ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ

`ತು, ಈಗ ಅಜ್ಜಿ ನಲ್ಲಿ ಒಂದೊಂದು ಪುಸ್ತಕಗಳನ್ನು ಲಕ್ಷಾಂತರ ಪ್ರತಿ ಗಳಾಗಿ ಮುದ್ರಿಸಬಹುದು. ಇದರಿಂದ ಹಿಂದಿನ ಕಷ್ಟಗಳಲ್ಲಾ ತನ್ನಿ ಎಂಥ ಬಡವರಿಗೂ ಅನುಕೂಲವಾಗಿದೆ, ಪೂರದಲ್ಲಿ ಗ್ರಂಥಪ್ರಚಾರಕ್ಕೆ ಅಪ್ಪು ಕಷ್ಟವಾಗಿದ್ದುದರಿಂದ ಹೆಚ್ಚು ಗ್ರಂಥಗಳು ಹುಟ್ಟುವುದಕ್ಕೆ ಅವಕಾಶವಿದೆ ಅಲ್ಲ, ಈಗ ಈ ಸೌಕಯ್ಯಗಳು ಹೆಚ್ಚಾಗಿರುವುದರಿಂದ ಎಷ್ಟೋ ಸಹಸ್ರವಿ ಷಯಗಳ ಮೇಲೆ ಗ್ರಂಥಗಳು ಹುಟ್ಟಿವೆ. ಅಲ್ಲದೆ ಪಚೀನಕಾಲದಲ್ಲಿದ್ದು ಕೈಬಿಟ್ಟು ಹೋಗಿದ್ದ ಅನೇಕ ಶಾಸ್ತ್ರ ವಿಷಯಗಳು, ಚರಿತ್ರೆ ಇತ್ಯಾದಿಗಳ «ಲ್ಲಾ ಹುಡುಕಿ ಶೋಧಿಸಿ ಮುದ್ರಿಸುತ್ತಿದ್ದಾರೆ. ನಮ್ಮ ಕನ್ನಡ ಭಾಷೆಯ ನಾಡುವ ಜನಗಳ ಸಂಖ್ಯೆಯು ಕಡಿಮೆಯಾದುದರಿಂದಲೂ ಅವರಲ್ಲೂ ವಿದ್ಯಾವಂತರು ಬಹಳ ಸ್ಪಲ್ಪ ಹನವಾದುದರಿಂದಲೂ ವಿದ್ಯಾವಂತರಲ್ಲೂ ಅನೇಕರು ಪ್ರಪಂಚದಲ್ಲೆಲ್ಲಾ ಹರಡಿರುವ ಇಂಗ್ಲಿಷ್ ಭಾಷೆಯನ್ನೇ ಓದಿ ಅದರಿಂದಲೇ ಸಮಸ್ತ ವಿಷಯಗಳನ್ನೂ ತಿಳಿದುಕೊಳ್ಳುತ್ತಿರುವರಾಗಿ ತಮ್ಮ ಮಾತೃ ಭಾಷೆಯನ್ನು ಕೈಬಿಟ್ಟಿರುವುದರಿಂದ ನಾವು ಈ ವಿಷಯದಲ್ಲಿ ಬಹಳ ಹಿಂದಾಗಿದ್ದೇವೆ, ಪೂರದಿಂದ ಇರುವ ಕನ್ನಡ ಗ್ರಂಥಗಳು ಭಾಷಣ ಚಾತುರಕ್ಕೂ ವರ್ಣನವೈಖರಿಗೂ ಮಾತ್ರ ಹೆಚ್ಚು ಅವಕಾಶವನ್ನು ಕೊಟ್ಟಿರುವುವು. ಈ ಕಾಲದ ನಾಗರಿಕತೆಗೂ ಶಾಸ್ತ್ರ ಪರಿಚಯಕ್ಕೂ ಹಲವು ಬಗೆಯ ವಿನೋದಗಳಿಗೂ ಸತ್ಕಾಲಕ್ಷೇಪಕ್ಕೂ ಅನುಕೂಲವಾದ ಗ್ರಂಥ ಗಳು ನಮ್ಮಲ್ಲಿ ಇನ್ನೂ ಬಹಳ ಮಟ್ಟಿಗೂ ಆವಶ್ಯಕವಾಗಿವೆ. ಈಚೆಗೆ ಕೆಲವು ಪಂಡಿತರು ಈ ವಿಧವಾದ ಗ್ರಂಥಪ್ರಚಾರಕ್ಕಾಗಿ ಸಾಹಸಪಡುತ್ತಿರು ವರು, ಮಾಸಪತ್ರಿಕೆಗಳು ಪೂತಕಾಲದ ಮತ್ತು ಈಗಿನ ಗ್ರಂಥಗಳಿಗೆ ಉದಾರಾಶ್ರಯವನ್ನು ಕೊಡುತ್ತಿರುವುವು. ಇಂಗ್ಲಿಷ್ ಕನ್ನಡಗಳರಡನ್ನು ತಿಳಿದವರು ಇಂಗ್ಲಿಷಿನಲ್ಲಿರುವ ಗ್ರಂಥಗಳ ಸಾರವನ್ನು ನಮ್ಮ ಮತ ಭಾಷೆಗೆ ತರಲು ಈಗೀಗ ಯತ್ನಿಸುತ್ತಿದ್ದಾರೆ. ಸತ್ಕಾರದ ಪ್ರೋತ್ಸಾಹವು ಕೆಲವರಿಗೆ ಅಲ್ಪಸ್ವಲ್ಪವಾಗಿ ದೊರೆಯುತ್ತಿದೆ. ಜನಗಳಿಗೆ ಜ್ಞಾನಗ್ರಾಸವನ್ನು ಕಟ್ಟು ಉಪಕರಿಸುವ ಈ ಪುಸ್ಮ ಕಭಂಡಾರಗಳು, ವಾಚಕವಂದಿರಗಳಿಗೂ ವಸ್ತುಪ್ರದರ್ಶನಶಾಲೆಗಳಿಗೂ, ವಿದ್ಯಾಶಾಲೆಗಳಿಗೂ ವರ್ತಮಾನಪತ್ರಿಕೆಗಳಿಗೂ ಒಟ್ಟು ದೇಶಕ್ಕೆಲ್ಲಾ ಲಾಭ