ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ೪ನೂ ಇರುವುದೇ ಇಲ್ಲ, ಅರಾರು ಏನೇನು ಮಾಡಿರುವರು ಎಂಬುದು ಮಾತ್ರ ಮುಖ್ಯವಾಗಿ ಗಮನಿಸಲ್ಪಡುವುದು. ಎಷ್ಟೆಷ್ಟು ಎಂಬುದು ಬೇಕಿಲ್ಲ. ಹೇಗೆ ಹೇಗೆ ಮತ್ತು ಯಾವ ಯಾವ ಉದ್ದೇಶದಿಂದ ಮಾಡಿರುವರೆಂಬುದು ಬೇಕಾಗುವುದು ಅದದಕ್ಕೆ ತಕ್ಕಂತೆಯೇ ಫಲವೂ ದೊರೆಯುವುದು.

  • (32) ನ್ಯಾಯ, ನ್ಯಾಯವೆಂಬುದು ಮನುಷ್ಯ ಕುಲದಲ್ಲಿ ಅನೂಚಾನವಾಗಿ ನಡೆದು ಕೊಂಡು ಬಂದಿರುವ ಒಂದು ಒಳ್ಳೆಯ ನೀತಿಯಾಗಿದೆನ್ಯಾಯವಿದು ರ್ಶೆಯು ನಾಗರಿಕತೆಯ ಜತೆಯಲ್ಲಿಯ ದಿನದಿನಕ್ಕೂ ಅಭಿವೃದ್ಧಿಯನ್ನು ಪಡೆಯುತ್ತಿರುವುದು. ನ್ಯಾಯಕ್ಕೆ ರಾಜನೇ ಮಾತೃಸ್ಥಾನ. ನ್ಯಾಯವು ಜನಗಳ ಯೋಗ್ಯತೆಯಲ್ಲಿ ತಾರತಮ್ಯವನ್ನರಿತು ತಕ್ಕಂತೆ ನಡೆಯುವುದು, ಯಾವ ಕಾರಣದಿಂದ ಒಂದು ಪಕ್ಷವನ್ನು ದ್ವೇಷಿಸಬೆಯ ಮತ್ತೊಂದು ಪಕ್ಷವನ್ನು ಪ್ರೀತಿಸದೆಯ ನಿಷ್ಪಕ್ಷಪಾತವಾಗಿ ಪ್ರತಿಯೊಬ್ಬರಿಗೂ ಅವರ ವರಿಗೆ ಸಲ್ಲತಕ್ಕದನ್ನು ಸಲ್ಲಿಸುವುದು ನ್ಯಾಯವು.

ನ್ಯಾಯದಲ್ಲಿ ಸುನತೆಯ ಆದಾಗ್ಯವು ಸೇರಿವೆ. ಅನ್ಯಾಯವು ಅಮರಾದೆಯನ್ನು ತರುವುದು. ನಿಮಗೆ ಹಗೆಯಾದವರಿಗೆ ಕಾಡ ಅವರಿಗೆ ಸಲ್ಲ ತಕ್ಕುದನ್ನು ಸಲ್ಲಿಸುವುದೇ ಔದಾರ್ಯದಿಂದಲೂ ಪ್ರಾಮಾಣಿಕತೆಯಿಂ ದಲೂ ಕೂಡಿದ ಧರವು. ಶತ್ರುತವಿರುವುದರಿಂದ ಅವರಿಗೆ ಕರಕುಮಾರ ಬೇಕಂದು. ನಮ್ಮ ಮನಸ್ಸು ಪ್ರವರ್ತಿಸುವುದಾಗಿದ್ದರೂ ನ್ಯಾಯವು ಅದಕ್ಕೆ ಬುದ್ಧಿಯನ್ನು ಹೇಳ ತಿದ್ದುವುದು, ಲೋಕದಲ್ಲಿ ನ್ಯಾಯವನ್ನು ಸರನೆ ಶ್ಲಾಘಿಸುವರು. ಇಷ್ಟೇ ಅಲ್ಲದೆ ನ್ಯಾಯವನ್ನು ಹಲವುಬಗೆಯರೂಪಗ ೪ಂದ ಶ್ಲಾಘಿಸುವುದೂ ಉಂಟು. ಅತ್ಯಂತ ಪ್ರಸಿದ್ಧರಾದ ರೋರ್ಮರು ನ್ಯಾಯವನ್ನು ಒಂದು ಸ್ತ್ರೀ ಪ್ರತಿಮೆಯ ರೂಪದಲ್ಲಿಟ್ಟುಕೊಂಡು ಆ ವಿಗ್ರ ಹದ ಒಂದು ಕೈಯಲ್ಲಿ ತಾಸನ್ನು ಕೊಟ್ಟಿರುವರು. ಇದರಿಂದ ನ್ಯಾಯದಲ್ಲಿ ಸಮತೆಯಿರಬೇಕೆಂಬುದು ವ್ಯಕ್ತಪಡುವುದು. ನ್ಯಾಯದ ಭುನತೆಯನ್ನು ಸೂಚಿಸುವುದಕ್ಕೋಸ್ಕರ ಮತ್ತೊಂದು ಕೈಯಲ್ಲಿ ಒಂದು ಕಡ್ಡಿಯನ್ನು ಕೊಟ್ಟಿರುವರು. ಈಜಿಪ್ಟ್ ದೇಶದವರೂ ನ್ಯಾಯವನ್ನು ಮನುಷ್ಯ ಪ್ರತಿ ಮಯರೂಪದಲ್ಲಿ ಆರಾಧಿಸುತ್ತಿದ್ದರು. ಆದರೆ ಆ ರೂಪವು ಬಹಳ ಪಿ