ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

NA ಆsarಟಿಕಗ್ರಂಥವಳ ಗಳಿಂದಲೂ ಪ್ರಯೋಜನಗಳನ್ನು ಪಡೆಯಬೇಕು. ಮತ್ತು ಅನೇಕರು ಸತ್ಕಾರದವರೊಡನೆ ತಮ್ಮಗೆ ಇಷ್ಟವಾದುದನ್ನು ಅರಿತಮಾಡಿಕೊಳ್ಳಬೇw ದರೆ ಎಲ್ಲರೂ ತಮ್ಮ ತಮ್ಮ ಮನಸ್ಸು ಬಂದಂತ ಕೂಗಿಕೊಳ್ಳಬಾರದು. ಅದು ಅನಾಗರಿಕತೆ ಮತ್ತು ಕೇಳುವವರಿಗೆ ಬೇಸರವಾಗುವುದರಿಂದ ಕೆಲಸ ಬೇ ಕೆಟ್ಟುಹೋದೀತು. ಆದುದರಿಂದ ಅನೇಕರು ಸೇರಿ ಒಂದೊಂದು ಸಭೆ ಯನ್ನು ಮಾಡಿಕೊಂಡು ವಿಷಯಗಳನ್ನು ಚರ್ಚಿಸಿ ತಮ್ಮ ಪಕ್ಷವಾಗಿ ಒಬ್ಬ ರಿಬ್ಬರು ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದುತ್ತಮ, ಪ್ರಜೆಗಳಾದ ನಮ್ಮಲ್ಲಿ ; ಅವನು ಹಿಂದು, ಅವನು ಮುಸಲ್ಮಾನ, ಇವನು ಧನಿಕ, ಇವನು ಬಡವ, ಇವನು ಮಿತ್ರ, ಇವನು ಕತ್ತು ಎಂಬ ಭೇದಭಾವಗಳನ್ನಿಡದೆ ಎಲ್ಲರೂ ಬಬ್ಬ ತಾಯಮಕ್ಕಳಂತೆ ಪರಸ್ಪರ ಸಹೋದದರ ಪ್ರೀತಿಯಿಂದ ಒಗ್ಗಟ್ಟಾಗಿ ನಡೆದರೆ ಎಂಥೆಂಥ ಕೆಲಸಗಳ ಕೈಗೂಡುವುವು. ಪರಸ್ಪರ ಸಹಾಯದ ಬ್ಯಾಂಕುಗಳು, ಕೃಷಿ ಕೈಗಾರಿಕ ಗಳನ್ನು ವೃದ್ಧಿ ಪಡಿಸಿಕೊಳ್ಳುವುದಕ್ಕೂ ಮತವಿಚಾರಗಳನ್ನು ತಿಳಿದುಕೊ ಳ್ಳುವುದಕ್ಕೂ ತಕ್ಕ ಸಂಧುಗಳು, ವಾಚಕಮಂದಿರಗಳು ಇಂಥವನ್ನು ಕಲ್ಪಿ ಸಿಕೊಂಡು ಸತ್ಕಾರದ ಒತ್ತಾಸೆಯನ್ನು ಪಡೆದು ವೃದ್ಧಿಗೆ ಬರಬಹುದು ಪ್ರಜಾಪ್ರತಿನಿಧಿಗಳಲ್ಲಿ ಮತ್ತು ಪ್ರಕಾರ ನಿರಾಹಕ ಸಮಾಜಗಳಲ್ಲಿ ಕೆಲ ವರು ದುಷ್ಟರು . ತಮ್ಮನ್ನು ಚುನಾಯಿಸಿದ್ದಾಗುವವರೆಗೂ ಜನರನ್ನು * ಇಂದು ಚಂದ್ರ ದೇವೇಂದ್ರ' ಎಂದು ಹೊಗಳುತ್ತಿದ್ದು ಬಳಿಕ ಸತ್ಕಾರದ ಅಧಿಕಾರಿಗಳ ದಾಕ್ಷಿಣ್ಯಕ್ಕೊಳಪಟ್ಟೋ ಅಥವಾ ತಮ್ಮ ಪದವಿಗೆ ಭಂಗ ಬಂದೀತೋ ಎಂದು ಹೆದರಿಯೋ ಅಂತು ಜನಗಳಿಗೆ ಅನುಕೂಲತೆಯನ್ನು ಕಲ್ಪಿಸುವುದಕ್ಕೆ ಬದಲಾಗಿ ಪ್ರತಿಕೂಲರಾಗುವುದುಂಟು. ಇಂಥವರು ದ್ರೋಹಿಗಳು. ಆದುದರಿಂದ ಜನರು ಪ್ರತಿನಿಧಿಗಳನ್ನಾರಿಸುವುದರಲ್ಲಿ ಅವರ ಶೀಲಸ್ವಭಾವಗಳು, ಯೋಗ್ಯತೆ, ಮನೆತನ, ಘನತ, ಇತ್ಯಾದಿಗಳನ್ನೆಲ್ಲಾ ಯೋಜಿಸಬೇಕು. ಇಲ್ಲದಿದ್ದರೆ ಚೇಳಿಗೆ ಪಾರಪತ್ಯವನ್ನು ಕೊಟ್ಟಂತ ಆದೀತು. ಪ್ರತಿಕಸಬಿನವರೂ ಪ್ರತಿಪಂಗಡದವರೂ ತಮ್ಮ ತಮ್ಮ ವೃದ್ಧಿಗೆ ತಕ್ಕಂಥ ಏರ್ಪಡುಗಳನ್ನು ಮಾಡಿಕೊಳ್ಳಬೇಕು.