ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ನಾವು ಯಾವುದಾದರೊಂದು ವಿಷಯದಲ್ಲಿ ಒಬ್ಬರಿಗಿಂತ ಮೇಲಾಗಿದ್ದರೆ ಇನ್ನೊಬ್ಬರು ಅದೇ ವಿಷಯದಲ್ಲಿ ಅಥವಾ ಬೇರೆ ವಿಷಯದಲ್ಲಾದರೂ ನಮಗಿಂತಲೂ ಮೇಲಾಗಿರುವುದುಂಟು. ನಿಗರಿ ತ್ಪದ ಜತೆಯಲ್ಲಿ ಒಳ್ಳೆಯ ತಿಳಿವಳಿಕೆಯ ಇದ್ದೇ ಇರು ತದೆ. ತನ್ನನ್ನು ಮಾರಿಸಿದವರು ಅನೇಕರಿರಬಹುದು ಎಂಬ ಜ್ಞಾನವೇ ಇದಕ್ಕೆ ದೃಷ್ಟಾಂತವಾಗಿದೆ. ತಿಳಿಗೇಡಿಗಳಾದವರು ತಮಗಿಂತ ಕೀಳಾಗಿರುವ ವರನ್ನು ನೋಡಿ ತಾವೇ ಮೇಲೆಂದು ಹಿಗ್ಗಿ ಕೊಳ್ಳುತ್ತ ಅಹಂಕಾರಪಡು ವರು, ಮತ್ತು ತಮಗೆ ತಕ್ಕ ಕಾಲದಲ್ಲಿ ದೊರೆತಿರುವ ಅನುಕೂಲ್ಯ ಕಾಗಿ ಸಂತೋಷಪಡುವರೆ ಹೊರತು ಮುಂದೆ ಯಾವರೀತಿಯಲ್ಲಿ ನಡೆದರೆ ಇನ್ನೂ ಅಭಿವೃದ್ಧಿಗೆ ಬರಬಹುದು ಎಂಬ ಯೋಚನೆಯನ್ನೇ ಮಾಡುವು ದಿಲ್ಲ. ತಾವು ಮುಂದೆ ಇನ್ನೂ ತಿಳಿಯಬೇಕಾದದು ಎಷ್ಟೋ ಉಂಟು ಎಂದು ಭಾವಿಸಿ ನಡೆಯುವುದೇ ನಿಗರಿ ತವು. ಸರ್ ಐಸಕ್ ನ್ಯೂರ್ಟ ಎಂಬಾತನೂ ವರಕವಿಯಾದ ಕಾಳಿದಾಸನ ನಿಗರಿಗಿಳಂಬುದಕ್ಕೆ ಅವರ ಗ್ರಂಥಗಳಲ್ಲಿ ರತಕ್ಕೆ ಅಂಶಗಳೇ ಸಾಕ್ಷಿಯಾಗಿವೆ. --ಮೂಢನಾದ ನಾನು ಒಳ್ಳೆಯ ಕವಿಯೆಂಬ ಖ್ಯಾತಿಯನ್ನು ಪಡೆಯಬೇಕೆಂದು ಯತ್ನಿಸುತ್ತಿರು ವುದು, ಎತ್ತರವಾದವನಿಗೆ ಎಟಕಿಸತಕ್ಕೆ ಹಣ್ಣಿಗೆ ಒಬ್ಬ ಕುಳ್ಳನು ಆಸೆ ಪಟ್ಟು ಕೈಯೆತ್ತಿಕೊಂಡು ಅಪಹಾಸ್ಯಕ್ಕೆ ಗುರಿಯಾಗುವಂತಿದೆ ಎಂದು ಕಾಳಿದಾಸನ ರಘುವಂತ ಗ್ರಂಥದಲ್ಲಿ ಹೇಳಿ ತನ್ನ ನಿಗರಿತ್ವವನ್ನು ವ್ಯಕ್ತ ಪಡಿಸಿಕೊಂಡಿರುವನು. ಹಿಂದೆ ಫ್ರೆಂಚ್ ದಳಪತಿಯಾಗಿದ್ದ ನೆಪೋಲಿರ್ಯ ನಿಗೂ ಇಂಗ್ಲೀಷರಿಗೂ ಘೋರ ಯುದ್ಧವು ನಡೆದಾದ ಇಂಗ್ಲೀಷರ ನಾವಿಕ ಸೈನ್ಯಾಧಿಪತಿಯಾಗಿ ಅದ್ಭುತವಾದ ಸಾಹಸವನ್ನು ಮಾಡಿ ಕಡೆಗೆ ಗುಂಡಿನ ಏಟಿನಿಂದ ಸಾಯುವಾಗ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂದು ನೆಲ್ಬನ್ನು ಹೇಳಿರುವುದೂ ಕೇವಲ ಶ್ಲಾಸ್ಯವಾಗಿದೆ. -