ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ anananananananan ananananana ಸಹಾ ಮಾಡುವರು. ನಮ್ಮ ವೇಲ್ಪಟ್ಟವರಿಗೆ ನಾವು ವಿಧೇಯರಾಗಿದ್ದರೆ ನಮಗಿಂತ ಕೀಳಾದವರು ನಮಗೆ ವಿಧೇಯರಾಗಿರುವರು. ವಿಧೇಯತೆಯು ಕೃತಜ್ಞತೆಯ ಹೊರಗಿನ ಹೆಗ್ಗುರುತು. ದೊರೆತನವನ್ನು ಕೂಡ ತೊರೆದು ತಂದೆಯಮಾತಿನಂತೆ ವನಪವ ತಾಳಿಮಾಡಿದ ಶ್ರೀರಾಮಚಂದ್ರನೂ, ಅಪ್ಪನ ಪ್ರಣೆಯನ್ನು ಎದುರುನೋಡುತ್ತಿರುವಾಗ ಅಗ್ನಿ ದೇವರಿಗೆ ಆಹಾರವಾಗಿ ಅಳಿದುಹೋದ ನಾವಿಕ ಬಾಲಕನಾದ ಕ್ಯಾಸಿಬಿಯಾಂಕನೂ ವಿಧೇಯತೆಗೆ ಮಾದರಿಯಾಗಿದ್ದಾರೆ. ಗುರುವೂ ಒಬ್ಬ ತಂದೆಯಂದು ನಮ್ಮ ಶಾಸ್ತ್ರಗಳಲ್ಲಿ ಉದಾಹರಿಸ ಆಸ್ಟಿರುವುದು. ಈತನು ಶಿಷ್ಯರಿಗೆವಾಡುವ ಮಹೋಪಕಾರವು ಅಸಾಧಾ ರಣವಾದುದು. ವಿದ್ಯೆಯಿಲ್ಲದವನು ತಿಳಿವಳಿಕೆಯಿಲ್ಲದೆ ಪಶುವೆಂದೆನಿಸಿಕೊ ಳ್ಳುವನು. ಅಂಥವಿದ್ಯೆಯನ್ನು ಕಲಿಸಿ ಜ್ಞಾನಾರ್ಜನೆಗೆ ಅನುಕೂಲತೆ ಯನ್ನು ಕಲ್ಪಿಸಿಕೊಟ್ಟು ಪಶುಪ್ಪವನ್ನು ಹೋಗಲಾಡಿಸಿ ನನ್ನನ್ನು ಮನು ಪ್ಯರೆಂದೆನಿಸುವಂತೆ ಮಾಡುವಗುರುವು ಪ್ರತ್ಯಕ್ಷದೇವರೆಂದರೂ ಅತ್ಯು ಯಾಗದು. ಇಂಥವರಿಗೆ ವಿಧೇಯರಾಗಿರಬೇಕಾದುದು ಪ್ರತಿಯೊಬ್ಬರಿಗೂ ಕರ್ತವ್ಯ. ಗುರುಗಳ ಆಜ್ಞಾಧಾರಕರಾಗಿದ್ದು ಅವರ ಅನುಗ್ರಹದಿಂದ ಸಕ ಲಶಾಸ್ತ್ರ ವಿಶಾರದರಾದ ಉಪಮನ್ಯು ಮೊದಲಾದ ನಮ್ಮ ಆರ್ಯಮಹಷಿ ಕುಮಾರರೂ ಆ ಚಂದ್ರಾರ್ಕವಾದ ಕೀರ್ತಿಯನ್ನು ಪಡೆದು ವಿಧೇಯತೆಯ ವಿಷಯದಲ್ಲಿ ಲೋಕಕ್ಕೆಲ್ಲಾ ಮೇಲ್ಪಬ್ಯಾಗಿದ್ದಾರೆ. (11) ತಾಳ್ಮೆ. ತನಗೆ ಏನೂ ತೊಂದರೆಯಾಯಿತು ಎಂಬ ಭಾವನೆಯಿಂದ ತಳಮ ಳಗೊಳ್ಳದೆ ಏಕರೀತಿಯಾಗಿರುವುದು ತಾಳ್ಮೆಯೆನಿಸುವುದು. ತಾಳ್ಮೆಯನ್ನು ಪಡೆಯಬೇಕಾದರೆ ಮನಸ್ಸು ತುಂಬ ದೃಢವಾಗಿರಬೇಕು. ಮನಸ್ಸು ದುರ್ಬಲವಾಗಿದ್ದರೆ ಹೆಚ್ಚುಗಾಬರಿ ಹುಟ್ಟುವುದು, ಕೆಲವುವೇಳೆ ಕಠ್ಯಗಳ