ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥಮಾಲೆ mamamaraannaama ಇದಕ್ಕೆ ಎದೆಗುಂದದೆ ತಾಳ್ಮೆಯಿಂದ ತಡೆದುಕೊಳ್ಳತಕ್ಕವರು ಇಹದಲ್ಲಿ ಧೀರ ರಾಗುವರಲ್ಲದೆ ಪರಲೋಕದಲ್ಲಿ ಯ ಸದ್ದತಿಯನ್ನು ಪಡೆಯುವರೆಂದು ಪ್ರಾಜ್ಞರು ಹೇಳಿರುವರು. ಕೇವಲ ಸಂತೋಷದಿಂದ ಅತಿಯಾಗಿ ಹಿಗ್ಗುವುದು ಕೂಡ ತಪ್ಪು, ಒಟ್ಟಾನೊಬ್ಬ ಬಡವನು ಯಾವುದೋ ಒಂದು ಲಾಟರಿಯಲ್ಲಿ ತನಗೆ ಬಂದು ಲಕ್ಷ ರೂಪಾಯಿ ಬಂತೆಂಬ ಸುದ್ದಿಯನ್ನು ಕೇಳಿದ ಕೂಡಲೇ ಮೃತನಾದ ನಂತ! ಇದು ಮನಸ್ಸನ್ನು ಹದ್ದಿನಲ್ಲಿಟ್ಟುಕೊಳ್ಳಲಾರದುದರಿಂದ ಉಂಟಾದ ದುಪ್ಪಳವು. ತಾಳ್ಮೆಯಿಲ್ಲದಿದ್ದರೆ ಯಾವ ಕೆಲಸವೂ ನಡೆಯುವುದಿಲ್ಲ. ಏನಾ ದರೂ ಅಚಾತುರವು ನಡೆದುಹೋದರೆ ಅದನ್ನೇ ನೆನಸಿಕೊಂಡು ಸರದಾ ಹಲುಬುತ್ತಿರಬಾರದು ಮಾರಿಹೋದುದಕ್ಕೆ ಅಥವಾ ಅಸಾಧ್ಯವಾದುದಕ್ಕೆ ಚಿಂತಿಸಿಫಲವೇನು ? ವಕಾಲಕ್ಕೆ ಏನು ನಡೆಯುವುದೋ ಅದನ್ನು ಸಹಿ ಸಿಕೊಳ್ಳದೆ ಕೋಪತಾಪಗಳಿಗೆ ಒಳಗಾಗಿನಡೆದರೆ-' ಘೋಪತಾಪತಂದೀತು, ತಾಪಬ್ರಹ್ಮಹತ್ಯ ತಂದೀತು ' ಎಂಬಂತೆ ಅನೇಕ ಅನರ್ಥಗಳು ನಡೆದಾವು. ಇತರರಿಗೂ ಬಹಳ ಹಿಂಸೆಯಾದೀತು. ಆದುದರಿಂದ ಯಾರೂ ನನ್ನ ಹತ್ತಿರ ಸೇರುವುದಿಲ್ಲ. ಮತ್ತು ಎಲ್ಲರೂ ನಮ್ಮನ್ನು ದ್ವೇಷಿಸುವರು (12) ಸತ್ಯ. ನಡತೆಯೆಂಬ ಕಟ್ಟಡಕ್ಕೆ ಸತ್ಯವೇ ಮೂಲಾಧಾರವಾದ ಅಸ್ತಿವಾರವು. ಇದೊಂದಿಲ್ಲದಿದ್ದರೆ ಯಾವ ಇತರ ಸುಗುಣಗಳಿದ್ದರೂ ವೈರ್ಥವೇ ಆಗಿ ಲೋಕದಲ್ಲಿ ಬಾಳುವುದೇ ಕಷ್ಟವಾಗುವುದು. ಇದ್ದುದನ್ನು ಇದ್ದಂತೆಯೇ ಹೇಳತಕ್ಕುದೇ ಸತ್ಯವೆನಿಸುವುದು, ಆಡಿದಮಾತು ಬರೆದುಕೊಟ್ಟ ಪತ್ರಕ್ಕಿಂತ ಮುಖ್ಯ ಕಂಡದುದನ್ನು ಕಂಡಂತೆಯೇ ಹೇಳಬೇಕಾದಾಗ ಸ್ವಲ್ಪಭಾಗ ನಿಜವನ್ನು ಹೇಳಿ ಉಳಿದಭಾಗವನ್ನು ಮರೆಮಾಚುವುದು ಕೂಡ ಅಸತ್ಯವೇ.