ಪುಟ:ಕರ್ನಾಟಕ ಗ್ರಂಥಮಾಲೆ ೯೮ - ನಡೆವಳಿ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆy ಕರ್ಣಾಟಕ ಗ್ರಂಥಮಾಲೆ ಮನಸ್ಸಿನಲ್ಲಿ ಮಾತ್ರ ಕೃತಜ್ಞತಾಭಾವವನ್ನು ಪಡೆದುಕೊಂಡಿರು ವುದಕ್ಕಿಂತಲೂ ಅದನ್ನು ಪ್ರಕಟಗೊಳಿಸುವುದು ಮೇಲು. ಹಾಗೆ ವ್ಯಕ್ತ ಪಡಿಸದಿದ್ದರೆ ಒರಟುತನವೆನ್ನುತ್ತಾರೆ. ಉಪಕಾರಮಾಡಿದವರಲ್ಲಿ ನಮಗೆ ಇರತಕ್ಕ ಪ್ರತಿಯನ್ನು ಅಥವಾ ಭಕ್ತಿಯನ್ನು ಪ್ರಕಟಿಸುವುದಕ್ಕೋಸ್ಕರ ಮನಃಪೂರಕವಾಗಿ ಅವರನ್ನು ವಂದಿಸುವದು. ಸಾಧ್ಯವಾದಮಟ್ಟಿಗೂ ಪ್ರತ್ಯುಪಕಾರಮಾಡುವುದು. ಹೀಗೆ ಯಾವುದಾದರೊಂದು ಅಥವಾ ಹಲವು ವಿಧಗಳಲ್ಲಿ ಅವರಿಗೆ ಹಿತವನ್ನು ಆಚರಿಸುವುದು ಕೃತಜ್ಞತೆಯ ಕಾರ್ಯಗಳು. ಮನಸ್ಸಿನಲ್ಲಿ ನೆಲೆಗೊಂಡ ಕೃತಜ್ಞತೆಯನ್ನು ಮೇಲೆಕಂಡಂಥ ಕಾರಗಳ ಅಥವಾ ಮಾತುಗಳ ಮೂಲಕವಾದರೂ ವ್ಯಕ್ತಪಡಿಸದೆ ತಟಸ್ಥ ರಾಗಿರುವುದು ಒಳ್ಳೆಯದಲ್ಲ. ಕಡೆಗೆ ಯಾರೊಬ್ಬರಿಂದ ಯಾವುದೆಂದು ಅಲ್ಪಸಹಾಯವು ದೊರೆ ತರೂ ಅವರಿಗೆ ಬಂದು ಉಪಚಾರೋಕ್ತಿಯನ್ನಾದರೂ ಸಮರ್ಪಿಸಬೇಕು. ಪಾಶ್ಚಾತ್ಯರಲ್ಲಿ ಸರತ ಈ ವಿಷಯವು ಚೆನ್ನಾಗಿಯೂ ಹೆಚ್ಚಾಗಿಯ ಬಳ ಕೆಯಲ್ಲಿದೆ. ಯಾವ ಅಲ್ಪಮನುಷ್ಯನು ಎಂಥ ಸಣ್ಣ ಸಹಾಯವನ್ನೇ ಮಾಡಿ ದರೂ ಅವನಿಗೆ ಅದಕ್ಕಾಗಿ ಥ್ಯಾಂಕ್ಸ್(Thanks) ಎಂಬ ಒಂದು ಉಪಚಾರದ ನುಡಿಯನ್ನಾದರೂ ಆಡದೆ ಇರುವುದಿಲ್ಲ. ಕರ್ಣನು ತನ್ನೊಡೆಯನಾದ ದುದ್ಯೋಧನನಿಗೂ ಬಹಮನೀರಾಜ್ಯ ಸ್ಥಾಪಕನಾದ ಮಹಮ್ಮದೀಯನುತನ್ನ ದಣಿಯಾದ ಬ್ರಾಹ್ಮಣರಿಗೂ ಎಷ್ಟು ಮುಟ್ಟಿಗೆ ಕೃತಜ್ಞನಾಗಿದ್ದರೆಂಬುದು ಅಗತ್ಯ ಸಿದ್ದವಾಗಿಯೇಇದೆ. ಯುದ್ಧದಲ್ಲಿ ಜಯಶೀಲರಾದರಾಜಪುತ್ರರೂ ಕಾಳಿದಾಸಮೊದಲಾದಕವಿಶಿರೋಮಣಿಗಳ ಮನು ಯಾಜ್ಞವಲ್ಕ ಮೊದ ಉಾದ ಶಾಸ್ತ್ರಕಾರರೂ ಪ್ರಜೆಗಳ ಸ್ವಾತಂತ್ರಕ್ಕೂ ನ್ಯಾಯಕ್ಕೂ ಹೊಡೆ ಜಡಿದ ಇತರ ಮಹಾನುಭಾವರುಗಳೂ ನಮ್ಮ ಹಿಂದೂ ದೇಶದ ಸಮಸ್ತ ಚಿಗಳ ಕೃತಜ್ಞತಗೂ ಅರ್ಹರು. ಕೃತಜ್ಞತೆಯು ವಾಕ್ಯಗಳಿಂದ ಮಾ