ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ ಎಷ್ಟು ಕೆಟ್ಟುದೋ, ಉಪಕಾರಗಳನ್ನು ಮಾಡಿದಮಾತ್ರದಿಂದಲೇ ಮಯ್ಯಾ ದೆಯನ್ನು ಬಿಟ್ಟುಬಿಡಬೇಕೆಂಬುದೂ ಅಷ್ಟೇ ಕಟ್ಟು ದು. ಇತರರಿಗೆ ಮೇಲನ್ನುಂಟುಮಾಡುವುದರಲ್ಲಿ ಮನೋವಾಕ್ಕೆರಗ ಳಂಬ ಮೂರರ ಒಳ್ಳೆಯತನವೂ ಪರಸ್ಪರವಾಗಿ ಹೆಣೆದುಕೊಂಡೇ ಇದೆ ಆದು ದರಿಂದ ಮಾಡುವ ಸತ್ಕಾರದ ಜತೆಗೆ ಆಡುವ ಸಾಕ್ಯವೂ ಆವಶ್ಯಕ. ಇವೆ ರಡೂ ಮನಸ್ಸಿನ ಸ್ಥಿತಿಯನ್ನು ಚೆನ್ನಾಗಿ ವ್ಯಕ್ತಪಡಿಸುವುವು. ಯಾವ ಅಭಿಪಯದಿಂದ ಇತರರು ತಮಗೆ ಒಳ್ಳೆಯತನವನ್ನು ತೋರಿಸಿರುವರು ಎಂಬುದನ್ನು ತಿಳಿಯಬೇಕಾದರೆ ಉಪಕಾರಮಾಡಿದವರ ನಡೆನುಡಿಗಳನ್ನು ಪರಿಶೀಲಿಸಿ ನೋಡುವರು. ಅಂದರೆ ಮನೋಭಾವಗಳನ್ನು ತೋರ್ಪಡಿ ಸುವುದರಲ್ಲಿ ಕಾವ್ಯದಜತೆಗೆ, ವಾಕ್ಕಿನ ಮಹಿಮೆಯ ಮುಖ್ಯವಾದುದೆಂದಾ ಯಿತು. ಮಾತಿಗೆ ತೂಕವು ಹೆಚ್ಚು ಲೋಕದಲ್ಲಿ ಅನಂತವಾದ ಕೆಲಸಗಳು ನಡೆಯುತ್ತಲಿರುವುದು ಮಾತಿನ ಗೌರವದಿಂದಲೇ, ಒರಟುತನದಿಂದ ದ. ಡುಕಿ ಕಠಿನವಾಗಿ ಮಾತಾಡದೆ ಮೃದುವಾಗಿ ವಿನಯಪೂರಕವಾಗಿ ಆಡುತ್ತಾ ಇದರಸಂಗಡಲೇ ಒಳ್ಳೆಯ ಕೆಲಸಗಳನ್ನು ಮಾಡುತ್ತ ಬಂದರೆ ಆ ಕಲಸ ಗಳು ಮತ್ತಷ್ಟು ಚೆನ್ನಾಗಿ ನಡೆದು ಹೆಚ್ಚು ಫಲಗಳನ್ನು ಕೊಡುವುವು. ಒರಟುಮಾತು ಇತರರಮನಸ್ಸನ್ನು ನೋಯಿಸುವುದು. ಆದುದರಿಂದ ಮಾಡು ವಕಲಸ ಆಡುವ ಮಾತು ಇವೆರಡೂ ಸರಿಯಾಗಿರಬೇಕೆಂದಾಯಿತು. ಹಾಗೆ ನಮ್ಮ ನಡೆನುಡಿಗಳೆರಡೂ ಒಳ್ಳೆಯವಾಗಿದ್ದರೆ ಸಾಕು. ಇದರಿಂದ ಇತರರಿ ಗೇನೋ ಆಗಬೇಕಾದಷ್ಟು ಪ್ರಯೋಜನವು ಆಗಿಯೇ ಆಗುವುದು. ಆಗ ನಾವು ಏನೇನೂ ಪ್ರಯತ್ನ ಪಡದಿದ್ದರೂ, ಇತರರು ನನ್ನನ್ನು ಒಳ್ಳೆಯವ ರೆಂದು ಹೇಳುವರು.