ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡವಳಿ

1 ಖಡ್ಗವಾಗಲಾರದು. ಎಂದು ಹೇಳಿದನಂತ! ನ್ಯಾಯವನ್ನು ಒಬ್ಬನೇ Boxನಿಸುವುದಕ್ಕಿಂತಲೂ ಹಲವು : ಜನ ಪಂಚಾಯಿತರು ಸೇರಿ, ಹೆಚ್ಚು ಜನಗಳ 'ಅಭಿಶಯದಂತೆ ತೀಕ್ನಾನ ಮಾಡುವುದುತ್ತಮ. ಯಾವ ಮೊಕದ್ದಮೆಯನ್ನೂ ಶೀಘ್ರದಲ್ಲಿಯೇ ತೀರಾನಿಸುವುದು ಕೈಯಮ. ಆಗಾಗಿನ ಮೊಕದ್ದಮೆಗಳನ್ನು ಆಗಾಗಲೇ ಇತ್ಯರ್ಥವಾಗಿ ರದೆ ಮುಂದು ಮುಂದಕ್ಕೆ ತಳ್ಳುತ್ತ ಕಾಲವಿಳಂಬವಾಡುತ್ತ ಬಂದಂತಲ್ಲು ನ್ಯಾಯವು ದುರ್ಬಲವಾಗುತ್ತ ಬಂದು ಅನ್ಯಾಯಕ್ಕೆ ಅವಕಾಶವಾಗುವ ಸಂಭವವುಂಟು. ಆದುದರಿಂದಲೇ ಕಡೆಗೆ ಕ್ರಿಮಿನಲ್ ಕೇಸುಗಳನ್ನಾದರೂ ಬೇಗ ತೀರಾನಮಾಡಲೇಬೇಕೆಂದು ಸತ್ಕಾರದವರು ವಿಧಿಸಿರುವರು. ಇದ ರಿಂದಲೇ ಆ ಕೋರ್ಟುಗಳಲ್ಲಿ ಬೇಸಿಗೆ ರಜವು ಕೂಡ ಇಲ್ಲದೆ ಕಲಸವು ಈಯುವುದು, ನ್ಯಾಯವು ಒಳ್ಳೆಯತನವನ್ನು ಗೌರವಿಸುವುದಲ್ಲದೆ ಕಡಕಿಗೆ ಶಿಕ್ಷೆ ಯನ್ನು ಮಾಡುತ್ತದೆ "ಒಂದಾನೊಂದು ಕಡೆ ಯುದ್ಧವು ನಡೆಯುತ್ತಿದ್ದಾಗ ಬಂಡು ಸೈನ್ಯಕ್ಕೆ ಸೇರಿದ ಒಬ್ಬ ಸಿಪಾಯಿಯು ಕೌಪೀನವನ್ನು ಧರಿಸಿ ಕೂ೦ಡು ಸುನಮಾಡುತ್ತಿದ್ದು ದಂಡಿನ ತುತ್ತುರಿಯ ಸದ್ದನ್ನು ಕೇಳುತ್ತಲೇ ತನ್ನ ಆಯುಧಗಳನ್ನು ತೆಗೆದುಕೊಂಡು ಇದ್ದಕ್ಕಿದ್ದ ಹಾಗೆಯೇ ಯುದ್ಧಕ್ಕೆ ಹೊರಟನು. ಮತ್ತು ಧೈಯ್ಯದಿಂದ ಕಾದಿ ಶತ್ರುಗಳನ್ನು ಗೆಲ್ಲುವುದರಲ್ಲಿ ಬಹಳ ಸಾಹಸವನ್ನು ತೋರಿಸಿದನು ಅವನ ಸೈನ್ಯದವರಿಗೇ ಜಯವ ಯಿತು. ಆ ಮೇಲೆ ಆ ಸೈನ್ಯದ ದಳಪತಿಯು ಈ ಯೋಧನನ್ನು ಕರೆಯಿಸಿ ತುತ್ತುರಿಯ ಸದ್ದನ್ನು ಕೇಳಿದೊಡನೆಯೇ ತನ್ನ ಕರ್ತವ್ಯವನ್ನು ನೆರವೇರಿಸಿ ದುದಕ್ಕಾಗಿ ಬಹುಮಾನವನ್ನೂ ಸರಿಯಾದ ಉಡುಪನ್ನು ಧರಿಸಿಕೊಳ್ಳದೆ ಯುದ್ಧಕ್ಕೆ ಹೊರಟಿದುದಕ್ಕಾಗಿ ಶಿಕ್ಷೆಯನ್ನೂ ಆಜ್ಞಾಪಿಸಿದನು. ಅಂತ ಆವಾವುದಕ್ಕೆ ಏನೇನು ಸಲ್ಲಬೇಕೋ ಅದದಕ್ಕೆ ಆದದನ್ನು ಸಲ್ಲಿಸತ ಕುದೇ ನ್ಯಾಯ.

  • ಕರ್ತವ್ಯವನ್ನು ಸರಿಯಾಗಿ ನಡೆಯಿಸದೆ ಇದ್ದುದಕ್ಕೆ ಶಿಕ್ಷೆಯಾಗು ಇದೇನೋ ಖಂಡಿತವಾದರೂ, ಕರ್ತವ್ಯವನ್ನು ಸರಿಯಾಗಿ ನೆರವೇರಿಸಿದ್ದು ದಕ್ಕೆ ಬಹುಮಾನವು ದೊರೆಯಲೇಬೇಕೆಂಬ ನಿರ್ಬಂಧವೇನೂ ಇಲ್ಲ.