ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ೧೬೯ ಗೋಚರವಾಗುವಾಗ ನಮಗೆ ಯಾವ ಕೆಡುಕನ್ನೂ ಮಾಡಲಾರರು. ಇದಕ್ಕೆ ಬದಲಾಗಿ ಒಳ್ಳಯಯೋಚನೆಗಳನ್ನು ಹುಟ್ಟಿಸಿ ನಮಗೆ ಒಳ್ಳೆಯದನ್ನೇ ಮಾಡಿ ಯಾರು. ಹೇಗೆಂದರೆ ಕೈಕಯಿ, ದುಧನ, ಶೈವರ್, ಔರಿಂಗ್ ಸೇಬ್, ಟಿಪ್ಪು ಮೊದಲಾದವರ ವಿಷಯವನ್ನು ನಾವು ಓದಿದರೆ ಅವರಂತ ನಾವು ಆಗಬಾರದು ಎಂಬ ಒಳ್ಳೆಯ ತಿಳಿವಳಿಕೆಯುಂಟಾಗುವುದೇ ವಿನಾ ನಮಗೆ ಯಾವ ಭಯವೂ ಇಲ್ಲ. ಅಥವಾ ಅವರಲ್ಲಿದ್ದಂಥ ಕೂರಬುದ್ದಿ ಯ ಹುಟ್ಟುವುದಿಲ್ಲ. ಆದುದರಿಂದಲೇ ವುಸ್ತಕಗಳು ಗುಳ್ಳೆಕ ಪಕ್ಷಪಾತಿಗೆ ಳು. ಈ ಪ್ರಪಂಚದಲ್ಲಿ ದೊರೆಯಬಹುದಾದ ಸಕಲ ಸಂಪತ್ತುಗಳನ್ನೂ ಪಡೆ ದಿಗೆ ತಕ್ಕ ಪರಮ ಪುಣ್ಯ ಪಾಲಿಗಳು ಕೂಡ ತಮಗೆ ಗ್ರಂಥಕಾಲಕ್ಷೇಪದಿಂದಲೇ ನಿಜವಾದ ಸುಖವುಂಟಾಗುವುದೆಂದು ಹೇಳುತ್ತಾರೆ. ಪುಸ್ತಕವನ್ನೋದುತಿ‌ ವಾಗ ಅಲ್ಲಿ ಬಹುಸ್ತಾ ರಸ್ಯವಾದ ಅಂಶವೇನಾದರೂ ಬಂದರೆ ಆಗ ಮನಸ್ಸೆಲ್ಲಾ ಅದರ ಮೇಲೆಯೇ ಇರುವುದರಿಂದ ಅನ್ನೋದಕಗಳಾಗಲಿ ಇತರ ಯಾವ ಸುಖ ಭೋಗಗಳಾಗಲಿ ಬೇಕಾಗುವುದಿಲ್ಲ. ಮತ್ತು ಎಷ್ಟು ಗದ್ದಲವಾದರೂ ಮನ ಸ್ಟು ಅಲ್ಲಿಂದ ಕದಲುವುದಿಲ್ಲ. ಓದುವ ಅಭ್ಯಾಸವನ್ನು ಚೆನ್ನಾಗಿ ಪಡೆದಿರು ವವರಿಗೆ ಪ್ರಪಂಚದ ಸಮಸ್ತ ಸುಖಸಾಧನಗಳನ್ನೂ ಒದಗಿಸಿ ಪುಸ್ತಕಗಳನ್ನು ಮಾತ್ರ ಕೊಡದಿದ್ದರೆ ನಿಜವಾಗಿಯಅವರಿಗೆ ಮರಣ ಸಂಕಟವುಂಟಾಗವುದು, ಎಷ್ಟೋ ಸಂದರ್ಭಗಳಲ್ಲಿ ಪ್ರಪಂಚದ ಪ್ರಕೃತಿ ಸೌಂದಯ್ಯ ಮೊದಲಾದು ವನ್ನು ಪ್ರತ್ಯಕ್ಷವಾಗಿ ನೋಡುವುದಕ್ಕಿಂತ ಬಣ್ಣದ ಚಿತ್ರಗಳಲ್ಲಿ ಭಾವ ಚಿತ್ರಗಳಲ್ಲಿ ಅಥವಾ ಪ್ರತಿ ಬಿಂಬಗಳಲ್ಲಿ ನೋಡುವುದು ಹೇಗೆ ಹೆಚ್ಚು ಸಂತೋಷಕರವೋ ಹಾಗೆಯೇ ಅನೇಕ ವಿಷಯಗಳನ್ನು ಗ್ರಂಥಗಳಲ್ಲಿ ಓದಿ : ತಿಳಿಯುವುದು ಬಹಳ ಆಹ್ಲಾದಕರವಾಗಿರುವುದು. ಓದುವಾಗ ನನ್ನ ಮನಸ್ಸಿಗೆ ಉಲ್ಲಾಸವುಂಟಾಗದಿದ್ದರೆ ಅದಕ್ಕೆ ನನ್ನ ತಪ್ಪೇ ಕಾರಣ, ಪುಸ್ತಕ ಓದುವುದರಲ್ಲೂ ಬುದ್ದಿವಂತಿಕೆಯಿರಬೇಕು, ಅರ್ಥವನ್ನು ತಿಳಿದು ಕೂಳ್ಳದೆ ಗಿಣಿಯಂತೆ ಎಷ್ಟು ಸಲಬಾಯಶಾಠ ಮಾಡಿದರೂ ವ್ಯರ್ಥವೇ ಪ್ರತಿಯೊಬ್ಬರೂ ತಮಗೆ ಚೆನ್ನಾಗಿ ಓದುವುದಕ್ಕೂ ಬರೆಯುವುದಕ್ಕೂ