆ ಕಂಡಂತೆ ನಿಯಮಕ್ಕೂ ಕ್ರಮ ಅನುಸಾರವಾಗಿ ಪ್ರಪಂಚವು ನಡೆದುಕೊಳ್ಳಲಿ ಎಂಬ ಉದ್ದೇಶದಿಂದ ಪ್ರಕೃತಿಯು ಎಷ್ಟೋ ಬಗೆಯ ಸೌಕಠ್ಯಗಳನ್ನು ಒದಗಿಸಿಕೊಟ್ಟಿದ್ದಾಳೆ. ಅವುಗಳಲ್ಲಿ ಕಾಲವು ಅತಿಮುಖ್ಯವಾದ ಒಂದು ಅಂಶವಾಗಿದೆ. ಆದುದರಿಂದಲೇ ಪ್ರತಿಯೊಂದಕ್ಕೂ ಕಾಲದ ತಿಳಿವಳಿಕೆ ಯು ಅತ್ಯಾವಶ್ಯಕವಾಗಿದೆ ಬೆಳಗಾಯಿತೆಂದು ತಿಳಿದ ಹೊರತು ಹಕ್ಕಿಗಳು ಹೊರಕ್ಕೆ ಹೊರ ಡವು, ತಾವರೆಗಳು ಅರಳವು. ಜನಗಳು ಎಚ್ಚರಗೊಳ್ಳರು. ಹೀಗೆಯೇ ರಾತ್ರಿಯಾಯಿತೆಂದು ತಿಳಿದರೇನೆ ಹಗಲು ಕೆಲಸಮಾಡಿ ದಣಿದಿರುವುವು ಗಳೆಲ್ಲಾ ವಿಶಾಂತಿಯನ್ನು ಪಡೆಯುವುವು. ಮತ್ತು ಹಗಲು ನಿದ್ರಿಸುತ್ತಿದ್ದ ಹುಲಿ ನರಿ ಗೂಬೆ ಮೊದಲಾದುವುಗಳಲ್ಲಾ ಸಂಚರಿಸತೊಡಗುವುವು. ಹೀಗೆ ಲೋಕದಲ್ಲಿರತಕ್ಕ ಸಮಸ್ತ ಚರಾಚರವಸ್ತುಗಳಿಗೂ ಕಾಲವನ್ನು ತಿಳಿಯಿ ಸುವುದಕ್ಕೋಸ್ಕರ ಅಂತರಿಕ್ಷದಲ್ಲಿ ತೇಜೋಮಯವಾದ ಒಂದು ದೊಡ್ಡ ಗೋಳವನ್ನು ತೇಲಿಬಿಟ್ಟು ಸೂರ್ಯನೆಂದು ಹೆಸರಿಟ್ಟು ಅವನಿಂದ ಕಾಲ ವನ್ನು ತಿಳಿಯಿಸುವ್ರದು ಮಾತ್ರವಲ್ಲದೆ ಶಾಖ, ವೃಷ್ಟಿ ಮೊದಲಾದ ಇತರ ಸಹಾಯಗಳನ್ನು ಒದಗಿಸಿ ಲೋಕವು ಸದಾ ಊರ್ಜಿತ ಸ್ಥಿತಿಯಲ್ಲಿರು ವಂತೆ ಮಾಡುವುದು ಮಹಾನುಭಾವನಾದ ಜಗದೀಶ್ವರನ ಮಹಾಮಹಿಮೆ ಯಾಗಿದೆ. ಕಾಲಪರಾಯಗಳನ್ನು ತಿಳಿಯಿಸುವುದಕ್ಕೋಸ್ಕರ ವಸಂತ ಋತು, ವರ್ಷಋತು, ಹೇಮಂತನು ತು ಮೊದಲಾದ ಭೇಧಗಳನ್ನು ಕಲ್ಪಿಸಿ ಅವು ಒಂದಾಗುತ್ತ ಮತ್ತೊಂದರಂತೆ ಪುನಃಪುನಃ ಬರುವ ಚಕ್ರದಂತೆ ಆವೃತ್ತಿಯಾಗುವ ಹಾಗೆ ಮಾಡಿರುವುದೂ ಅದೇಸ್ವಾಮಿಯ ಕೆಲಸವೇ, ಹೀಗಿಲ್ಲದೆ ಸದಾ ಮಳೆಗಾಲ, ಸದಾ ರಾತ್ರಿ ಅಥವಾ ಸದಾ ಚಹೀಗೆ ಕಾಲವನ್ನು ಒಂದೇ ರೀತಿಯಲ್ಲಿಟ್ಟಿದ್ದರೆ ಎಲ್ಲರಿಗೂ ಲೋಕದಲ್ಲಿ ಜುಗು ಪೈಯ ಬದುಕುವುದೆಂದರೆ ಬೇಸರವೂ ಉಂಟಾಗಿ ಪ್ರಪಂಚವೇ ಹಾಳಾ ಗುತ್ತಿದ್ದಿತು, ಆದರೆ ಹಾಗೆ ನಾಶಪಡಿಸತಕ್ಕದ್ದು ಭಗವಂತನ ಸಂಕಲ್ಪ