ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮e ಕರ್ಷಟಕಗ್ರಂಥಗಳ ವ್ಯಸನವಾಗುತ್ತಿದೆಯಲ್ಲವೇ? ಎಂದು ಕೇಳಿದುದಕ್ಕೆ ಆತನು-ಇಲ್ಲ, ನನಗೆ ಇನ್ನೂ ಇಪ್ಪತ್ತು ಜನ ಮಕ್ಕಳಿದ್ದರೂ ಅವರನ್ನೆಲ್ಲಾ ದೇಶಸೇವೆಗೋಸ್ಕರ ಸಂತೋಷವಾಗಿ ಒಪ್ಪಿಸುತ್ತಿದ್ದೆನು, ಎಂದನಂತ. ದೇಶಾಭಿಮಾನವೆಂದರೆ ಆ ರಾಜ್ಯದ ಬಾವುಟವನ್ನು ನೋಡಿ ಸುಮ್ಮನೆ ಹಿಗ್ಗುವುದು, ಅಥವಾ ಆ ವಿಷಯವಾಗಿ ಹಾಡುಗಳನ್ನು ಹೇಳುವುದು ಇಷ್ಟ ರಲ್ಲಿಯೇ ಪಠ್ಯವಸ್ಥಿತವಾಗತಕ್ಕುದಲ್ಲ. ಇದು ನಾನಾಮುಖಗಳಲ್ಲಿಯ ಪ್ರಕಟಗೊಳ್ಳುವುದಕ್ಕೆ ಅವಕಾಶವುಂಟು. ಹಾಗೆ ಮೇಲಾದ ಯಾವುದೊಂದು ರೂಪದಲ್ಲಿಯೂ ಪ್ರಕಟಪಡಿಸದೆ ಬರೀ ಬಾಯಮಾತಿನಿಂದ ಮಾತ್ರ ಹೇಳು ತಿರುವುದು ಕಾಪಟ್ಯವೆನಿಸುವುದು. ನಮ್ಮ ರಾಜ್ಯದಲ್ಲಿ ಎಷ್ಟೋಜನ ಹಳ್ಳಿಯ ವರಿದ್ದು ಲೋಕೋಪಕಾರ ಮಾಡಿರುವುದರಿಂದ ಅವರು ಗತಿಸಿ ಬಹಳ ಕಾಲವಾದರೂ ಈಗ ಎಲ್ಲರೂ ಅವರನ್ನು ಕೊಂಡಾಡುತ್ತಿರುವರು. ನಮ್ಮ ಹಿಂದಿನವರು ನಮಗೋಸ್ಕರ ಎಷ್ಟು ಕಷ್ಟಪಟ್ಟು ಎಂಥೆಂಥ ಅನು ಕೂಲತೆಗಳನ್ನು ಕಲ್ಪಿಸಿರುವರು ! ಕೆರೆಗಳು, ರಸ್ತೆಗಳು, ಮನೆ ಬಾಗಿಲು ಗಳು, ದೇವಾಲಯಗಳು, ಆಸ್ತಿ ಸಂಸ್ಥೆಗಳು, ಉತ್ತಮವಾದ ಗ್ರಂಥಗಳು ಇತ್ಯಾದಿಗಳನ್ನೆಲ್ಲಾ ಅವರು ಮಾಡಿಟ್ಟಿರದಿದ್ದರೆ ನಮಗೆಷ್ಟು ಕಷ್ಟವಾಗುತ್ತಿ ದ್ವಿತು! ದೇಶಾಭಿಮಾನವೆಂದರೆ ಸುಮ್ಮನೆ ನಮ್ಮ ದೇಶ, ನಮ್ಮ ಜನ ಎಂದು ಅಹಂಕಾರ ಪಡುವುದಿಲ್ಲ; ನಮ್ಮ ಪೂ೦ಕರು ನಮ್ಮ ರಾಜ್ಯದಲ್ಲಿ ಎಂಥೆಂಥ ಮೇಲಾದ ಕೆಲಸಗಳನ್ನು ಎಷ್ಟೆಷ್ಟು ಕಷ್ಟಪಟ್ಟು ಮಾಡಿರುವರೆಂಬುದನ್ನು ಯೋಚಿಸಿ ನಾವೂ ಅವರಂತೆಯೇ ನಮ್ಮ ದೇಶದ ಹಿತಕ್ಕಾಗಿ ಕೈಲಾದ ಮುಟ್ಟಿಗೂ ಸಹಾಯಮಾಡಬೇಕು. ಸಹಾಯಮಾಡುವುದೆಂದರೆ ಕೈಯಿಂದ ಏನಾದರೂ ದ್ರವ್ಯವನ್ನು ತತ್ತುಬಿಡುವುದೆಂದಲ್ಲ. ಇದಕ್ಕಾಗಿ ಯಾರೂ ಏನೂ ತೊಂದರ ಪಡಬೇಕಾದುದೂ ಇಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸ ಗಳನ್ನಾದರೂ ತಾವುತಾವು ಉತ್ಸಾಹದಿಂದಲೂ ಶ್ರದ್ದೆಯಿಂದಲೂ ಪ್ರಮಾ ಕತೆಯಿಂದ ಮಾಡುತ್ತ ಬಂದರಾಯಿತು, ಯಾವ ರಾಜ್ಯದಲ್ಲಿ ಯಾರು ಕಟ್ಟೆ ಪಟ್ಟು ಕೆಲಸಮಾಡುವರೋ ಅವರೆ ಆ ರಾಜ್ಯಕ್ಕೆ ಬಿತ್ತನುಡಿಗಳು ಎನ್ನ ಬಹುದು,