ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೧೮೩ Mwwws - ಸ್ವದೇಶದ ವಿಷಯದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿಯ ಬೆಂಕಿ ಯ ಅಥವಾ ನೀರಿನ ಅನಾಹುತ, ಕ್ಲಾವು, ಭೂಕಂಪ, ಬಿರುಗಾಳಿ, ಯುದ್ಧ ಮೊದಲಾದವುಗಳಿಂದ ಏನಾದರA ಕಷ್ಟನಷ್ಟಗಳು ಸಂಭವಿಸಿದುದನ್ನು ತಿಳಿ ದರೂ ನಮ್ಮಿಂದ ಸಾಧ್ಯವಾಗುವಷ್ಟು ಸಹಾಯವನ್ನಾದರೂ ಮಾಡಿ ನಮ್ಮ ಅನುತಾಪವನ್ನು ತೋರಿಸಬೇಕು, ರೈಲುರಸ್ತೆಗಳು ಬಂಡಿಯಮಾರ್ಗಗಳು, ವರ್ತಮಾನಪತ್ರಿಕಗಳು, ಅಂಚೆ, ಇಂಥ ಸೌಕಶ್ಯಗಳು ಹೆಚ್ಚುತ ಬಂದಂತ ಲಾ ಜನಗಳು ಪ್ರತ್ಯಕ್ಷವಾಗಿ ಅಥವಾ ಬರವಣಿಗೆಯ ಮೂಲಕವಾಗಿ ಪರಸ್ಪರ ಅಭಿಶಯಗಳನ್ನು ಗ್ರಹಿಸಿಕೊಂಡು ಒಬ್ಬರ ಕಷ್ಟ ಸುಖಗಳನ್ನು ಮತ್ತೊಬ್ಬರು ತಿಳಿದು ಆಯಾ ಕಾಲದೇಶಗಳಿಗನುಗುಣವಾಗಿ ನಡೆದು ದೇಶಾ ಭಿಮಾನವನ್ನು ತೋರ್ಪಡಿಸುವುದಕ್ಕೆ ಬಹಳ ಅನುಕೂಲ, ಎಲ್ಲರೂ ಸ್ವಲ್ಪಸ್ವಲ್ಪ ಕಷ್ಟಪಟ್ಟರೂ ಒಟ್ಟು ಹೆಚ್ಚು ಫಲವನ್ನು ಆನುಭವಿಸುವು ದಕ್ಕೆ ದೇಶಾಭಿಮಾನವು ತುಂಬ ಸಹಾಯಕ. ಉದಾ-ಯಾವುದೋ ಒಂದು ದೊಡ್ಡ ಸಹಾಯವಾಗಬೇಕೆಂದು ಅರ್ವಯನ್ನು ಬರೆದು ಸಾರಕ್ಕೆ ಕಳುಹಿಸಬೇಕಾಗಿರುವಲ್ಲಿ ಆ ಅರ್ಜೆಗೆ ರುಜು ಹಾಕುವಷ್ಟು ಮಟ್ಟಿನ ಅಲ್ಪಾಯಾಸವನ್ನು ಮಾತ್ರ ಎಲ್ಲರೂ ವಹಿ ಸುವುದು ಹೊರತು ಮತ್ತೆ ಯಾವ ವಿಧದಲ್ಲಿಯೂ ಯಾರೂ ಏನೂ ಕಪ್ಪಪ 'ಡಬೇಕಾಗಿರುವುದಿಲ್ಲವೆಂದು ಭಾವಿಸೋಣ, ಆದರೂ ಅದರಿಂದ ಹೆಚ್ಚಾದ ಮತ್ತು ಉತ್ತಮವಾದ ಫಲವಾಗುವ ಸಂಭವವೇನೂ ಉಂಟು. ಯಾವ ನಿಜವಾದ ದೇಶಾಭಿಮಾನಿಗಳೂ ಅವರೇ ನಿಜವಾದ ದೇಶೋದ್ದಾರಕರು ಅವರೇ ಸ್ವರಾಜ್ಯ ವಾತೃವಿಗೆ ಪರಸಪುತ್ರರು, ಇಂಥವರನ್ನು ಪಡೆದಿರುವ ದೇಶವೇ ಪುಣ್ಯಭೂಮಿಯು.