ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆವಳಿ ಧಿಯತಮಗೇ ಸಂಭವಿಸಿದ್ದರೆ ಹೇಗೋ ಅದಕ್ಕಿಂತಲೂ ಹೆಚ್ಚಾಗಿ ಸಂಕಟ ಪಡುವರು. ಪುತ್ರಶೋಕವನ್ನು ತಾಳಲಾರದೇ ಧಶರಥ ಮೊದಲಾದ ಎಷ್ಟೋ ಜನರು ಪಣವನ್ನು ಕೂಡ ಕಳೆದುಕೊಂಡಿರುವರು. ಹೀಗೆ ಮಾತಾಪಿತೃುಗ ೪ಗೆ ಮಕ್ಕಳ ವಿಷಯದಲ್ಲಿರುವ ಪ್ರೀತಿ ಮರಣವನ್ನು ಮಕ್ಕಳು ಎಂಥ ಪ್ರ) ತ್ಯುಪಕಾರಗಳಿಂದ ತಾನೆ ತೀರಿಸುವುದಕ್ಕೆ ಸಾಧ್ಯವಾದಿತು! ಆದರೆ ಹೀಗೆಂದು ಏನೂಮಾಡದೆ ಸುಮ್ಮನಿರಬಹುದೆ? ನಮ್ಮಿಂದ ಆಗುವಮಟ್ಟಿಗೂ ಭಕ್ತಿಶ್ರದ್ಧೆ ೪ಗಂದ ಸೇವೆಸತ್ಕಾರಗಳನ್ನು ಮಾಡುತ್ತ ವಿನಯವಿಧೇಯತೆಗಳಿ೦ದ ಕಾಣು ತಿರಬೇಕಲ್ಲದೆ ಮುಖ್ಯವಾಗಿ ಅವರನ್ನು ಮುಪ್ಪಿನಲ್ಲಿ ಚೆನ್ನಾಗಿ ಆದರಿಸ ಬೇಕು. , ಮತ್ತು ಅವರಿಂದ ನನಗೆ ಉಂಟಾಗಿರತಕ್ಕ ಉಪಕಾರಗಳನ್ನು ಸದಾ ಸ್ಮತಿಪಥದಲ್ಲಿಟ್ಟು ಕೊಂಡಿರಬೇಕು. ಹೀಗೆಯೇ ವಿದ್ಯಾಗುರುಗಳು ವಿದ್ಯಾರ್ಥಿಗಳ ಕೃತಜ್ಞತೆಗೆ ಅರ್ಹರು. ಇವರು ಶಿಷ್ಯರಿಗೆ ಉತ್ತಮವಾದ ತಿಳಿವಳಿಕೆ ಮುನ್ನುಂಟುಮಾಡುತ್ತ ಬುದ್ಧಿ ಶಕ್ತಿಗಳನ್ನು ಹೆಚ್ಚಿಸಿ ಅವರ ಅಜ್ಞಾನವನ್ನು ತೊಲಗಿಸಲು ವಿಶೇಷವಾಗಿ ಶ್ರಮಪಡುವರು. ಮತ್ತು ಅವರಿಗೆ ಮೇಲಾದ ಶಿಕ್ಷಣವನ್ನೂ ಕೊಟ್ಟು ಅವರ ನಡತೆಯನ್ನು ತಿದ್ದಿ ಕ್ರಮಪಡಿಸುವರು. ಹೀಗೆ ಇವರು ಮಾಡಿ ಕೊಟ್ಟ ಸಂಸ್ಕರವು ಶಿಷ್ಯನ ಜೀವಮಾನದಲ್ಲೆಲ್ಲಾ ಅವನಿಗೂ ಮತ್ತು ಅವನಿಂದ ಇತರರಿಗೂ ಫಲಕಾರಿಯಾಗುವದಲ್ಲದೆ ಅನಂತರವೂ ಅವನ ಆತ್ಮಕ್ಕೆ ಕೂಡ ಸದ್ದತಿಯನ್ನುಂಟುಮಾಡಿಕೊಡುವುದು. ಹೀಗೆ ಇಹಪರ ಗಳೆರಡರಲ್ಲಿಯ ನಮ್ಮ ಶ್ರೇಯಸ್ಸಿಗೆ ಕಾರಣಭೂತರಾದ ಗುರುಗಳಲ್ಲಿ ಕೃತಜ್ಞರಾಗಿರಬೇಕಾದುದೇನತಿಶಯ ! ಇದರಂತೆಯೇ ಇತರ ಉಪಕಾರಿಗ ಳಲ್ಲರ ವಿಷಯದಲ್ಲಿಯೂ ಕೃತಜ್ಞತೆಯಿಂದ ನಡೆಯಬೇಕಾದುದು ಆ 9 * ವಶ್ಯಕ.