ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕಗ್ರಂಥಮಾಲೆ moovu varannannnnnnmmmmmmmmmonomana imorum ಬೇಕು. ಮೆದುಳಿಗೆ ವಿಶ್ರಾಂತಿಯನ್ನು ಕೊಡಲು ನಿದ್ರೆಯು ಸನ್ನದ್ದವಾ ಗಿಯೇ ಇರುವುದು. ಈ ರೀತಿಯಾಗಿ ನೋಡಿದಲ್ಲಿ ಅದುದೇ ಆಗುತ್ತಿದ್ದರೆ ಎಲ್ಲರಿಗೂ ಬದುಕುವುದು ಕೂಡ ಬೇಸರವಾಗಿ ಲೋಕವ್ಯವಹಾರವು ಚೆನ್ನಾಗಿ ನಡೆಯಲಾರದೆಂದು ಭಾವಿಸಿ ಭಗವಂತನು ಈ ವಿಧವಾದ ಬದಲಾ ವಣೆಯನ್ನು ದಯಪಾಲಿಸಿರು ವುದೊಂದು ಅಮೂಲ್ಯವಾದ ಅನುಗ್ರಹವೆಂದು ತಿಳಿಯಬೇಕು. ಆದುದರಿಂದ ಕೆಲಸಗಳ ಬದಲಾವಣೆಯೇ ವಿಶ್ರಾಂತಿಯೆಂದು ಬಲ್ಲವರು ಹೇಳುವರು. ಯಾವುದಾದರೊಂದು ಕೆಲಸವನ್ನು ಮಾಡಿ ದಣಿದಿದ್ದಾಗ ಮಾತ್ರ ವಿಶ್ರಾಂತಿಯು ಆವಶ್ಯಕ. ಹೀಗೆ ವಿಶಾ೦ತಿಯು ಒಂದು ಕೆಲಸ ಮುಗಿದ ಮೇಲೆ ಮತ್ತೊಂದು ಕೆಲಸದ ರೂಪದಲ್ಲಿ ಅಥವಾ ನಿರುದ್ಯೋಗದ ರೂಪ ದಲ್ಲಿರಬಹುದು. ಆದರೆ ಸರ್ವದಾ ಯಾವ ಕೆಲಸವನ್ನು ಮಾಡದೆ ಸುಮ್ಮನೆ ಕುಳಿತಿರುವುದು ಎಂದಿಗೂ ವಿಶ್ರಾಂತಿಯೆನಿಸಿಕೊಳ್ಳಲಾರದು. ಅದು ಸೋ ಮಾರಿತನವೆನಿಸುವುದು ಕೆಲಸಮಾಡುವುದರಿಂದ ಸವೆದುಹೋದ ಶರೀರಾಂ ಶಗಳು ಪುನಃ ಕೂಡಿಕೊಳ್ಳವುದಕ್ಕಾಗಿ ಸ್ವಲ್ಪ ಕಾಲವನ್ನೇ ಕೊಟ್ಟು ಆಗ ದಣಿವಾರಿಸಿಕೊಳ್ಳುವುದೆ ವಿಶಾ೦ತಿಯೆಂದು ಕೆಲವರು ವಿದ್ವಾಂಸರು ಹೇಳುವರು. ಪ್ರತಿಯೊಂದು ಪಣಿಗೂ ಆವಶ್ಯಕವಾದ ಈ ವಿಧವಾದ ವಿಶಾಲ ತಿಯು ನಿದ್ರೆಯಿಂದ ದೊರೆವುದು. ಇದು ಅಷ್ಟು ಮುಖ್ಯವಾದುದರಿಂದ ದೇವರಿಂದಲೇ ಅನುಗ್ರಹಿಸಲ್ಪಟ್ಟಿದೆ. ನಿಯು ಪ್ರಕೃತಿಯನ್ನು ಪೂರಸ್ಥಿ ತಿಗೆ ತರುವುದು. ಸಾಮಾನ್ಯವಾಗಿ ಒಬ್ಬ ಪುರುಷನಿಗೆ ಒಂದು ದಿನಕ್ಕೆ ಏಳು ಗಂಟೆಗಳ ಕಾಲವೂ ಒಬ್ಬ ಸ್ತ್ರೀಗೆ ಎಂಟುಗಂಟೆಗಳಷ್ಟು ಕಾಲವೂ ನಿದ್ರೆಗೆ ಆವಶ್ಯಕ. ಆದರೆ ಅವರವರು ಮಾಡುವ ವೃತ್ತಿಗಳಿಗೂ ಅವರವರ ದೇಹಸ್ಥಿತಿಗಳಿಗೂ ತಕ್ಕಂತೆ ಆ ಕಾಲವು ಸ್ವಲ್ಪಮಟ್ಟಿಗೆ ವ್ಯತ್ಯಾಸವನ್ನು