ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಗ್ರಂಘಮತಿ wwwmmmmmmmmmmmmmmmmmmmm ಕ್ಷೇಪ ಮಾಡುವುದು ನಮ್ಮಲ್ಲಿ ವಿಶೇಷ ರೂಢಿಯಲ್ಲಿಲ್ಲವಾದರೂ ಕೇವಲ ನಾಗರಿಕತೆಯುಳ್ಳ ಶಾಕ್ಲಾ ರಾಜ್ಯಗಳಲ್ಲಿ ಬಳಕೆಯಲ್ಲಿವೆ. ಈ ವಿಷಯ ದಲ್ಲಿ ರಿಚರ್ಡ್ಡಿ, ಎಂಬ ಪ್ರಸಿದ್ಧನಾದ ಒಬ್ಬ ಪಂಡಿತನು ಈಗ್ಗೆ 500ವರ್ಷ ಗಳಿಗೆ ಮೊದಲೇ ಈ ರೀತಿಯಾಗಿ ಅಭಿಪ್ರಾಯಪಟ್ಟಿರುವನು-ಏನೆಂದರೆ ಪುಸ್ತಕಗಳು ಸರೋgತ್ತಮವಾದ ಉಪಾಧ್ಯಾಯರು, ಇವರು ಕೋಪಿ ಸಿಕೊಳ್ಳದೆಯ ಬೆತ್ತ ಮೊದಲಾದುವುಗಳಿಂದ ಶಿಕ್ಷಿಸದೆಯ ಸಂಬಳ ವನ್ನು ಅಥವಾ ಅನ್ನವಸ್ತುದಿಗಳನ್ನು ಕೇಳದೆಯ ಒಳ್ಳೆಯ ವಿಷಯ ಗಳನ್ನು ತಿಳಿಯಿಸುವರು, ನಾವಾಗಿ ಅವರ ಸಹಾಯವನ್ನು ಅಪೇಕ್ಷಿಸಿ ದರೆ ಸಾಕು, ಅವರೇನೂ ಸದಾ ಎಚ್ಚರವಾಗಿಯ ಸಿದ್ದವಾಗಿಯ ಇರುವರು, ಇವರು ಮೌನವಾಗಿದ್ದೇ ನಮಗೆ ಬೋಧಿಸಬಲ್ಲರು, ನಮಗೆ ತಿಳಿಯದ ಅಂಶಗಳನ್ನು ಎಷ್ಟು ಸಲ ಕೇಳಿದರೂ ಅವರು ಬೇಸರಗೊಳ್ಳುವು ದಿಲ್ಲ, ಯಾವುದನ್ನೂ ಮುಚ್ಚಿಡದೆ ವ್ಯಕ್ತವಾಗಿ ತಿಳಿಯಿಸುವರು. ನಾವು ತಗಿ ತಿಳಿದುಕೊಂಡರೆ ಅವರು ಅಸಮಾಧಾನದಿಂದ ಗೊಣಗುಟ್ಟುವು ದಿಲ್ಲ.' ಇಂಥ ಪುಸ್ತಕಗಳುಳ್ಳ ಪುಸ್ತಕಭಂಡಾರವು ನವನಿಧಿಗಳ ಬೊಕ್ಕಸ ಕ್ಕಿಂತಲೂ ಬೆಲೆಯಾದುದು, ಇದಕ್ಕೆ ಸಮಾನವಾದುದು ಯಾವುದೂ ಇಲ್ಲ. - ನಿಶ್ಚಯಾಂಶಗಳು, ಸುಖ, ಕೌಶಲ, ಶಾಸ್ತ್ರ ವಿಚಾರ, ಭಕ್ತಿ ಇಂಥ ವನ್ನು ಪಡೆಯಬೇಕೆಂಬುವರು ಪುಸ್ತಕಗಳನ್ನು ಚನ್ನಾಗಿ ಪ್ರೀತಿಸಬೇಕು. ಪುಸ್ತಕಗಳ ಪ್ರಚಾರವು ಕಡಿಮೆಯಾಗಿದ್ದ ಅಷ್ಟು ಹಿಂದಿನ ಕಾಲದಲ್ಲಿ ಕಂಡ ಈ ವಿಷಯವು ಅಷ್ಟು ಶ್ಲಾನ್ಯವಾಗಿರುವಲ್ಲಿ ಈಗ ಅದನ್ನು ಕುರಿತು ಎಷ್ಟು ಹೇಳಿದರೂ ತೀರದು. ನಮ್ಮಲ್ಲಿ ಪಕ್ಷದ ಪುಸ್ತಕಗಳು ಓಲೆಯ ರಿಗಳ ರೂಪದಲ್ಲಿರುತ್ತಿದ್ದುದರಿಂದ ಅವನ್ನು ಹಿಡಿದುಕೊಳ್ಳುವುದಕ್ಕೂ ಓದು ವುದಕ್ಕೂ ಓದುವುದಕ್ಕಾಗಿ ಸಿಕ್ಕಿದ ಕಡೆಗೆ ತಗೆದುಕೊಂಡು ಹೋಗುವು ದಕ್ಕೂ ಸೌಲಭ್ಯವಿರಲಿಲ್ಲ, ಈಗಿನವಾದರೂ ಬಹಳ ಅನುಕೂಲವಾಗಿರು ವುವು. ಪೂರ ದಲ್ಲಿ ಪುಸ್ತಕಗಳನ್ನು ಕೈಬರಹದಿಂದಲೇ ಬರೆಯಬೇಕಾಗಿ ದ್ವಿತು, ಆದುದರಿಂದ ಒಂದು ಗ್ರಂಥವನ್ನು ಅನೇಕರು ಏಕಕಾಲದಲ್ಲಿ ಓದು ಪುದಕ್ಕೆ ಆಗುತ್ತಿರಲಿಲ್ಲ. ಇತ್ಯಾದಿ ಕಾರಣಗಳಿಂದ ಅವಕ್ಕೆ ಕಯವು ಹೆಚ್ಚಾಗಿದ್ದಿತು. ಬಡವರಂತು ಅವನ್ನು ಕೊಳ್ಳುವುದು ಅಸಭ್ಯವಾಗಿ